ಹೆಚ್ಚುತ್ತಿರುವ ದ್ವೇಷ ಮತ್ತು ಹಿಂದಿ ಚಿತ್ರರಂಗದ ʼಜಾಣ ಮೌನʼ

Date:

Advertisements
  • ಆರ್ಯನ್‌ ಖಾನ್‌ ಬಂಧನ ಹಿಂದಿ ಚಿತ್ರರಂಗಕ್ಕೆ ನೀಡಿದ ಸಂದೇಶ
  • ಶಾರುಖ್‌ ಖಾನ್‌ ಸ್ಥಿತಿಯೇ ಹೀಗಾದರೆ ಉಳಿದವರ ಗತಿಯೇನು?

ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಅದೇ ಕಾರಣಕ್ಕೆ ಜೀವ ಬೆದರಿಕೆಗಳನ್ನು ಕೂಡ ಎದುರಿಸಿದ್ದಾರೆ. ಜನಪರ ನಿಲುವುಗಳ ಮೂಲಕ ಸದಾ ಸುದ್ದಿಯಾಗುವ ಅವರು ಇದೀಗ ಹಿಂದಿ ಚಿತ್ರರಂಗದ ʼಜಾಣ ಮೌನʼದ ಕುರಿತು ಮಾತನಾಡಿದ್ದಾರೆ.

ಹಿಂದಿ ಚಿತ್ರರಂಗದ ಮಂದಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಾವತ್ತಿಗೂ ತುಟ್ಟಿ ಬಿಚ್ಚುವುದಿಲ್ಲ. ಷಡ್ಯಂತ್ರದ ಸಿನಿಮಾಗಳೇ ವಿಜೃಂಭಿಸುತ್ತಿದ್ದರೂ ಅದರ ಬಗ್ಗೆ ಯಾವ ಕಲಾವಿದನೂ ಮಾತನಾಡದಷ್ಟು ಭಯದ ವಾತಾವರಣ ಬಾಲಿವುಡ್‌ನಲ್ಲಿದೆ ಎಂದು ಹಿರಿಯ ನಟ ನಾಸಿರುದ್ದೀನ್‌ ಶಾ ಅಭಿಪ್ರಾಯ ಪಟ್ಟಿದ್ದಾರೆ.

ನಾಸೀರುದ್ದೀನ್‌ ಶಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನ ಭಾವಾನುವಾದ

Advertisements

ದ್ವೇಷದ ವಾತಾವರಣ ದೇಶದ ಸಾಮಾಜಿಕ ಸೌಹಾರ್ದವನ್ನು ಹದಗೆಡಿಸುತ್ತಿದೆ. ದ್ವೇಷದ ಕಾರಣಕ್ಕಾಗಿಯೇ ಜನ ಭಯಭೀತರಾಗಿದ್ದಾರೆ. ಒಂದು ಕಾಲಕ್ಕೆ ಹಿಂದಿ ಚಿತ್ರರಂಗದಲ್ಲಿ ಕೆ.ಎಸ್‌ ಅಬ್ಬಾಸ್‌, ವಿ ಶಾಂತಾರಾಮ್‌ ತರಹದ ನಿರ್ದೇಶಕರು ಪ್ರಗತಿಪರ ಚಿತ್ರಗಳ ಮೂಲಕ ಸಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ, ಹಿಂದಿ ಚಿತ್ರರಂಗ ನಿರ್ದಿಷ್ಟ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಯಾವತ್ತಿಗೂ ಜಾಗೃತವಾಗಿ ನಡೆದುಕೊಳ್ಳಲೇ ಇಲ್ಲ. ಚಿತ್ರರಂಗದ ಯಾರೊಬ್ಬರೂ ಸಮಸ್ಯೆಗಳನ್ನು ಎದುರಿಸುವ ದಿಟ್ಟತನ ತೋರಲಿಲ್ಲ. ಷಡ್ಯಂತ್ರದ ಸಿನಿಮಾಗಳೇ ವಿಜೃಂಭಿಸುತ್ತಿದ್ದರೂ, ಆ ಸಿನಿಮಾಗಳು ತಮ್ಮ ನಂಬಿಕೆಗೆ ವಿರುದ್ಧವಾಗಿದ್ದರೂ ಅದರ ಬಗ್ಗೆ ಯಾವ ಕಲಾವಿದನೂ ಮಾತನಾಡದಷ್ಟು ಭಯದ ವಾತಾವರಣ ಬಾಲಿವುಡ್‌ನಲ್ಲಿದೆ.

ಯಾವುದೇ ವಿಚಾರವನ್ನು ಜನರಿಗೆ ತಲುಪಿಸಲು ಸಿನಿಮಾ ಶಕ್ತಿಶಾಲಿ ಮಾಧ್ಯಮ. ದೇಶಕ್ಕಾಗಿ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗಾದ ಅನ್ಯಾಯದ ಬಗ್ಗೆ ಯಾರಿಗಾದರೂ ಸಿನಿಮಾ ಮಾಡುವ ಧೈರ್ಯ ಇದೆಯೇ? ಇಂತಹ ವಿಚಾಗಳ ಬಗ್ಗೆ ಸಿನಿಮಾ ಮಾಡಿದರೆ ಮುಂದೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯ ಎಲ್ಲರಲ್ಲೂ ಇದೆ. ಸಿನಿಮಾದ ಮೂಲಕ ಸತ್ಯಾಂಶಗಳನ್ನು ಹೇಳಲು ಹೊರಟರೆ, ಸಮಸ್ಯೆಗಳ ಬಗ್ಗೆ ಮಾತನಾಡುವ ಪ್ರಯತ್ನ ಮಾಡಿದರೆ ತಮ್ಮ ಬಳಿ ಇರುವುದನ್ನೆಲ್ಲ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು. ಇಲ್ಲವೇ ವೈಯಕ್ತಿಕವಾಗಿ ದೌರ್ಜನ್ಯಕ್ಕೆ ಒಳಗಾಗಬಹುದು ಎಂಬ ಭಯ ಹಿಂದಿ ಸಿನಿಮಾ ಮಂದಿಯಲ್ಲಿದೆ. ಆರ್ಯನ್‌ ಖಾನ್‌ ಬಂಧನ ಪ್ರಕರಣ ಚಿತ್ರರಂಗದವರಿಗೆ (ಕೇಂದ್ರ ಸರ್ಕಾರ) ನೀಡಿದ ಸಂದೇಶ ಎಂದು ನನಗನ್ನಿಸುತ್ತದೆ. ನಾವು ಶಾರುಖ್‌ ಖಾನ್‌ ಅವರನ್ನೇ ಈ ಸ್ಥಿತಿಗೆ ತರಬಹುದು ಎಂದಾದರೆ ಉಳಿದವರು ಯಾವ ಲೆಕ್ಕ ಎಂಬ ಸಂದೇಶವದು. ಹಿಂದಿ ಚಿತ್ರರಂಗ ದೇಶದ ಆಗುಹೋಗುಗಳ ಬಗ್ಗೆ ಮೌನವಹಿಸಿರುವುದು ಇದೇ ಮೊದಲೇನಲ್ಲ. ಎಲ್ಲ ಸಂದರ್ಭದಲ್ಲೂ ಈ ಚಿತ್ರರಂಗದ ಮಂದಿ ಇದೇ ರೀತಿ ವರ್ತಿಸುತ್ತಾ ಬಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ʼದಿ ಕೇರಳ ಸ್ಟೋರಿʼ ಕುರಿತ ಹೇಳಿಕೆ ತಿರುಚಿದ ಮಾಧ್ಯಮಗಳು : ಚಳಿ ಬಿಡಿಸಿದ ನವಾಜುದ್ದೀನ್‌ ಸಿದ್ದಿಕಿ

ನಾನು ನನ್ನ ಅಭಿಪ್ರಾಯವನ್ನು ಹೇಳಲು ಎಂದಿಗೂ ಅಂಜುವುದಿಲ್ಲ. ಆದರೆ, ಈ ದೇಶದ ಭವಿಷ್ಯವನ್ನು ಯೋಚಿಸಿದಾಗ ಭಯಭೀತನಾಗುತ್ತೇನೆ. ಭಾರತ ಪ್ರಗತಿಯಲ್ಲಿ ಹಿಂದೆ ಬೀಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ದ್ವೇಷ ಹೆಚ್ಚುತ್ತಿದೆ. ಕೆಲ ವರ್ಷಗಳ ಹಿಂದೆ ಇದೇ ರೀತಿ ಮಾತನಾಡಿದ್ದಕ್ಕೆ ಹಲವರು ನನಗೆ ಬೆದರಿಕೆಯ ಪತ್ರಗಳನ್ನು ಬರೆದಿದ್ದರು. ಓರ್ವ ವ್ಯಕ್ತಿಯಂತೂ ಪಾಕಿಸ್ತಾನಕ್ಕೆ ಹೋಗಿ ಎಂದು ವಿಮಾನದ ಟಿಕೆಟ್‌ ಬುಕ್‌ ಮಾಡಿ ಮನೆಗೆ ಕಳಿಸಿಕೊಟ್ಟಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X