2ನೇ ಮದುವೆಯಾದ ಆಶಿಷ್‌ ವಿದ್ಯಾರ್ಥಿ : ಮೊದಲ ಪತ್ನಿ ಅಸಮಾಧಾನ

Date:

Advertisements

ರೂಪಾಲಿ ಬರುವಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಆಶಿಷ್‌

ಎರಡನೇ ಮದುಯಾಗಿದ್ದಕ್ಕೆ ಟೀಕೆಗೆ ಗುರಿಯಾದ ನಟ

ಬಹುಭಾಷಾ ನಟ ಆಶಿಷ್‌ ವಿದ್ಯಾರ್ಥಿ ಗುರುವಾರ ಕೊಲ್ಕತ್ತಾದಲ್ಲಿ ಅಸ್ಸಾಂ ಮೂಲದ ರೂಪಾಲಿ ಬರುವಾ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟನ ಮದುವೆ ಸಮಾರಂಭದ ಫೋಟೋಗಳು ವೈರಲ್‌ ಆಗಿದ್ದು, ಆಶಿಷ್‌ ನಡೆಯ ಕುರಿತು ಅವರ ಮೊದಲ ಪತ್ನಿ ರಾಜೋಶಿ ಬರುವಾ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

ಆಶಿಷ್‌ ಮತ್ತು ರೂಪಾಲಿ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೆಲ್ಫೀ ಫೋಟೋ ಹಂಚಿಕೊಂಡು “ಜೀವನವೆಂಬ ಒಗಟಿನಲ್ಲಿ ನೀವು ಬಿಡಿಸಲಾಗದ ಒಗಟಾಗಬೇಡಿ” ಎಂದು ಬರೆದುಕೊಂಡಿದ್ದಾರೆ.

“ನಿಮಗೆ ಸರಿಹೊಂದುವ ವ್ಯಕ್ತಿ, ನೀವು ಅವರಿಗೆ ಎಷ್ಟು ಮುಖ್ಯ ಎಂದು ಯಾವತ್ತಿಗೂ ಕೇಳುವುದಿಲ್ಲ. ನಿಮಗೆ ನೋವುಂಟು ಮಾಡುವ ಕೆಲಸಗಳನ್ನು ಅವರು ಎಂದಿಗೂ ಮಾಡುವುದಿಲ್ಲ. ಈ ಮಾತನ್ನು ನೆನಪಿಡಿ. ನಿಮ್ಮ ತಲೆಯಲ್ಲಿ ತುಂಬಿರುವ ಅತಿಯಾದ ಆಲೋಚನೆ ಮತ್ತು ಸಂದೇಹಗಳು ಈ ಕ್ಷಣವೇ ದೂರವಾಗಲಿ, ಗೊಂದಲದಲ್ಲಿದ್ದ ನಿಮಗೆ ಸ್ಪಷ್ಟತೆ ಸಿಗಲಿ, ನಿಮ್ಮ ಬದುಕಲ್ಲಿ ಶಾಂತಿ ತುಂಬಿರಲಿ” ಎಂಬ ಬರಹಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ರಾಜೋಶಿ ಬರುವಾ ಬೆಂಗಾಲಿ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಮತ್ತು ಹಿನ್ನೆಲೆ ಗಾಯಕಿಯಾಗಿ ಹೆಸರು ಮಾಡಿದ್ದಾರೆ. 23 ವರ್ಷಗಳ ಕಾಲ ದಾಂಪತ್ಯದಲ್ಲಿದ್ದ ಆಶಿಷ್‌ ಮತ್ತು ರಾಜೋಶಿ ಇತ್ತೀಚೆಗೆ ಪರಸ್ಪರ ಒಪ್ಪಿಗೆಯಿಂದ ದೂರವಾಗಿದ್ದರು.

ಈ ಸುದ್ದಿ ಓದಿದ್ದೀರಾ? ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಹೃದಯವಂತ ಶಾರುಖ್‌ ಖಾನ್‌

ಆಶಿಷ್‌ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಕಾರಣಕ್ಕೆ ನೆಟ್ಟಿಗರಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಟನ ವೈಯಕ್ತಿಕ ನಿಲುವನ್ನು ಎಲ್ಲರೂ ಗೌರವಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X