ಇಷ್ಟು ವರ್ಷ ಕರಾವಳಿ ಗದ್ದೆಗಳಲ್ಲಿ ಓಡುತ್ತಿದ್ದ ಕೋಣಗಳು ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಿವೆ. ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನಡೆದ ಕಂಬಳ ಸ್ಪರ್ಧೆಯಲ್ಲಿ ಕಾಂತಾರ ಖ್ಯಾತಿಯ ಕೋಣಗಳಾದ ಅಪ್ಪು-ಕಿಟ್ಟು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ.
ಈ ಕೋಣಗಳ ಮಾಲೀಕ ಪರಮೇಶ್ವರ ಭಟ್. ಇವರು ಉಡುಪಿ ಜಿಲ್ಲೆಯ ಬೈಂದೂರಿನವರು. ಅಪ್ಪು–ಕಿಟ್ಟು ಕೋಣಗಳು ಪದಕ ಗೆಲ್ಲುತ್ತಿದ್ದಂತೆ ಕೋಣಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.