ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಬಹುಮುಖ್ಯ ಸಮುದಾಯವಾಗಿರುವ ಬ್ಯಾರಿ ಸಮುದಾಯದ ಯುವಕರಿಂದ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ʼಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರುʼ ಎಂಬ ಸಂಘಟನೆಯನ್ನು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆಂಪಿ ಆಯ್ಕೆಯಾಗಿದ್ದಾರೆ. ಈ ಸಂಘಟನೆಯು ಬೆಂಗಳೂರಿನಲ್ಲಿರುವ ಅನಿವಾಸಿ ಬ್ಯಾರಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕ ಸಹಾಯ, ಮುಂತಾದ ರೀತಿಯಲ್ಲಿ ಬ್ಯಾರಿ ಸಮುದಾಯದ ಸಮಗ್ರ ಅಭಿವೃಧ್ದಿಗಾಗಿ ಕಾರ್ಯಚರಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಉಪಾಧ್ಯಕ್ಷರುಗಳಾಗಿ, ರಿಫಾಯಿ ವಸಂತನಗರ, ಸಲೀಂ ಸಿ.ಎಂ
ಶಂಸು ಎಂಪೈರ್ ಆಯ್ಕೆ ಮಾಡಲಾಗಿದೆ. ಉಳಿದಂತೆ ಕಾರ್ಯದರ್ಶಿಗಳಾಗಿ ಅಡ್ವೋಕೇಟ್ ಅತಾವುಲ್ಲ, ಬಶೀರ್ ಅಡ್ಯನಡ್ಕ, ಇರ್ಷಾದ್ ಯುವರ್ ಚಾಯ್ಸ್, ಕೋಶಾಧಿಕಾರಿಗಳಾಗಿ ಅಬ್ಬಾಸ್ ಡೈಮಂಡ್ ಗ್ರೂಪ್, ಉಸ್ಮಾನ್ ಬಂಗಾಡಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹಾರಿಸ್ ಬೆಳ್ಮ ಇವರನ್ನು ಆಯ್ಕೆ ಮಾಡಲಾಗಿದೆ.
ಅನ್ವರ್ ಎಂಪೈರ್, ಗಫೂರ್ ಕೆಂಟ್, ಖಲಂದರ್ ಬಿಸಿರೋಡ್, ಆಸಿಫ್ ಪಿ ಕೆ, ಹಾರಿಸ್ ಎಸ್ ಕೆ, ಆರಿಫ್ ರೈದಾನ್
ಅಡ್ವೋಕೇಟ್ ಖಲಂದರ್, ಸಮದ್ ಕಿಚನ್ಸ್ ಎಟ್, ಮಾಝ್ ಕಾವಳಕಟ್ಟೆ, ಅಬೀದ್ ಅಲಿ ಲುಲು, ಝಮೀರ್ ಫಿಶ್ ಎಚ್ ಎ ಲ್, ಹುಸೈನ್ ಆತೂರ್, ಹಾರಿಸ್ ಮದ್ದಡ್ಕ, ಅಡ್ವೋಕೇಟ್ ಅನ್ಸಾರ್, ಅಫ್ಜಲ್ ಮೊಬೈಲ್ ಎಕ್ಸ್ಪ್ರೆಸ್, ಬದ್ರುದ್ದಿನ್, ಹನೀಫ್ ಕೆಎಂಸಿ, ಇಲ್ಯಾಸ್ ಮುನ್ನ ಯುವರ್ ಚಾಯ್ಸ್ ಇವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ‘ಬ್ಯಾರಿ ಸೆಂಟ್ರಲ್ ಕಮಿಟಿ ಬೆಂಗಳೂರು’ ಪ್ರಕಟಣೆಯಲ್ಲಿ ತಿಳಿಸಿದೆ.
