ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಮಂಡ್ಯ ಜಿಲ್ಲೆಯ ಚಿಕ್ಕತಮ್ಮನಹಳ್ಳಿಯ ಮರಿಯಮ್ಮ

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

ಮಾಧ್ಯಮದ ಮಂದಿ ಸಾಮಾನ್ಯವಾಗಿ ಯಾರನ್ನು ಮಾತಾಡಿಸ್ತಾರೆ? ಸುದ್ದಿಗಳಿಗೆ ಬೇಕಾದ ಮಾಹಿತಿ ಯಾರಿಂದ ಸಿಗುತ್ತೋ ಅವ್ರನ್ನು ಕಾದಿದ್ದು ಮಾತಾಡಿಸ್ತಾರೆ; ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರೋರನ್ನು ಬೆನ್ನತ್ತಿ ಹೋಗಿ ಮಾತಾಡಿಸ್ತಾರೆ; ಯಾರೆಲ್ಲ ಸಮಸ್ಯೆಗಳಿಗೆ ತುತ್ತಾಗಿರ್ತಾರೋ ಅಂಥವ್ರನ್ನು – ಅದೂ ತಮಗೆ ಅದು ಸಮಸ್ಯೆ ಅಂತ ಅನ್ನಿಸಿದರೆ ಮಾತ್ರ ಮಾತಾಡಿಸ್ತಾರೆ; ಇನ್ನು ಸೆಲೆಬ್ರಿಟಿಗಳನ್ನು ಎಲ್ಲಿ ಸಿಕ್ಕಿದ್ರೂ ಮಾತಾಡಿಸ್ತಾರೆ; ರಾಜಕಾರಣಿಗಳು ಎಲ್ಲೇ ಕಂಡ್ರೂ ಹಿಂದೆ ಹೋಗ್ತಾರೆ, ‘ಸಾಧಕರು’ ಅಂತ ಹಣೆಪಟ್ಟಿ ಹಚ್ಚಿಕೊಂಡವ್ರನ್ನು ಅದೊಂದೇ ಕಾರಣಕ್ಕೆ ಮಾತಾಡಿಸ್ತಾರೆ; ಎಲೆಕ್ಷನ್ ಟೈಮ್ ಬಂತು ಅಂದ್ರೆ ಅಭಿಪ್ರಾಯ ಸಂಗ್ರಹ ಮಾಡ್ಬೇಕಲ್ಲ ಅನ್ನೋ ಅನಿವಾರ್ಯತೆಯಿಂದಾಗಿ, ಅದ್ರಲ್ಲೂ ತಮಗೆ ಅನುಕೂಲ ಅನ್ನಿಸಿದ ಊರು-ಕೇರಿಗಳಲ್ಲಿ ಸಿಕ್ಕವ್ರನ್ನು ಹಿಡಿದು ಕೂರಿಸಿಕೊಂಡು ಮಾತಾಡಿಸ್ತಾರೆ…

ಇದೆಲ್ಲ ತಪ್ಪೋ ಸರಿಯೋ ಅನ್ನೋದು ಇಲ್ಲಿನ ಚರ್ಚೆ ಅಲ್ಲ. ಆದ್ರೆ, ಈಗ ನಾವು ನೆನಪಿಸಿಕೊಂಡ್ವಲ್ಲ – ಇದ್ರಲ್ಲಿ ಯಾವುದೇ ಗುಂಪಿಗೂ ಸೇರದ ಜನರೇ ಹೆಚ್ಚು ಅನ್ನೋದು ಸತ್ಯ. ಹಾಗಾದ್ರೆ, ಅವ್ರನ್ನೆಲ್ಲ ಮಾಧ್ಯಮಗಳು ಮಾತಾಡ್ಸೋದು ಬ್ಯಾಡ್ವಾ? ಬರೀ ತಮ್ಮ ಸುದ್ದಿಗೆ ಬೇಕಾದಾಗ ಮಾತ್ರ… ಅಂದ್ರೆ, ಲಾಭ ಇದ್ರಷ್ಟೇ ಮಾತಾಡ್ಸೋದಾ?

Advertisements

ಇಂಥದ್ದೊಂದು ಕೆಟ್ಟ ಸಂಪ್ರದಾಯಕ್ಕೆ ಬೆನ್ನು ಹಾಕ್ಬೇಕು ಅಂತಾನೇ ನಿಮ್ಮ ‘ಈದಿನ.ಕಾಮ್’ ಈ ವಿಶೇಷ ಆಡಿಯೊ ಸರಣಿ ಶುರುಮಾಡಿದೆ. ಕರ್ನಾಟಕದ ಎಲ್ಲ ಸೀಮೆಗಳ, ಎಲ್ಲ ಬಗೆಯ ಬದುಕನ್ನು ಬದುಕ್ತಿರೋ ನಿಜವಾದ ಜನಸಾಮಾನ್ಯರನ್ನು ಯಾವುದೇ ಉದ್ದೇಶ ಇಲ್ಲದೆ, ಆರಾಮ ಕುಂತು ಮಾತಾಡಿಸ್ತಾ ಹೋಗೋದು ‘ಜನಸಾಮಾನ್ಯರ ಜೊತೆ ಈದಿನ.ಕಾಮ್’ ಸರಣಿಯ ವಿಶೇಷ. ಇಲ್ಲಿ ತೆರೆದುಕೊಳ್ಳುವ ಬದುಕಿನ ಕತೆಗಳು ನಮ್ಮ ಕೇಳುಗರಿಗೆ ಒಂದಿಷ್ಟಾದರೂ ಚೈತನ್ಯ ತುಂಬಿದರೆ ನಮ್ಮ ಶ್ರಮ ಸಾರ್ಥಕ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜೃಂಭಣೆಯ ಹೊಸ್ತಿಲಲ್ಲಿ ಟೆಸ್ಟ್‌ ಕ್ರಿಕೆಟ್: ಮತ್ತೆ ಮರುಕಳಿಸಲಿರುವ ಇತಿಹಾಸ    

ಟೆಸ್ಟ್ ಕ್ರಿಕೆಟ್ ನಿಧಾನವಾಗಿ ನಡೆಯುವ ಹಾಗೆ ತೋರಬಹುದು, ಆದರೆ ಆ ನಿಧಾನಗತಿಯಲ್ಲಿಯೇ...

ಸುಪ್ರೀಂ ಸಿಬ್ಬಂದಿ ನೇಮಕದಲ್ಲಿ ಮೊದಲ ಬಾರಿಗೆ ಮೀಸಲಾತಿ ನೀತಿ ಜಾರಿ: ಸಾಮಾಜಿಕ ನ್ಯಾಯಕ್ಕೆ ಸಂದ ಜಯ

ಮೀಸಲಾತಿಯನ್ನು ಅನುಸರಿಸದ ದೇಶದ ಪ್ರತಿಷ್ಠತ ಖಾಸಗಿ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನ ನೂತನ...

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

Download Eedina App Android / iOS

X