ಬೇಸಿಗೆಗೆ ಮತ್ತಷ್ಟು ಹುಳಿಯಾದ ನಿಂಬೆಹಣ್ಣು

Date:

  • ₹4 ರಿಂದ ₹5 ದರ ಇದ್ದ ನಿಂಬೆಹಣ್ಣು ಬೆಲೆ ಇದೀಗ ₹10
  • ಸಣ್ಣ ಗಾತ್ರದ ನಿಂಬೆ ಹಣ್ಣು ಪ್ರತಿ ಕಾಯಿಗೆ ₹5-6

ಚಳಿಯ ಕೊರೆ ಮುಗಿದು, ಬೇಸಿಗೆಯ ಬಿಸಿ ಏರುತ್ತಿದೆ. ಮಾರ್ಚ್‌ ತಿಂಗಳಿನಲ್ಲಿಯೇ ಬೇಸಿಗೆ ಸುಡುಬಿಸಿಲಿಗೆ ಜನರಿಗೆ ಸಾಕಪ್ಪ ಎನಿಸುವಂತೆ ಮಾಡಿದೆ. ಇನ್ನು ಏಪ್ರಿಲ್-ಮೇ ತಿಂಗಳಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ. ಜನರು ಕುಳಿತಲ್ಲಿಯೇ ದಣಿಯುವಂತಹ ವಾತಾವರಣ ಆವರಿಸಿದೆ. ದಣಿವು ನೀಗಿಸಿಕೊಳ್ಳಲು ತುಂಪು ಪಾನೀಯ, ಶರಬತ್‌ನ ಮೊರೆಹೋಗುತ್ತಿದ್ದಾರೆ. ಆದರೆ, ಶರಬತ್ ಮಾಡುವುದು ಬೇಸಿಗೆಗಿಂತಲೂ ಹೆಚ್ಚು ಕೈಸುಡುತ್ತಿದೆ. ₹4 ರಿಂದ ₹5 ದರ ಇದ್ದ ನಿಂಬೆಹಣ್ಣು ಬೆಲೆ ಇದೀಗ ₹10 ಆಗಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, “ನಗರದಾದ್ಯಂತ ಏರುತ್ತಿರುವ ತಾಪಮಾನವು ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ನಿಂಬೆಹಣ್ಣು ಇಳುವರಿ ಚೆನ್ನಾಗಿರುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಇಳುವರಿ ತುಂಬಾ ಕಡಿಮೆಯಿರುತ್ತದೆ. ಈ ಅವಧಿಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಜಾಸ್ತಿ ಇರುತ್ತದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಾರ್ಚ್‌ 31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

“ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣು ದುಬಾರಿಯಾಗಿರುತ್ತದೆ. ಈ ವರ್ಷ ಸಾಮಾನ್ಯಕ್ಕಿಂತ ಮುಂಚಿತವಾಗಿಯೇ ಫಸಲು ಬಂದಿದೆ. ಸಾಮಾನ್ಯವಾಗಿ ಏಪ್ರಿಲ್ ಮಧ್ಯದಲ್ಲಿ ಹಣ್ಣಿನ ಬೆಲೆಗಳು ಹೆಚ್ಚಾಗುತ್ತವೆ. ಆದರೆ, ಈ ಬಾರಿ ತಾಪಮಾನ ಏರಿಕೆಯಿಂದಾಗಿ ಮಾರ್ಚ್ ಮಧ್ಯದಿಂದಲೇ ಏರಿಕೆಯಾಗಿದೆ. ಸೋಮವಾರ ಸಗಟು ದರದಲ್ಲಿ 40 ಕೆಜಿ ನಿಂಬೆಹಣ್ಣಿನ ಪ್ರತಿ ಚೀಲಕ್ಕೆ ₹3,700 ಮುಂದಿನ ದಿನಗಳಲ್ಲಿ ಪ್ರತಿ ಚೀಲಕ್ಕೆ ₹4,000 ಏರಿಕೆ ಕಾಣಬಹುದು” ಎಂದು ಸಂತೋಷ್ ಹೇಳಿದರು.

ಸಣ್ಣ ಗಾತ್ರದ ನಿಂಬೆ ಹಣ್ಣು ಪ್ರತಿ ಕಾಯಿಗೆ ₹5-6 ಮಾರಾಟವಾಗುತ್ತಿದೆ. ಮಧ್ಯಮ ಗಾತ್ರದ ನಿಂಬೆಹಣ್ಣು ಅಂಗಡಿಗಳಲ್ಲಿ ₹8-10ಗೆ ಮಾರಾಟವಾಗುತ್ತಿದೆ. ವಿಜಯಪುರ ಹಾಗೂ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ನಿಂಬೆಹಣ್ಣುಗಳು ಆಮದು ಆಗುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಬರ್ಬರ ಹತ್ಯೆ

ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ...

ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿಬ್ಬಾಣ ದಿನ ಗಣ್ಯರಿಂದ ನಮನ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿಬ್ಬಾಣ ದಿನ ಅಂಗವಾಗಿ ರಾಜಧಾನಿ...

ಬಿಸಿಯೂಟ ಯೋಜನೆಗೆ ಶಾಲಾ ಶಿಕ್ಷಕರ ಬಳಕೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ: ರಮೇಶ್ ಬಾಬು

"ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಶಾಲಾ ಹಂತದಲ್ಲಿ...

ಬೆಂಗಳೂರು | ನವೆಂಬರ್‌ನಲ್ಲಿ ₹10,86 ಕೋಟಿ ಮೌಲ್ಯದ ಮಾದಕ ವಸ್ತು ವಶ : ಬಿ. ದಯಾನಂದ್

ಬೆಂಗಳೂರು ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) 8 ಕಾನೂನು ಮತ್ತು ಸುವ್ಯವಸ್ಥೆ...