ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಮಧುಲತಾ ಗೌಡರ್ ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್ಯುಸಿಐ(ಸಿ) ಮಧುಲತಾ ಗೌಡರ್ ಅವರಿಗೆ ಕ್ಷೇತ್ರದ ಮತದಾರರು ಮತ ನೀಡುವಂತೆ ಮನವಿ ಮಾಡಿದೆ.
“ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ಜನ ವಿರೋಧಿ ರಾಜಕೀಯದಿಂದ ಬೇಸತ್ತು ಹೋಗಿರುವ ಜನತೆ ಹತಾಶರಾಗಬಾರದು. ಸಮಾಜದಲ್ಲಿ ಬದಲಾವಣೆಯನ್ನು ತರುವ ಏಕಮಾತ್ರ ಅಸ್ತ್ರವಾಗಿರುವ ಜನ ಹೋರಾಟವನ್ನೇ ಧ್ಯೇಯವಾಗಿಟ್ಟುಕೊಂಡಿರುವ ಎಸ್ಯುಸಿಐಯನ್ನು ಬೆಂಬಲಿಸಬೇಕು. ಪಕ್ಷದ ಅಭ್ಯರ್ಥಿ ಮಧುಲತಾ ಗೌಡರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಕಣದಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ ಮೊಮ್ಮಗ : ಮೈಸೂರಿನ ಜನ ಹೇಳಿದ್ದೇನು ಗೊತ್ತೇ?
“ಮಧುಲತಾ ಗೌಡರ್ ಅವರು ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾಗಿ, ತಮ್ಮ ಇಡೀ ಬದುಕನ್ನೇ ಸಾಮಾಜಿಕ ಚಳವಳಿಗೆ ಸಮರ್ಪಿಸಿಕೊಂಡಿದ್ದಾರೆ. ಪಕ್ಷದ ಮಹಿಳಾ ಮುಂದಾಳುವಾಗಿ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಹೋರಾಟದ ಧ್ವನಿಯಾಗಿದ್ದಾರೆ” ಎಂದು ಪಕ್ಷ ಹೇಳಿದೆ.
ಮಧುಲತಾ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಎಸ್ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ, ಪಕ್ಷದ ಹಿರಿಯ ಸದಸ್ಯರಾದ ಗಂಗಾಧರ್ ಬಡಿಗೇರ್, ಭವಾನಿಶಂಕರ ಗೌಡ, ಶರಣು ಗೋನವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.