ಕೆ ಪುಟ್ಟಸ್ವಾಮಿ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವರಗೇರಹಳ್ಳಿಯವರು. ಕೆಲಕಾಲ ಪತ್ರಕರ್ತ. ನಂತರ ನಾನಾ ಇಲಾಖೆಗಳಲ್ಲಿ ಅಧಿಕಾರಿ. ಆದರೆ, ಅವರು ಗುರುತಿಸಿಕೊಂಡಿದ್ದು ಮಾತ್ರ ಸಿನಿಮಾ ಮತ್ತು ಪ್ರಕೃತಿ ಪ್ರೀತಿಯಿಂದ.
ಅಪರೂಪದ ಕನ್ನಡ ಸಿನಿಮಾಗಳ ಕುರಿತ ಅಪೂರ್ವ ಮಾಹಿತಿಗಳನ್ನು ಒಳಗೊಂಡ ಅವರ ‘ಸಿನಿಮಾ ಯಾನ’ ಕೃತಿಗೆ ಪ್ರತಿಷ್ಠಿತ ‘ಸ್ವರ್ಣ ಕಮಲ’ ಪ್ರಶಸ್ತಿ ಸಿಕ್ಕಿದೆ.
ಚಾರ್ಲ್ಸ್ ಡಾರ್ವಿನ್ನ ಜೀವಸಂಕುಲಗಳ ಉಗಮ ಕೃತಿಯನ್ನು ಕನ್ನಡಕ್ಕೆ ತಂದದ್ದು ಮತ್ತು ಕೃಪಾಕರ-ಸೇನಾನಿ ಜೊತೆಗೂಡಿ ‘ಜೀವಜಾಲ’ ಕೃತಿ ರೂಪಿಸಿದ್ದು ಮಹತ್ವದ ಕೆಲಸ.
ಪುಟ್ಟಸ್ವಾಮಿ ಅವರ ಮಾತೆಂದರೆ, ಜಾನಪದ, ಜನಜೀವನಗಾಥೆ, ಚರಿತ್ರೆ, ಜೀವಶಾಸ್ತ್ರ, ಸಿನಿಮಾ ಸಂಗತಿಗಳನ್ನು ಬೆಸೆದುಕೊಂಡ ಹದವಾದ ಪಾಕ. ಈ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಸ್ವಾರಸ್ಯಕರ ಕಥಾನಕಗಳನ್ನು ಹಂಚಿಕೊಂಡಿದ್ದಾರೆ.
ಈ ಆಡಿಯೊ ಕೇಳಿದ್ದೀರಾ?: ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?