ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿ ಮಾಡಬೇಕು, ಪ್ರಧಾನಿಯಲ್ಲ; ವಿಪಕ್ಷಗಳ ಟೀಕೆ

Date:

Advertisements

ಹೊಸ ಸಂಸತ್ ಭವನ ನಿರ್ಮಾಣ ಪ್ರಧಾನಿಯವರ ಖಾಸಗಿ ಸ್ನೇಹಿತರ ಹಣದಿಂದ ನಡೆದಿಲ್ಲ, ಇದು ಸಾರ್ವಜನಿಕ ಹಣ ಬಳಸಿದ ಸರ್ಕಾರಿ ಯೋಜನೆಯಾಗಿರುವ ಕಾರಣ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನದ ಘನತೆ ಉಳಿಸಿಕೊಳ್ಳಬೇಕು ಎಂದು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ.

ದೇಶದ ಹೊಸ ಸಂಸತ್ ಭವನ ಪ್ರಧಾನ ಮಂತ್ರಿ ಅಥವಾ ಬಿಜೆಪಿಯ ಸ್ವಂತ ಯೋಜನೆಯಲ್ಲ, ಅದು ಸರ್ಕಾರದ ಯೋಜನೆಯಾಗಿರುವ ಕಾರಣ ರಾಷ್ಟ್ರಪತಿಯವರೇ ಅದನ್ನು ಉದ್ಘಾಟಿಸಬೇಕು ಎನ್ನುವ ವಿಪಕ್ಷಗಳ ವಾದವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ (ಮೇ 21) ಬೆಂಬಲಿಸಿದ್ದಾರೆ.

ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಬಗ್ಗೆ ಟ್ವಿಟರ್‌ನಲ್ಲಿ ಟೀಕಿಸಿರುವ ರಾಹುಲ್ ಗಾಂಧಿ, “ಹೊಸ ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿಯವರು ಮಾಡಬೇಕೇ ವಿನಾ ಪ್ರಧಾನಿಯಲ್ಲ” ಎಂದು ಹೇಳಿದ್ದಾರೆ.

Advertisements

ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ಹೊಸ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭೆಯ ಕಾರ್ಯಾಲಯ ಗುರುವಾರ ಘೋಷಿಸಿತ್ತು. “ಆತ್ಮನಿರ್ಭರ ಭಾರತದ ನಿರ್ಮಾಣವನ್ನು ಸೂಚಿಸುವ ಹೊಸ ಸಂಸತ್ ಭವನದ ನಿರ್ಮಾಣ ಪೂರ್ಣಗೊಂಡಿದೆ” ಎಂದು ಕಾರ್ಯಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.

ವಿವಾದಾತ್ಮಕ ಹಿಂದುತ್ವವಾದಿ ನಾಯಕ ವಿ ಡಿ ಸಾವರ್ಕರ್ ಜನ್ಮದಿನಾಚಣೆ ಅಂಗವಾಗಿ ಮೇ 28ರಂದು ಬಿಜೆಪಿ ಸರ್ಕಾರ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವುದು ದೇಶದ ಸಂಸ್ಥಾಪಕರಿಗೆ ತೋರಿದ ಅತಿದೊಡ್ಡ ಅಗೌರವ ಎಂದು ಕಾಂಗ್ರೆಸ್ ಇದಕ್ಕೆ ಮೊದಲು ಟೀಕಿಸಿತ್ತು. “ನಮ್ಮ ದೇಶದ ಸಂಸ್ಥಾಪಕರಿಗೆ ದೊಡ್ಡ ಅವಹೇಳನವಾಗಿದೆ. ಗಾಂಧಿ, ನೆಹರು, ಪಟೇಲ್, ಬೋಸ್ ಮೊದಲಾಗಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ತಿರಸ್ಕರಿಸಲಾಗಿದೆ. ಡಾ ಅಂಬೇಡ್ಕರ್‌ ಅವರನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದರು.

ಇತರ ವಿಪಕ್ಷಗಳೂ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರಿಗೆ ಆಹ್ವಾನ ನೀಡದೆ ಅವಹೇಳನ ಮಾಡಿರುವ ಬಗ್ಗೆ ಟೀಕಿಸಿದ್ದವು. ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಟ್ವೀಟ್ ಮಾಡಿ, “ಗೌರವಾನ್ವಿತ ರಾಷ್ಟ್ರಪತಿಯವರು ಸಂಸದ್ ಭವನ ಉದ್ಘಾಟಿಸಬೇಕಲ್ಲವೆ? ಅದಕ್ಕಿಂತ ಹೆಚ್ಚೇನನ್ನೂ ಹೇಳಲು ಬಯಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ?: ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ

ಸಿಪಿಐ ನಾಯಕ ಡಿ ರಾಜ ಅವರೂ, “ಸ್ವಯಂ ಇಮೇಜ್ ಕುರಿತ ಹುಚ್ಚು, ಕ್ಯಾಮರಾಗಳ ಮುಂದೆ ಪೋಸ್ ಕೊಡುವಾಗ ಘನತೆ ಬಿಡುವುದು ಮತ್ತು ನಿಯಮಗಳನ್ನು ತೊರೆಯುವುದು ಮೋದಿಯವರಿಗೆ ಹೊಸತೇನಲ್ಲ. ಪ್ರಧಾನಿ ರಾಷ್ಟ್ರದ ಶಾಸಕಾಂಗದ ಮುಖ್ಯಸ್ಥರು ಮತ್ತು ಸಂಸತ್ತು ಶಾಸನಸಭೆಯ ಅಂಗ. ಹೀಗಿರುವಾಗ ರಾಷ್ಟ್ರದ ಮುಖ್ಯಸ್ಥರಾಗಿರುವ ದ್ರೌಪದಿ ಮುರ್ಮು ಅವರು ಹೊಸ ಸಂಸತ್ತನ್ನು ಉದ್ಘಾಟಿಸುವುದು ಸೂಕ್ತವೆನಿಸುತ್ತಿತ್ತು” ಎಂದು ಟ್ವೀಟ್ ಮಾಡಿದ್ದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವಾಸಿ ಅವರೂ ಟ್ವೀಟ್ ಮಾಡಿ, “ಪ್ರಧಾನಿ ಶಾಸನಸಭೆಯ ಮುಖ್ಯಸ್ಥರೇ ವಿನಾ ಆಡಳಿತವಲ್ಲ. ನಮ್ಮಲ್ಲಿ ಅಧಿಕಾರದ ಸ್ಪಷ್ಟ ಪ್ರತ್ಯೇಕತೆಯಿದೆ. ಗೌರವಾನ್ವಿತ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಸಂಸತ್ ಭವನ ಉದ್ಘಾಟಿಸಬೇಕು. ಇದನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಪ್ರಧಾನಿಯವರು ತಮ್ಮ ಸ್ನೇಹಿತರ ಖಾಸಗಿ ಹಣದಿಂದ ಸಂಸತ್ ಭವನ ನಿರ್ಮಿಸಿದಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X