ಹುಬ್ಬಳ್ಳಿ | ಮಹಾನಗರ ಪಾಲಿಕೆಗೆ ಪೌರಕಾರ್ಮಿಕರ ಮುತ್ತಿಗೆ; ಖಾಯಂ ನೇಮಕಾತಿಗೆ ಆಯುಕ್ತರ ಭರವಸೆ

Date:

Advertisements

ಪೌರಕಾರ್ಮಿಕರು ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 7ರಂದು ಮಧ್ಯಾಹ್ನ ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಪಾಲಿಕೆ‌ ಆಯುಕ್ತ ರುದ್ರೇಶ ಗಾಳಿ ಬರುವ ಮೇ. 11ರಂದು ರವಿವಾರ, 127 ಜನ‌ ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಪಾಲಿಕೆ ಕಚೇರಿಗೆ ಮುತ್ತಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಾಲಿಕೆಯ 933 ನೇರ ವೇತನ ಪೌರಕಾರ್ಮಿಕರಿಗೆ 4 ತಿಂಗಳು ಸಂಕಷ್ಟ ಬತ್ತೆ ಪಾವತಿಸಿದ್ದೇವೆ. ಅಲ್ಲದೇ 251 ನೇರ ವೇತನ ಪೌರಕಾರ್ಮಿಕರಿಗೆ 5 ತಿಂಗಳು ಸಂಕಷ್ಟ ಬತ್ತೆ ರೂ 5 ಲಕ್ಷ ಪಾವತಿಸಿದ್ದೇವೆ. ಅಲ್ಲದೇ 3 ದಿನಗಳಲ್ಲಿ ಪೌರಕಾರ್ಮಿಕರಿಗೆ ಗುರುತಿನ ಚೀಟಿ (ಐಡಿ‌ ಕಾರ್ಡ್) ನೀಡಲಾಗುವುದು. ಸದ್ಯದಲ್ಲೇ ಪೌರಕಾರ್ಮಿಕರ ಸಂಘದ ಸಭೆ ಕರೆದು ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಹಿಂದೂಗಳ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ: ಸಚಿವ ಆರ್.ಬಿ.ತಿಮ್ಮಾಪುರ

Advertisements

ಈ ಸಂದರ್ಭದಲ್ಲಿ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ.ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಅನಿತಾ ಈನಗೊಂಡ, ಗಾಳೆಪ್ಪ ದ್ವಾಸಲಕೇರಿ, ದತಪ್ಪ ಆಪುಸಪೇಟ್, ಕನಕಪ್ಪ ಕೋಟಬಾಗಿ, ಲಕ್ಷ್ಮೀ ಬೇತಾಪಲ್ಲಿ ಪಾರವ್ವ ಹೊಸಮನಿ ಭಾಗ್ಯಲಕ್ಷ್ಮೀ ಮಾದರ, ಎಸ್ಟುರೆಮ್ಮ ಭಂಡಾರಿ, ಮಹೇಶ ಮಾದರ, ತಾಯಪ್ಪ ಕಣೆಕಲ್, ಶರೀಫ್ ಮಸರಕಲ್ ನಾಗರಾಜ್ ದೊಡ್ಡಮನಿ, ಶಿವಮ್ಮ ಬೇವಿನಮರದ, ವೆಂಕಟೇಶ್ ಪಾಲವಾಯಿ, ಪದ್ಮಾ ಚಿಕ್ಕಣ್ಣವರ, ಪ್ರಶಾಂತ್ ಶಿಕ್ಕಲಗಾರ, ರಮೇಶ ಗೊಲ್ಲರ, ಶಾಂತವ್ವ ಚುರಮುರಿ, ದುರಗಮ್ಮ ಗೊಲ್ಲರ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X