ಉಡುಪಿ | ದಲಿತಪರ ಹೋರಾಟಗಾರ್ತಿ ಮೇಲೆ ಹಲ್ಲೆ! ಪ್ರಕರಣ ದಾಖಲು

Date:

Advertisements

ಅಕ್ರಮ ಭೂ ಕಬಳಿಕೆ ಮತ್ತು ಸರಕಾರಿ ಜಮೀನಲ್ಲಿ ಗಣಪು ಶೆಡ್ತಿ ಮತ್ತು ಮಂಜುಳ ಶೆಟ್ಟಿಯವರು ಅಶೋಕ ಶೆಟ್ಟಿ ಎಂಬ ಪಂಚಾಯತ್ ಸದಸ್ಯ ಪ್ರಚೋದನೆ ಮೇರೆಗೆ ಸರಕಾರಿ ಜಮೀನಲ್ಲಿ ಮನೆ ನಿರ್ಮಾಣದ ವಿರುದ್ದ ದಲಿತ ಹೋರಾಟಗಾರ್ತಿ ನಾಗರತ್ನ ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದೆ ಮುಳುವಾಯಿತೇ? ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕರು, ಸ್ಥಳ ಪರಿಶೀಲನೆ ಮಾಡಿ ವರದಿಯಾನುಸಾರ ತಹಸೀಲ್ದಾರ್ ರವರು ಜಂಟಿ ಸರ್ವೇಗೆ ಆದೇಶ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು, ಒಂದು ವೇಳೆ ಅದೇಶ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈ ಗೊಳ್ಳುತ್ತೇವೆ ಎಂದು ಆದೇಶ ಮಾಡಿದರು ಕ್ಯಾರೇ ಮಾಡದೇ ಮನೆ ನಿರ್ಮಾಣ ಮಾಡಿದ್ದು, ತದನಂತರ ಮತ್ತೆ ಹೋರಾಟಗಾರ್ತಿ ದೂರು ನೀಡಿದ ನಂತರ, ತಹಸೀಲ್ದಾರ್ ರವರು ಜಂಟಿ ಸರ್ವೇ ನಡೆಸಲು ಅದೇಶ ಮಾಡಿದ್ದರು. ಸರ್ವೇ ಅಲ್ಲಿ ಸರಕಾರಿ ಜಾಗ ಎಂದು ದೃಢಪಟ್ಟಿದ್ದು ಅಶೋಕ್ ಮತ್ತು ಪಟಾಲಂಗೆ ಹಿನ್ನಡೆಯಾಗಿದ್ದು ಮುಂದೆ ಸರಕಾರ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎನ್ನುವುದನ್ನು ಅರಿತು ನಾಗರತ್ನ ವಿರುದ್ದ ಪೂರ್ವ ನಿಯೋಜಿತ ಷಡಯಂತ್ರ ರೂಪಿಸಿತ್ತೆ?

ಪ್ರಕರಣದ ಸಾರಾಂಶ : ದಿನಾಂಕ 03/02/2025 ರಂದು ತನ್ನ ಮಗನ ಸರಕಾರದಿಂದ ಸಿಗುವ ಸೌಲಭ್ಯಕ್ಕಾಗಿ ಮನೆಯಿಂದ ವಂಡ್ಸೆಗೆ ಹೋಗಲು ನಡೆದುಕೊಂಡು ಬರುವಾಗ, ಸರಿಸುಮಾರು ಬೆಳಿಗ್ಗೆ 9:30 ಗಂಟೆಗೆ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಮರ್ಡಿ ಹೆಂಚಿನಮನೆ ಎಂಬಲ್ಲಿಯ ಮಂಜುಳ ಎಂಬುವವರ ಮನೆಯ ಬಳಿ ದಾರಿಯಲ್ಲಿ ಹೋಗುವ ಸಮಯ ಆಪಾದಿತರಾದ ಮಂಜುಳ ಹಾಗೂ ಚಂದ್ರ ಶೇಖರ ಎಂಬುವವರು ಪಿರ್ಯಾದಿದಾರರ ಬಳಿಗೆ ಬಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ,ಆಪಾದಿತೆ ಮಂಜುಳಾ ಮತ್ತು ಚಂದ್ರ ಶೇಖರ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದು ಈ ಘಟನೆ ಸಮಯ ಸ್ಥಳದಲ್ಲಿದ್ದ ಆಪಾದಿತ ಸುಬ್ಬಣ್ಣ ಪ್ರಚೋದನೆ ಮಾಡಿರುತ್ತಾನೆ. ಆಪಾದಿತ ಅಶೋಕ ಪೋನ್‌ ಮಾಡಿ ಹೆದರಿಸಿದ್ದು, ಅಶೋಕ ಎಂಬಾತನ ಪ್ರಚೋದನೆಯಿಂದ ಆಪಾದಿತರು ಈ ಕೃತ್ಯ ಏಸಗಿರುತ್ತಾರೆ. ಪಿರ್ಯಾದಿದಾರರು ಈ ಘಟನೆಯಿಂದ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎನ್ನಲಾಗಿದೆ.

ಈ ಪ್ರಕರಣ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2025 ಕಲಂ: 3 (1) , (r), (s), 3(2), (v-a) SCc/ST act 2015, 115 (2), 352, 351 (2), 54, 49, R/w 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Advertisements
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X