- ಮಾರ್ಚ್ 29ರಿಂದ ಆರಂಭವಾಗಲಿರುವ ಕರಗ ಉತ್ಸವ
- ಕರಗ ಹೊರಲಿರುವ ತಿಗಳ ಸಮುದಾಯದ ಅರ್ಚಕ ಜ್ಞಾನೇಂದ್ರ
ರಾಜಧಾನಿ ಬೆಂಗಳೂರಿನ ವಿಶ್ವವಿಖ್ಯಾತಿ ಕರಗ ಶಕ್ತ್ಯೋತ್ಸವ ಏಪ್ರಿಲ್ 6ರ ಚೈತ್ರ ಪೂರ್ಣಿಮೆ ಹುಣ್ಣಿಮೆಯಂದು ನಡೆಯಲಿದೆ.
ಈ ವರ್ಷದ ಕರಗ ಉತ್ಸವವೂ ಮಾರ್ಚ್ 29ರಿಂದ ಆರಂಭವಾಗಿ, ಏಪ್ರಿಲ್ 8ರವರೆಗೆ ನಡೆಯಲಿದೆ. ಈ ಉತ್ಸವವೂ ಸತತ 11 ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಈ ಬಾರಿ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದ್ದು, ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ಇರುತ್ತಾರೆ. ಈ ಬಾರಿ ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಕರಗವನ್ನು ಹೊರಲಿದ್ದಾರೆ. ಇವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಏ. 6ರ ರಾತ್ರಿ 12 ಗಂಟೆಗೆ ಕರಗ ನಗರ ಪ್ರದಕ್ಷಿಣೆಗೆ ಹೊರಡಲಿದೆ.
ಕರಗದ ವೇಳಾಪಟ್ಟಿ
- ಮಾ. 29ರಂದು ಧ್ವಜಾರೋಹಣ
- ಮಾ. 29 ರಿಂದ ಏ. 8ರವರೆಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ನಾನಾ ಧಾರ್ಮಿಕ ಕಾರ್ಯಕ್ರಮಗಳು
- ಏ. 3ರಂದು ಆರತಿ
- ಏ. 4 ರಂದು ಹಸಿಕರಗ
- ಏ. 5 ರಂದು ಪೊಂಗಲ್
- ಏ. 6ರಂದು ಕರಗ ಉತ್ಸವ