ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಭಾರತದ ಎರಡನೇ ಜವಾಹರಲಾಲ್ ನೆಹರೂ ಎಂದು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ವಾಜಪೇಯಿ ಅವರ 100ನೇ ಜನ್ಮದಿನಚರಣೆ ಭಾಗವಾಗಿ ವಾಜಪೇಯಿ ಅವರನ್ನು ರಾವತ್ ಸ್ಮರಿಸಿದ್ದಾರೆ. ವಾಜಪೇಯಿ ಅವರನ್ನು ನೆಹರೂ ಅವರಿಗೆ ಹೋಲಿಸಿ ಪ್ರಶಂಷಿಸಿದ್ದಾರೆ.
“ದೇಶದ ಮೊದಲ ಪ್ರಧಾನಿ ನೆಹರೂ ಅವರ ಹೆಸರನ್ನು ಬಿಜೆಪಿ ಕೆಡಿಸುತ್ತಿದೆ. ಆದರೆ, ವಾಜಪೇಯಿ ಎರಡನೇ ನೆಹರು ಆಗಿದ್ದರು. ಅವರು ಕಾಂಗ್ರೆಸೇತರ ಪಕ್ಷಗಳ ನೆಹರು ಆಗಿದ್ದರು. ನೆಹರೂ ಕೂಡ ವಾಜಪೇಯಿಯವರನ್ನು ಮೆಚ್ಚಿ ಆಶೀರ್ವದಿಸಿದ್ದರು” ಎಂದು ಹೇಳಿದ್ದಾರೆ.
“ವಾಜಪೇಯಿ ಹಿಂದುತ್ವವಾದಿ ಆಗಿದ್ದರು. ಆದರೂ, ದೇಶವು ಎಲ್ಲರಿಗೂ ಸೇರಿದ್ದು ಎಂದು ಪ್ರತಿಪಾದಿಸಿದ್ದರು. ಎಲ್ಲ ರೀತಿಯ ಸದಾಚಾರಗಳನ್ನು ಮೈಗೂಡಿಸಿಕೊಂಡಿದ್ದರು” ಎಂದು ರಾವತ್ ಹೇಳಿದ್ದಾರೆ.