ಶೆಟ್ಟರ್-ಸವದಿ ಜೋಡಿ ಹಣಿಯುವ ಹೊಣೆ ಬಿಎಸ್‌ವೈ ಹೆಗಲಿಗೆ; ಫಲ ನೀಡಬಹುದೇ ಬಿಜೆಪಿ ತಂತ್ರ?

Date:

  • ಶೆಟ್ಟರ್- ಸವದಿ ಜೋಡಿ ಹಣಿಯುವ ಹೊಣೆ ಬಿಎಸ್ ವೈ ಹೆಗಲಿಗೇರಿಸಿದ ವಿಘ್ನ ಸಂತೋಷಿ
  • ಮಾತು ತಪ್ಪಿದ ಪಕ್ಷದ ವಿರುದ್ಧ ಗೆದ್ದು ಬೀಗುವರೇ ಜಗದೀಶ್ ಶೆಟ್ಟರ್- ಲಕ್ಷ್ಮಣ ಸವದಿ

ಬಿಜೆಪಿಯ ‘ವಿಘ್ನ ಸಂತೋಷಿ’ಗಳ ರಣತಂತ್ರದೊಳಗೆ ಸಿಲುಕಿರುವ ಬಿ ಎಸ್ ಯಡಿಯೂರಪ್ಪನವರಿಗೆ ಇದೀಗ ಮರ ಮತ್ತು ಕೊಡಲಿ ಹಿಡಿಕೆಯ ಸಂಬಂಧ ಸನ್ನಿವೇಶ ಎದುರಾಗಿದೆ.

ವೃಕ್ಷ ಸಂಕುಲಕ್ಕೆ ಕೊಡಲಿ ಕಾವೇ ಕಂಟಕವಾದಂತೆ ಲಿಂಗಾಯತ ಸಮುದಾಯದ ಶೆಟ್ಟರ್ –ಸವದಿ ಜೋಡಿ ಹಣಿಯಲು ಬಿ ಎಲ್ ಸಂತೋಷ್ ಬಳಗ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿಎಎಸ್ವೈ ಅವರನ್ನು ಮುಂದೆ ಬಿಟ್ಟಿದೆ.

ಒಂದು ಕಾಲಕ್ಕೆ ತಾನೇ ಬದಿಗೆ ಸರಿಸಿದ್ದ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆ ಸಂತೋಷ್ ಬಳಗ ಕರೆತಂದಿದ್ದು ಇದೇ ಲಿಂಗಾಯತ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಎನ್ನುವುದು ಈಗ ಜಗಜ್ಜಾಹೀರಾಗಿರುವ ಸತ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಗ ವಿಜಯೇಂದ್ರರ ರಾಜಕೀಯ ಭವಿಷ್ಯ ಭದ್ರಗೊಳಿಸಲು ತಾನೇ ತ್ಯಾಗಕ್ಕೆ ಸಿದ್ದನಾಗಿ, ವರುಣಾದ ಬಲಿಪೀಠದಿಂದ ಅವರನ್ನು ರಕ್ಷಿಸಿ ಶಿಕಾರಿಪುರದಲ್ಲಿ ಸೇಫ್ ಮಾಡಲು ತೆಗೆದುಕೊಂಡ ಸಹಾಯಕ್ಕಾಗಿ ಈಗ ಯಡಿಯೂರಪ್ಪ ಬಿಜೆಪಿ ಮತ್ತು ಸಂತೋಷ್ ಪಾಲಿಗೆ ಜೀ ಹುಜೂರ್ ಪಾಲಕ.

ಈ ಲಾಭದ ಲೆಕ್ಕಾಚಾರವನ್ನೇ ತಮ್ಮ ದಾಳವಾಗಿಸಿಕೊಂಡಿರುವ ಸಂತೋಷ್ ಮತ್ತವರ ಬಳಗ, ಪಕ್ಷ ಬಿಟ್ಟ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಿದೆ.

ಲಿಂಗಾಯತರನ್ನು ಹಣಿಯಲು ಲಿಂಗಾಯರತನ್ನೇ ಮುಂದೆ ಬಿಡುವ ರಣತಂತ್ರ ಇವರದ್ದು. ಅಂದರೆ ಇದರ ಲಾಭ ನಷ್ಟದ ಹೊಣೆ ಎರಡೂ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ ಯಡಿಯೂರಪ್ಪ ಹೆಗಲಿಗೆ ಹೋಗುವಂತೆ ಮಾಡುವುದು ಅವರ ಸ್ಪಷ್ಟ ಉದ್ದೇಶ.

ಈ ಪ್ರತಿಷ್ಠೆಯ ಹೋರಾಟದಲ್ಲಿ ಗೆದ್ದು ಬಂದರೆ ನಾವು ತೆಗೆದುಕೊಂಡ ನಿರ್ಧಾರಕ್ಕೆ ಸಿಕ್ಕ ಜಯ ಎನ್ನುವುದು, ಸೋತರೆ ಜಾತಿ ಪ್ರೇಮಕ್ಕೆ ಕಟ್ಟು ಬಿದ್ದು ಯಡಿಯೂರಪ್ಪನವರೇ ಪಕ್ಷಕ್ಕೆ ಕಳಂಕ ತಂದರು ಎಂದು ಹೇಳಿ ಮರಳಿ ಅವರನ್ನು ಪಕ್ಷದಿಂದ ದೂರ ಸರಿಸುವುದು ಸಂತೋಷ ಕೂಟದ ಲೆಕ್ಕಾಚಾರ.

ಹೀಗಾಗಿ ಪಕ್ಷ ಬಿಟ್ಟ ಇಬ್ಬರು ಲಿಂಗಾಯತ ನಾಯಕರನ್ನು ಕಟ್ಟಿ ಹಾಕಲು ಬಿಜೆಪಿ ಈಗ ಪ್ರತ್ಯೇಕ ಪಡೆಯೊಂದನ್ನು ರೂಪಿಸಿ ರಣಕಣದಲ್ಲಿ ಅವರನ್ನು ಕಟ್ಟಿ ಹಾಕಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಾಲು ಸಾಲು ಸಭೆ ನಡೆಸಲು ಆದೇಶ ನೀಡಿರುವ ಸಂತೋಷ ಪಡೆ ಸಿಕ್ಕಸಿಕ್ಕಲ್ಲಿ ಈ ಇಬ್ಬರೂ ನಾಯಕರ ವಿರುದ್ದ ವಾಗ್ದಾಳಿ ನಡೆಸುವಂತೆ ಸೂಚಿಸಿದೆ. ಜೊತೆಗೆ ಈ ಜವಾಬ್ದಾರಿಯನ್ನು ಪಕ್ಷದ ಲಿಂಗಾಯತ ಹಾಗೂ ರಾಷ್ಟ್ರೀಯ ನಾಯಕರ ಹೆಗಲಿಗೇರಿಸಿದೆ.

ಕಳೆದೆರಡು ದಿನಗಳಿಂದ ಸವದಿ ಹಾಗೂ ಶೆಟ್ಟರ್ ಕ್ಷೇತ್ರಗಳಲ್ಲಿ ಸರಣಿ ಸಭೆ ನಡೆಸಿರುವ ಬಿಜೆಪಿ, ಅಲ್ಲಿನ ಲಿಂಗಾಯತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪಕ್ಷಕ್ಕೆ ಶೆಟ್ಟರ್ -ಸವದಿ ಜೋಡಿ ಮಾಡಿರುವ ದ್ರೋಹದ ಬಗ್ಗೆ ತಿಳಿವಳಿಕೆ ಮೂಡಿಸಿ ಅವರನ್ನು ಎತ್ತಿಕಟ್ಟುತ್ತಿದೆ.

ಹಾಗೆಯೇ ಈ ನಾಯಕರಿಬ್ಬರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಬರುವ ಆರೋಪಗಳಿಗೆ ಉತ್ತರ ಕೊಡುವುದರಲ್ಲೇ ಕಾಲಹರಣ ಮಾಡುವಂತೆ ಮಾಡುವ ಪ್ರಯೋಗವನ್ನೂ ಸಂತೋಷ ಪಡೆ ಮಾಡಿದೆ.

ಇವಿಷ್ಟು ಸಾಲದು ಎನ್ನುವಂತೆ ಯಡಿಯೂರಪ್ಪನವರ ಬಾಯಿಯಿಂದಲೇ ಶೆಟ್ಟರ್ ಸೋಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿಸಿದೆ. ಇದಿಷ್ಟೂ ಸಾಲದು ಎನ್ನುವಂತೆ ಇವರಿಬ್ಬರ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದ ಕಾರಣದಿಂದ ಅವರಿಗೆ ಟಿಕೆಟ್ ಕೊಡಲಿಲ್ಲ. ಇವರು ಕ್ಷೇತ್ರವನ್ನು ಸರಿಯಾಗ ನೋಡಿಕೊಳ್ಳಲಿಲ್ಲ ಎಂದು ಬಿಂಬಿಸುವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? :ಜಗದೀಶ್ ಶೆಟ್ಟರ್ ಗೆಲ್ಲುವುದು ಶತಸಿದ್ಧ : ರಕ್ತದಲ್ಲಿ ಪತ್ರ…

ಇದರ ಜೊತೆಜೊತೆಗೆ ದೆಹಲಿ ನಾಯಕರಿಂದಲೂ ಇಬ್ಬರ ಬಗ್ಗೆ ವಾಗ್ದಾಳಿ ನಡೆಸುವ ಹೇಳಿಕೆಗಳನ್ನು ಕೊಡಿಸಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸುಶೀಲಕುಮಾರ ಮೋದಿ ಇವರಿಬ್ಬರ ವಿರುದ್ಧ ಕಿಡಿಕಾರಿದ್ದಾರೆ.

‘ವರಿಷ್ಠರ ಮಾತು ಧಿಕ್ಕರಿಸಿ ಇವರಿಬ್ಬರೂ ಕಾಂಗ್ರೆಸ್‌ಗೆ ಹೋಗಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ಹೊರಹೋದವರು ಯಾರೂ ಗೆದ್ದಿಲ್ಲ. ಬೇರೆಯವರ ಮುಂದೆ ಇವರು ನೀರಿನಿಂದ ಹೊರತೆಗೆದ ಮೀನಿನಂತಾಗುತ್ತಾರೆ. ನೋಡಿ’ ಎಂದು ಹೇಳಿದ್ದಾರೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನವ ಬಿಜೆಪಿ ಮತ್ತು ಸಂತೋಷ ಕೂಟದ ತಂತ್ರ ಹೇಗೆ ವರ್ಕ್ ಆಗುತ್ತದೆ? ಮತ್ತು ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ತಂತ್ರಗಳಿಗೆ ಪ್ರತಿತಂತ್ರ ಹೆಣೆದು, ಹೇಗೆ ಗೆದ್ದು ತೋರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಜವಾದ ಬದಲಾವಣೆ ಮಾಡುವವರು ನೀವು: ಮೊದಲ ಬಾರಿ ಮತದಾನ ಮಾಡುವವರಿಗೆ ಖರ್ಗೆ ಸಂದೇಶ

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮೊದಲ...

₹4.8 ಕೋಟಿ ನಗದು ವಶ; ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಚಕ್ಷಣ ದಳದ (ಎಫ್‌ಎಸ್‌ಟಿ) ಅಧಿಕಾರಿಗಳು ₹4.8...

ಪುತ್ತೂರು | ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು

ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಮತದಾರರು ಮೊಬೈಲ್‌ ತೆಗೆದುಕೊಂಡು ಹೋಗದಂತೆ ಚುನಾವಣಾ...

ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಮುಸ್ಲಿಮರಿಗೆ ನೀಡಿರುವ ಮೀಸಲಾತಿ ರದ್ದು ಮಾಡಿರುವ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರಕ್ಕೆ...