ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ಪಿಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಗಂಗಾವತಿಯ ಮತಗಟ್ಟೆ ಸಂಖ್ಯೆ 159 ಮತ್ತು 160ರಲ್ಲಿ ಕೆಆರ್ಪಿಪಿಯ ಮಹಿಳಾ ಏಜೆಂಟ್ವೊಂಬ್ಬರು ತಮ್ಮ ಸೀರೆಗೆ ಜನಾರ್ದನ ರೆಡ್ಡಿ ಹೆಸರಿರುವ ಬ್ಯಾಡ್ಜ್ ಹಾಕಿಕೊಂಡು ಬಂದಿದ್ದರು. ಅವರಿಗೆ ಮತಗಟ್ಟೆಯಲ್ಲಿ ಕೂರಲು ಹೇಗೆ ಅವಕಾಶ ಕೊಟ್ಟಿರಿ ಎಂದು ಚುನಾವಣಾ ಅಧಿಕಾರಿಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆದುಕೊಂಡಿದ್ದಾರೆ.
ಪರವಾನಗಿ ಪಡೆದು ಬ್ಯಾಡ್ಜ್ ಧರಿಸಿದ್ದಾಗಿ ಮಹಿಳೆ ವಾದಿಸಿದ್ದಾರೆ. ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಚುನಾವಣಾ ಅಧಿಕಾರಿಗಳು ಮಹಿಳೆಯನ್ನು ಮತಗಟ್ಟೆಯಿಂದ ಹೊರಗೆ ಕಳಿಸಿದ್ದಾರೆ.