ವಿಜಯಪುರ | ದಲಿತ ಸಮ್ಮೇಳನದಲ್ಲಿ ವಚನಕಾರರ ಗೋಷ್ಠಿ ಇಲ್ಲದ್ದಕ್ಕೆ ಉಪ್ಪಿನ ಬೇಸರ

Date:

Advertisements

ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರನ್ನು ಒಳಗೊಳ್ಳದಿದ್ದದ್ದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಉಪ್ಪಿನ ತಿಳಿಸಿದ್ದಾರೆ.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರಿಗೆ ಪತ್ರ ಬರೆದಿರುವ ಅವರು, “ಬಸವಾದಿ ಶರಣರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಿಮ್ನ ವರ್ಗ’ಕ್ಕಾಗಿಯೇ ಚಳವಳಿ ರೂಪಿಸಿ ಜೀವ ತೇಯ್ದು, ಪ್ರಾಣವನ್ನೇ ಕೊಟ್ಟವರು. ಕೆಳವರ್ಗದಿಂದ ರೂಪುಗೊಂಡ ಕಲ್ಯಾಣ ಕ್ರಾಂತಿಯ ನೆರಳು ದಲಿತ ಸಮ್ಮೇಳನದಲ್ಲಿ ಮಾತು, ಗೋಷ್ಠಿ ಅಥವಾ ಚರ್ಚೆಯ ಮೂಲಕವಾದರೂ ಬೀಳಬೇಕಿತ್ತು” ಎಂದು ಹೇಳಿದ್ದಾರೆ.

“ಬಸವಣ್ಣನವರು ಏನೆಲ್ಲ ಮಾಡಿದರು ಎನ್ನುವುದು ಗೊತ್ತೇ ಇದೆ. ಅವರೊಂದಿಗೆ ಹರಳಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಬಹುತೇಕರು ದಲಿತರೇ ಆಗಿದ್ದಾರೆ. ಅವರೆಲ್ಲ ಎಲ್ಲರಿಗೂ ಅನುಭವ ಮಂಟಪಕ್ಕೆ ಕಾರಣರಾದವರು. ಪ್ರಜಾಪ್ರಭುತ್ವ, ಸಂವಿಧಾನದ ಅಂಶಗಳೆಲ್ಲ ವಚನಗಳಲ್ಲಿವೆ ಎಂಬುದು ಒಪ್ಪಿತ ಮಾತಾಗಿದೆ. ಹಾಗಾಗಿ ಮುಂದಿನ ಸಮ್ಮೇಳನದಲ್ಲಾದರೂ ವಚನಗಳು, ಲಿಂಗಾಯತ ಧರ್ಮದ ಚಳವಳಿಯ ಕುರಿತು ವಿಷಯಗಳನ್ನು ಸೇರಿಸಬೇಕು” ಎಂದು ಉಪ್ಪಿನ ಮನವಿ ಮಾಡಿದ್ದಾರೆ.

Advertisements

“ಬುದ್ಧನ ನಂತರ ಬೆಳಗಿದವರು ಬಸವಣ್ಣ. ಆನೆ ಕಾಲಿಗೆ ಕಟ್ಟಿಸಿಕೊಂಡವರು, ಭರ್ಜಿಯಲ್ಲಿ ಚುಚ್ವಿಸಿಕೊಂಡು ಸತ್ತವರು, ಗಡಿಪಾರಾದವರು, ವಚನಗಳನ್ನು ಉಳಿಸಿಕೊಳ್ಳಲು ಅಸುನೀಗಿದವರು ಬಸವಾದಿ ಶರಣರು. ಅವರನ್ನು ದಲಿತ ಸಮುದಾಯವೂ ಸೇರಿದಂತೆ ಯಾರೂ ಮರೆಯುವಂತಿಲ್ಲ. ತುಳಿತಕ್ಕೊಗಾದವರೆಲ್ಲ ದಲಿತರೇ ಆಗಿದ್ದಾರೆ. ಅದಕ್ಕೇ ಬಸವಣ್ಣ, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ..’ ಎಂದಿದ್ದರು” ಎಂದು ಅವರು ಹೇಳಿದ್ದಾರೆ.

“ಹೆಣ್ಣುಮಕ್ಕಳ ಪ್ರಾತಿನಿಧ್ಯದ ಕೊರತೆಯೂ ಸಮ್ಮೇಳನದಲ್ಲಿತ್ತು. ಗೋಷ್ಠಿಗಳಲ್ಲಿ ದಲಿತ ಮಹಿಳೆಯರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಅನೇಕ ಮಹಿಳೆಯರು ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರನ್ನು ಇಂತಹ ಸಮ್ಮೇಳನಗಳು ಗುರುತಿಸಬೇಕು. ಸತ್ಯಕ್ಯನಂತಹ ಅನೇಕ ವಚನಕಾರ್ತಿಯರನ್ನೂ ನಾವು ಮರೆಯಬಾರದು” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X