ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ವಿಷಕ್ಕೆ ರುಚಿ

ಅಗ್ನಿಗೆ ತಂಪುಂಟೆ?
ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ?
ಕಂಗಳಿಗೆ ಕರುಳುಂಟೆ?
ಗುಹೇಶ್ವರಾ
ನಿಮ್ಮ ಶರಣರು, ಮೂರು ಲೋಕವರಿಯೆ ನಿಶ್ಚಟರಯ್ಯಾ.

ಪದಾರ್ಥ:
ನಿಶ್ಚಟ = ಚಟವಿಲ್ಲದ

Advertisements

ವಚನಾರ್ಥ:

ಶರಣರು ಅಂದರೆ ಸಜ್ಜನರು, ಸದ್ಗುಣಿಗಳು, ಸಹೃದಯಿಗಳು, ಸದ್ಭಕ್ತರು. ಅಂತಹವರು ನನಗೆ ಪ್ರಿಯರಾಗಿರುತ್ತಾರೆ ಎಂದು ದೈವವೇ ನುಡಿದ ನುಡಿಯಿದೆ. ಯಾರು ಸಮಚಿತ್ತನಾಗಿರುವನೋ, ಯಾರಿಗೆ ವಿಷಯಾಸಕ್ತಿ ಇರುವುದಿಲ್ಲವೋ, ಯಾವುದೇ ವಿಧದಿಂದ ಶರೀರ ನಿರ್ವಾಹವಾಗುವುದರಲ್ಲಿ ಸದಾ ಸಂತುಷ್ಟನೋ ಅಂತಹ ಸ್ಥಿರಬುದ್ದಿಯುಳ್ಳ ಭಕ್ತಿಸಂಪನ್ನನು ನನಗೆ ಪ್ರಿಯನು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನುಡಿದ ಉಲ್ಲೇಖವಿದೆ. ಅಂತಹ ಭಕ್ತಿಸಂಪನ್ನ ಶರಣರಿಗೆ ಯಾವುದೇ ಚಟಗಳಿರುವುದಿಲ್ಲ. ಅವರು ನಿಶ್ಚಟರು. ಇದು ಮೂರು ಲೋಕಕ್ಕೆ ಗೊತ್ತಿರುವ ಮಾತು ಎಂಬುದು ಈ ವಚನದ ಪ್ರಸ್ತಾಪ. ಶರಣನಿಗೆ ಚಟ, ವ್ಯಸನ ಇರುವುದಿಲ್ಲ ಎಂದು ನಿರೂಪಿಸಲು ವಚನದಲ್ಲಿ ಬಳಸಿರುವ ಉದಾಹರಣೆಗಳು ಐದು.

(1) ಬೆಂಕಿ ತಂಪಾಗಿರುವುದಿಲ್ಲ.
(2) ವಿಷಕ್ಕೆ ರುಚಿಯಿರುವುದಿಲ್ಲ.
(3) ಕಣ್ ದೃಷ್ಟಿಯಿಂದ ಏನನ್ನೂ ಮರೆಮಾಚಲಾಗುವುದಿಲ್ಲ.
(4) ದರೋಡೆ ಮಾಡಿ ದೋಚುವವನಿಗೆ ಧರ್ಮ ದಾಕ್ಷಿಣ್ಯ ಇರುವುದಿಲ್ಲ.
(5) ಕಣ್ಣ ನೋಟಕ್ಕೆ ಒಳ್ಳೆಯ ದೃಶ್ಯ ಕೆಟ್ಟ ದೃಶ್ಯ ಎಂಬ ಭಾವನೆ ಇರುವುದಿಲ್ಲ.
ಅದರಂತೆ ಶರಣನಿಗೆ ಚಟ, ವ್ಯಸನ ಇರುವುದಿಲ್ಲ.

ಪದ ಪ್ರಯೋಗಾರ್ಥ:

ವಿಷಕ್ಕೆ ರುಚಿಯುಂಟೇ ಹೇಳಾ? ಇದು ಉತ್ತರವಿಲ್ಲದ ಪ್ರಶ್ನೆ. ವಿಷದ ರುಚಿಯ ಸವಿದವರಿಲ್ಲ. ಸವಿದು ಸುಖಿಸಿದವರಿಲ್ಲ. ಮನುಷ್ಯ ಕಂಡುಹಿಡಿದ ಮಹಾ ಕಾರ್ಕೋಟಕ ವಿಷ ಸಯನೈಡ್. ಇಲ್ಲಿಯವರೆಗೂ ಸಯನೈಡ್ ವಿಷದ ರುಚಿ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಸಯನೈಡ್ ಸೇವಿಸಿ ಅದರ ರುಚಿಯನ್ನು ವಿವರಿಸಿ ದಾಖಲಿಸಿ ಹೋಗುತ್ತೇನೆ ಎಂದು ಪ್ರಯತ್ನಿಸಿದವರು ಕ್ಷಣಮಾತ್ರದಲ್ಲಿ ಸತ್ತರೇ ಹೊರತು ವಿಷದ ರುಚಿಯನ್ನು ತಿಳಿಸಲಾಗಲಿಲ್ಲ. ಇದೇ ಅಲ್ಲಮನ ಪ್ರಶ್ನೆ.

ವಿಷಕ್ಕೆ ರುಚಿಯುಂಟೆ ಹೇಳಾ? ಅಗ್ನಿಗೆ ತಂಪಿಲ್ಲ, ದಾಳಿಕಾರನಿಗೆ ಧರ್ಮವಿಲ್ಲ ಎನ್ನುವ ದೃಷ್ಟಾಂತದ ಜೊತೆಯಲ್ಲೇ ವಿಷಕ್ಕೆ ರುಚಿಯಿಲ್ಲ ಎನ್ನುವ ಅಲ್ಲಮನ ಉಪಮೆ ಇಲ್ಲಿ ಅತ್ಯಂತ ಉಪಯುಕ್ತವಾಗಿ ಪ್ರಯೋಗಗೊಂಡಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X