18 -ಫ್ಯಾನ್ಸ್​ ಸಂಬಂಧ ಬಿಡಿಸಲಸಾಧ್ಯ ನಂಟು; ಅಮೋಘ ಅವಿಸ್ಮರಣೀಯ ಕ್ಷಣಕ್ಕೆ ವಿರಾಟ್ ಕೊಹ್ಲಿ ಸಾಕ್ಷಿ

Date:

Advertisements

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಅಹಮದಾಬಾದ್​ನಲ್ಲಿ ಮಂಗಳವಾರ (ಜೂ.3) ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ರಜತ್ ಪಾಟೀದಾರ್ ನಾಯಕತ್ವದ ಆರ್​ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಿತು.

ಕೊನೆಯ ಓವರ್‌ ಎರಡು ಪಂದ್ಯಗಳಿಗೂ ನಿರ್ಣಾಯವಾಗಿತ್ತು. ‌ಜೋಶ್ ಹೆಜಲ್‌ ವುಡ್‌ ತಮ್ಮ ಕೊನೆಯ ಕೋಟಾದ ಓವರ್‌ ಮಾಡಲು ಮುಂದಾದರು. ಎರಡು ಬಾಲ್‌ಗಳು ಡಾಟ್‌ ಆಗುತ್ತಿದ್ದಂತೆ ಗೆಲುವಿನ ಕಡೆ ಆರ್​ಸಿಬಿ ಮುಖಮಾಡಿತು. ಇನ್ನು ಆರ್​ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ಕ್ರಿಕೆಟ್‌ ಲೋಕದ ಆರ್‌ಸಿಬಿ ದಂತಕತೆ ಕಿಂಗ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಣ್ಣೀರು ಇಟ್ಟು, ಭಾವುಕರಾದ ಕೊಹ್ಲಿ, ತಮ್ಮ ಮುಖವನ್ನು ಮುಚ್ಚಿಕೊಂಡು ಮೈದಾನದಲ್ಲೇ ನಿಂತರು.

Advertisements

ಆರ್​ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಮಂಡಿಯೂರಿ ಕೊಹ್ಲಿ ಕಣ್ಣೀರಿಟ್ಟರು. ಪಂದ್ಯ ನೋಡಲು ಬಂದಿದ್ದ ಆರ್​ಸಿಬಿ ಮಾಜಿ ಸ್ಟಾರ್‌ ಆಟಗಾರ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಮೈದಾನದಕ್ಕೆ ಓಡೋಡಿ ಬಂದು, ಇವರನ್ನು ತಬ್ಬಿಕೊಂಡು ಖುಷಿ ಹಂಚಿಕೊಂಡರು. ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆಗೂ ವಿರಾಟ್ ಮೈದಾನದಲ್ಲಿ ಸಂಭ್ರಮದ ಕ್ಷಣವನ್ನು ಕಳೆದರು.

ಕೊಹ್ಲಿ 18ರ ನಂಟು

18.. ಇದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್. ಈ ನಂಬರ್​ ಜೊತೆಗಿನ ಫ್ಯಾನ್ಸ್​ ಸಂಬಂಧ ಬಿಡಸಲಾಸಾಧ್ಯ. ಈ ಕಾರಣಕ್ಕೆ ಫ್ಯಾನ್ಸ್​, ಸೀಸನ್-18ರ ಐಪಿಎಲ್​​ ಆರ್​ಸಿಬಿ ಇಯರ್ ಅಂತಾನೇ ವಿಶ್ಲೇಷಣೆ ಮಾಡಿದ್ದರು. ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಸೀಸನ್​-18ರ ಐಪಿಎಲ್, ಮೋಸ್ಟ್​ ಎಮೋಷನಲ್ ಸೀಸನ್​​ ಆಗಿದೆ. 18 ವರ್ಷಗಳಿಂದ ಒಂದೇ ತಂಡದ ಪರ ಆಡಿದ್ದು ಅವರ ದಾಖಲೆ ಮತ್ತು ಹೆಗ್ಗಳಿಕೆ. ಇವರೆಗೂ IPL ಕಪ್ ಗೆದ್ದಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಸಹಜವಾಗಿಯೇ ಭಾವುಕರಾದರು.

ಆರ್‌ಸಿಬಿ ತಂಡಕ್ಕೆ ಕೊಡುಗೆ ನೀಡಿದ ಮಾಜಿ ಆಟಗಾರರನ್ನು ಸ್ಮರಿಸಿದ ವಿರಾಟ್‌ ಕೊಹ್ಲಿ, “ಎಬಿಡಿ, ಕ್ರಿಸ್‌ ಗೇಲ್‌ ಅವರಂತಹ ಆಟಗಾರರು ಈ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಈ ಗೆಲುವು ಮಾಜಿ ಆಟಗಾರರದ್ದೂ ಹೌದು. ನಾನು ಅವರೊಂದಿಗೂ ಈ ಅವಿಸ್ಮರಣೀಯ ಗೆಲುವನ್ನು ಸಂಭ್ರಮಿಸಲು ಬಯಸುತ್ತೇನೆ” ಎಂದು ಗೆಲುವಿನ ಬಳಿಕ ನುಡಿದರು.

ಕೊಹ್ಲಿಗೆ 771 ಬೌಂಡರಿ ಗರಿ

ಐಪಿಎಲ್‌ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಫೈನಲ್‌ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ವಿರಾಟ್ ಭಾಜನರಾಗಿದ್ದಾರೆ. 259 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಈವರೆಗೆ 771 ಬೌಂಡರಿಗಳನ್ನು ಗಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X