ಅಲರ್ಟ್‌ | ಐಟಿ ಅಧಿಕಾರಿಗಳು ನಿಮ್ಮ ಇಮೇಲ್, ಸೋಷಿಯಲ್ ಮೀಡಿಯಾ ಖಾತೆಗಳ ಆ್ಯಕ್ಸೆಸ್ ಪಡೆಯಲಿದ್ದಾರೆ!

Date:

Advertisements

ಪ್ರತಿಯೊಬ್ಬ ಭಾರತೀಯರ ಸಾಮಾಜಿಕ ಮಾಧ್ಯಮಗಳ ಖಾತೆಗಳು, ಇಮೇಲ್‌ಗಳು, ಬ್ಯಾಂಕ್‌ ಖಾತೆಗಳು, ಆನ್‌ಲೈನ್ ಹೂಡಿಕೆಗಳು ಹಾಗೂ ವ್ಯಾಪಾರ ಸಂಬಂಧಿತ ಖಾತೆಗಳ ‘ಆ್ಯಕ್ಸೆಸ್’ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪಡೆಯಲಾಗಿದ್ದಾರೆ. ಈ ಎಲ್ಲ ಖಾತೆಗಳ ತನಿಖೆ ಮಾಡಲು ಅವರು ಖಾತೆಗಳಿಗೆ ಪ್ರವೇಶಿಸಲಿದ್ದಾರೆ. ಅದಕ್ಕಾಗಿ ಅವರು ಕಾನೂನುಬದ್ಧ ಹಕ್ಕನ್ನೂ ಪಡೆಯಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಅದಾಯ ತೆರಿಗೆ ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ದಪಡಿಸುತ್ತಿದೆ. ಅದು ಅಂಗೀಕಾರವಾಗಿ, ಜಾರಿಗೆ ಬಂದರೆ, ಮುಂದಿನ ವರ್ಷದಿಂದ ಅದಾಯ ತೆರಿಗೆ ಅಧಿಕಾರಿಗಳು ಭಾರತದಲ್ಲಿ ಯಾರದ್ದೇ ಖಾತೆಗಳಿಗೆ ನೇರವಾಗಿ ‘ಆ್ಯಕ್ಸೆಸ್’ ಪಡೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ. ಭಾರತೀಯರಲ್ಲಿ ಯಾರಾದರೂ ತೆರಿಗೆ ಪಾವತಿಸಿಲ್ಲದಿದ್ದರೆ ಅಥವಾ ಯಾವುದೇ ಅಘೋಷಿತ ಆಸ್ತಿಗಳು, ನಗದು, ಚಿನ್ನ, ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರಬಹುದು ಎಂದು ತೆರಿಗೆ ಅಧಿಕಾರಿಗಳು ಅನುಮಾನಿಸಿದರೆ, ಅಂತಹವರ ಖಾತೆಗಳನ್ನು ಅಧಿಕಾರಿಗಳು ತನಿಖೆ ಮಾಡಲು ಮಸೂದೆಯು ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ.

ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಈ ಹೊಸ ನಿಬಂಧನೆಯನ್ನು ಆದಾಯ ತೆರಿಗೆ ಮಸೂದೆಯಲ್ಲಿ ಆದಾಯ ತೆರಿಗೆ ಇಲಾಖೆ ಪ್ರಸ್ತಾಪಿಸಿದೆ. ಇದರ ಉದ್ದೇಶ ಆರ್ಥಿಕ ವಂಚನೆ, ಅಘೋಷಿತ ಆಸ್ತಿಗಳು ಮತ್ತು ತೆರಿಗೆ ವಂಚನೆಯನ್ನು ತಡೆಯುದಾಗಿದೆ ಎಂದು ವರದಿಯ ಹೇಳಿದೆ.

Advertisements

ತೆರಿಗೆ ಅಧಿಕಾರಿಗಳು ಡಿಜಿಟಲ್ ಮಾಹಿತಿಯನ್ನು ಯಾವಾಗ ಪಡೆಯುತ್ತಾರೆ ಅಥವಾ ಪ್ರವೇಶಿಸುತ್ತಾರೆ?
ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆ-1961ರ ಸೆಕ್ಷನ್ 132ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಆದಾಯ, ಆಸ್ತಿಗಳು ಅಥವಾ ಹಣಕಾಸು ದಾಖಲೆಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಇದ್ದರೆ, ಅಂತಹ ವ್ಯಕ್ತಿಯ ಖಾತೆಗಳ ‘ಆ್ಯಕ್ಸೆಸ್‌’ಅನ್ನು ತೆರಿಗೆ ಅಧಿಕಾರಿಗಳು ಪಡೆಯಬಹುದು. ತನಿಖೆ ನಡೆಸಬಹುದು. ವಶಕ್ಕೂ ಪಡೆಯಬಹುದು.

ಈವರೆಗೆ, ಆಪಾದಿತ ವ್ಯಕ್ತಿಯು ಘೋಷಿತ ಆಸ್ತಿಗಳು ಅಥವಾ ಹಣಕಾಸಿನ ದಾಖಲೆಗಳನ್ನು ಮರೆಮಾಚಿದ್ದಾರೆ ಎಂಬ ಖಚಿತತೆಯ ಮೇಲೆ ಅವರ ನಿವಾಸಗಳು, ಕಚೇರಿಗಳು ಹಾಗೂ ಲಾಕರ್‌ಗಳ ಮೇಲೆ ದಾಳಿ ಮಾಡಿ, ಶೋಧಿಸಿ, ತನಿಖೆ ಮಾಡುವ ಅಧಿಕಾರವನ್ನು ಅಧಿಕಾರಿಗಳು ಹೊಂದಿದ್ದರು. ಆದರೆ, 2026ರ ಏಪ್ರಿಲ್ 1ರಿಂದ ಅವರ ಅಧಿಕಾರ ಡಿಜಿಟಲ್ ಜಗತ್ತಿಗೂ ವಿಸ್ತರಿಸಿಲಿದೆ. ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಟಲ್‌ ತಾಣದಲ್ಲಿ ಬಚ್ಚಿಡಲಾಗಿದೆ ಎಂದು ಅಧಿಕಾರಿಗಳು ಅನುಮಾನಿಸಿದರೆ, ಅಧಿಕಾರಿಗಳು ಆರೋಪಿಗಳ ಕಂಪ್ಯೂಟರ್ ಮತ್ತು ಆನ್‌ಲೈನ್ ಖಾತೆಗಳಿಗೆ ನೇರವಾಗಿ ಪ್ರವೇಶಿಸುವ, ಪರಿಶೀಲಿಸುವ ಅಧಿಕಾರಿವನ್ನು ಪಡೆಯುತ್ತಾರೆ ಎಂದು ವರದಿ ಹೇಳಿದೆ.

ಏನಿದರ ಅರ್ಥ?
ಯಾವುದೇ ವ್ಯಕ್ತಿ ತಮ್ಮ ಆದಾಯ ಅಥವಾ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ತೆರಿಗೆ ಅಧಿಕಾರಿಗಳು ಅನುಮಾನಿಸಿದರೆ, ಅವರು ಆ ವ್ಯಕ್ತಿಯ ಇಮೇಲ್‌ಗಳು, ಬ್ಯಾಂಕ್ ಖಾತೆಗಳು, ವ್ಯಾಪಾರ ಸಂಬಂಧಿತ ಖಾತೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತನಿಖೆ ಮಾಡಬಹುದು ಎಂದು ವರದಿ ವಿವರಿಸಿದೆ.

ಈ ವರದಿ ಓದಿದ್ದೀರಾ?: ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!

ಹಣಕಾಸಿನ ವಹಿವಾಟುಗಳು ಡಿಜಿಟಲೀಕರಣ ಆಗುತ್ತಿರುವಂತೆ, ತೆರಿಗೆ ಅಧಿಕಾರಿಗಳ ತನಿಖಾ ಪ್ರಕ್ರಿಯೆಯೂ ಕೂಡ ಡಿಜಿಟಲ್ ವೇದಿಕೆಗೆ ವಿಸ್ತಿರಿಸುತ್ತಿದೆ. ಆದರೆ, ತೆರಿಗೆ ಅಧಿಕಾರಿಗಳಿಗೆ ಈ ಅಧಿಕಾರ ನೀಡುವುದು ಪರಿಣಾಮಕಾರಿಯಾಗುತ್ತದೆಯೇ ಅಥವಾ ಜನರ ಗೌಪ್ಯತೆಗೆ ಸಂಬಂಧಿತ ಸಮಸ್ಯೆಗಳನ್ನು ಹುಟ್ಟುಹಾಕಬಹುದೇ ಎಂಬ ಕಳವಳವೂ ಇದೆ. ಮಸೂದೆ ರಚನೆಯಾಗಿ, ಅದು ಚರ್ಚೆಗೆ ಬಂದಾಗ ಮತ್ತಷ್ಟು ಮಾಹಿತಿ ದೊರೆಯಲಿದೆ. ಚರ್ಚೆಗಳು ನಡೆಯಲಿವೆ. ಆಗ, ಗೌಪ್ಯತೆ ವಿಚಾರಗಳ ಕುರಿತು ಸರ್ಕಾರ ಯಾವ ರೀತಿಯ ಸಮಜಾಯಿಷಿ ನೀಡಲಿದೆ. ಕಾದುನೋಡಬೇಕಷ್ಟೇ…!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X