ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ವಿಷಕ್ಕೆ ರುಚಿ
ಅಗ್ನಿಗೆ ತಂಪುಂಟೆ?
ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ?
ಕಂಗಳಿಗೆ ಕರುಳುಂಟೆ?
ಗುಹೇಶ್ವರಾ
ನಿಮ್ಮ ಶರಣರು, ಮೂರು ಲೋಕವರಿಯೆ ನಿಶ್ಚಟರಯ್ಯಾ.
ಪದಾರ್ಥ:
ನಿಶ್ಚಟ = ಚಟವಿಲ್ಲದ
ವಚನಾರ್ಥ:
ಶರಣರು ಅಂದರೆ ಸಜ್ಜನರು, ಸದ್ಗುಣಿಗಳು, ಸಹೃದಯಿಗಳು, ಸದ್ಭಕ್ತರು. ಅಂತಹವರು ನನಗೆ ಪ್ರಿಯರಾಗಿರುತ್ತಾರೆ ಎಂದು ದೈವವೇ ನುಡಿದ ನುಡಿಯಿದೆ. ಯಾರು ಸಮಚಿತ್ತನಾಗಿರುವನೋ, ಯಾರಿಗೆ ವಿಷಯಾಸಕ್ತಿ ಇರುವುದಿಲ್ಲವೋ, ಯಾವುದೇ ವಿಧದಿಂದ ಶರೀರ ನಿರ್ವಾಹವಾಗುವುದರಲ್ಲಿ ಸದಾ ಸಂತುಷ್ಟನೋ ಅಂತಹ ಸ್ಥಿರಬುದ್ದಿಯುಳ್ಳ ಭಕ್ತಿಸಂಪನ್ನನು ನನಗೆ ಪ್ರಿಯನು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನುಡಿದ ಉಲ್ಲೇಖವಿದೆ. ಅಂತಹ ಭಕ್ತಿಸಂಪನ್ನ ಶರಣರಿಗೆ ಯಾವುದೇ ಚಟಗಳಿರುವುದಿಲ್ಲ. ಅವರು ನಿಶ್ಚಟರು. ಇದು ಮೂರು ಲೋಕಕ್ಕೆ ಗೊತ್ತಿರುವ ಮಾತು ಎಂಬುದು ಈ ವಚನದ ಪ್ರಸ್ತಾಪ. ಶರಣನಿಗೆ ಚಟ, ವ್ಯಸನ ಇರುವುದಿಲ್ಲ ಎಂದು ನಿರೂಪಿಸಲು ವಚನದಲ್ಲಿ ಬಳಸಿರುವ ಉದಾಹರಣೆಗಳು ಐದು.
(1) ಬೆಂಕಿ ತಂಪಾಗಿರುವುದಿಲ್ಲ.
(2) ವಿಷಕ್ಕೆ ರುಚಿಯಿರುವುದಿಲ್ಲ.
(3) ಕಣ್ ದೃಷ್ಟಿಯಿಂದ ಏನನ್ನೂ ಮರೆಮಾಚಲಾಗುವುದಿಲ್ಲ.
(4) ದರೋಡೆ ಮಾಡಿ ದೋಚುವವನಿಗೆ ಧರ್ಮ ದಾಕ್ಷಿಣ್ಯ ಇರುವುದಿಲ್ಲ.
(5) ಕಣ್ಣ ನೋಟಕ್ಕೆ ಒಳ್ಳೆಯ ದೃಶ್ಯ ಕೆಟ್ಟ ದೃಶ್ಯ ಎಂಬ ಭಾವನೆ ಇರುವುದಿಲ್ಲ.
ಅದರಂತೆ ಶರಣನಿಗೆ ಚಟ, ವ್ಯಸನ ಇರುವುದಿಲ್ಲ.
ಪದ ಪ್ರಯೋಗಾರ್ಥ:
ವಿಷಕ್ಕೆ ರುಚಿಯುಂಟೇ ಹೇಳಾ? ಇದು ಉತ್ತರವಿಲ್ಲದ ಪ್ರಶ್ನೆ. ವಿಷದ ರುಚಿಯ ಸವಿದವರಿಲ್ಲ. ಸವಿದು ಸುಖಿಸಿದವರಿಲ್ಲ. ಮನುಷ್ಯ ಕಂಡುಹಿಡಿದ ಮಹಾ ಕಾರ್ಕೋಟಕ ವಿಷ ಸಯನೈಡ್. ಇಲ್ಲಿಯವರೆಗೂ ಸಯನೈಡ್ ವಿಷದ ರುಚಿ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಸಯನೈಡ್ ಸೇವಿಸಿ ಅದರ ರುಚಿಯನ್ನು ವಿವರಿಸಿ ದಾಖಲಿಸಿ ಹೋಗುತ್ತೇನೆ ಎಂದು ಪ್ರಯತ್ನಿಸಿದವರು ಕ್ಷಣಮಾತ್ರದಲ್ಲಿ ಸತ್ತರೇ ಹೊರತು ವಿಷದ ರುಚಿಯನ್ನು ತಿಳಿಸಲಾಗಲಿಲ್ಲ. ಇದೇ ಅಲ್ಲಮನ ಪ್ರಶ್ನೆ.
ವಿಷಕ್ಕೆ ರುಚಿಯುಂಟೆ ಹೇಳಾ? ಅಗ್ನಿಗೆ ತಂಪಿಲ್ಲ, ದಾಳಿಕಾರನಿಗೆ ಧರ್ಮವಿಲ್ಲ ಎನ್ನುವ ದೃಷ್ಟಾಂತದ ಜೊತೆಯಲ್ಲೇ ವಿಷಕ್ಕೆ ರುಚಿಯಿಲ್ಲ ಎನ್ನುವ ಅಲ್ಲಮನ ಉಪಮೆ ಇಲ್ಲಿ ಅತ್ಯಂತ ಉಪಯುಕ್ತವಾಗಿ ಪ್ರಯೋಗಗೊಂಡಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಒಂದೊಳ್ಳೆ ಪ್ರಯತ್ನ ಸರ್..ಮುಂದುವರೆಸಿ