’ಈ ದಿನ’ ಎಕ್ಸ್‌ಕ್ಲೂಸಿವ್‌: ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ?

Date:

Advertisements
ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆಗೆ ಪ್ರಚೋದನೆ ನೀಡಲು ಯತ್ನಿಸುತ್ತಿರುವ ಬಜರಂಗದಳ ಮುಖಂಡನ ವಿಡಿಯೊ ’ಈದಿನ.ಕಾಂ’ಗೆ ಲಭ್ಯವಾಗಿದೆ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಕೋಮು ಗಲಭೆ ಪ್ರಕರಣಕ್ಕೆ ಪ್ರಚೋದನೆ ನೀಡಿದ್ದು ಬಜರಂಗದಳದ ಮುಖಂಡ ‘ರೋಹನ್ ಅಲಿಯಾಸ್ ರೋಯಾ’ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕಾರ್ಯಕ್ರಮದ ಆಯೋಜನೆಯಲ್ಲಿ ಎಸ್.ಡಿ.ಪಿ.ಐ.ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದರು. ಮೆರವಣಿಗೆ ಮೇಲೆ ಕಲ್ಲು ಬಿದ್ದ ಬಳಿಕ ಉದ್ರಿಕ್ತರಾದ ಮುಸ್ಲಿಂ ಯುವಕರು ತಾವು ಕೂಡ ಕಲ್ಲೆಸೆದು ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ ನಗರದ ಅಂಚಿನಲ್ಲಿರುವ ಶಾಂತಿನಗರ (ರಾಗಿಗುಡ್ಡ) ಬಡಾವಣೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ತೂರಿ ಬಂದ ಕಲ್ಲೊಂದು ಉಭಯ ಸಮುದಾಯಗಳ ನಡುವೆ ಗಲಭೆಗೆ ಕಾರಣವಾಗಿತ್ತು. ಈದ್ ಮಿಲಾದ್ ಹಬ್ಬದ ಸಂಭ್ರಮ ಕೆಡಿಸಿ ಪ್ರಚೋದಿಸಲೆಂದು ಕಲ್ಲು ಎಸೆಯಲಾಗಿತ್ತು. ಆದರೆ ಕಲ್ಲು ಎಸೆದದ್ದು ಯಾರೆಂಬುದು ಆರಂಭದಲ್ಲಿ ಪತ್ತೆಯಾಗಿರಲಿಲ್ಲ.

Advertisements

‘ಈ ದಿನ.ಕಾಂ’ಗೆ ಇದೀಗ ಲಭ್ಯವಾಗಿರುವ ಬಲ್ಲಮೂಲಗಳ ಪ್ರಕಾರ ಬಜರಂಗದಳದ ಮುಖಂಡ, ಶಾಂತಿನಗರದ ನಿವಾಸಿ ’ರೋಹನ್ ಅಲಿಯಾಸ್ ರೋಯಾ’ ಎಂಬಾತನೇ ಮೊದಲು ಕಲ್ಲು ಎಸೆದಿದ್ದು ಎಂಬುದು ಖಚಿತವಾಗಿದೆ.

ಪರಿಸ್ಥಿತಿ ಹತೋಟಿಗೆ ಬಂದಿದೆ. ರಾಗಿಗುಡ್ಡ ಶಾಂತವಾಗಿದೆ. ಸೆಕ್ಷನ್ 144 ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬಜರಂಗದಳದವರೂ ಇದ್ದಾರೆ. ಎಸ್ಡಿಪಿಐನ ಕೆಲವು ಮಂದಿ ಬಂಧಿತರಾಗಿದ್ದಾರೆ. ಈವರೆಗೆ 25 ಎಫ್.ಐ.ಆರ್.ಗಳನ್ನು ದಾಖಲಿಸಿದ್ದಾರೆ.

ರೋಹನ್ ಕಲ್ಲು ಎಸೆದ ಬಳಿಕ ಗಲಭೆ ಶುರುವಾಯಿತು. ಉದ್ರಿಕ್ತ ಯುವಕರ ಗುಂಪು ಪ್ರತಿಕ್ರಿಯಿಸಿ ಮತ್ತೊಂದು ಕೋಮಿನ ಮನೆಗಳತ್ತ ಕಲ್ಲು ಎಸೆಯಿತು. ಗಲಭೆಯಲ್ಲಿ ಮೂರೂ ಧರ್ಮಗಳವರ ಮನೆಗಳಿಗೂ ಹಾನಿಯಾಗಿದೆ ಎಂದು ಮೂಲಗಳು ಹೇಳಿವೆ.

ಹಿಂದೂ ಮಹಾಗಣಪತಿ ಮೆರವಣಿಗೆಯ ವೇಳೆ ವಾರಾಣಸಿಯ ‘ವಿವಾದಿತ’ ಗ್ಯಾನವಾಪಿ ಮಸೀದಿ ಶಿವನ ಮಹಾದ್ವಾರ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಲ್ಯಾಸ್ ನಗರದತ್ತ ಶ್ರೀರಾಮನು ಬಾಣ ಬಿಡುತ್ತಿದ್ದಾನೆ ಎಂಬಂತೆ ನಿರ್ಮಿಸಲಾದ ದ್ವಾರ, ಮುಸಲ್ಮಾನರಂತೆ ಗಡ್ಡಧಾರಿ ಹಾಗೂ ಹಸಿರು ಬಣ್ಣದ ಪಂಚೆ ತೊಟ್ಟ ಹಿರಣ್ಯಕಶ್ಯಪುವಿನ ಕರುಳು ಬಗೆಯುತ್ತಿರುವಂತೆ ನಿರ್ಮಿಸಲಾದ ನರಸಿಂಹನ ಕಲಾಕೃತಿ – ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಅಲ್ಪಸಂಖ್ಯಾತರು ಶಾಂತಿ ರೀತಿಯಲ್ಲಿ ವರ್ತಿಸಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ತಾವು ಕೂಡ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು. ಅದೇ ರೀತಿಯಲ್ಲಿ ಭಾನುವಾರ ನಗರಾದ್ಯಂತ ಆಯೋಜನೆಯಾಗಿದ್ದ ಈದ್ ಸಂಭ್ರಮದ ವೇಳೆ ಹಿಂದೂಗಳೂ ಸಹಕರಿಸಿ ಸಂಭ್ರಮಿಸಿದ್ದರು. ಕಲ್ಲು ತೂರಿ ಪ್ರಚೋದಿಸುವ ಪ್ರಯತ್ನ ಶಾಂತಿನಗರಕ್ಕೆ ಮಾತ್ರ ಸೀಮಿತವಾಗಿತ್ತು. ಕಲ್ಲು ತೂರಾಟದ ಹಿಂದೆ ಯಾರಿದ್ದಾರೆಂಬುದು ತಿಳಿದಿರಲಿಲ್ಲ.

ಈ ನಡುವೆ ಔರಂಗಜೇಬ್ ಕಟೌಟ್ ಹೇಗೆ ಬಂತು, ಶಿವಮೊಗ್ಗದಲ್ಲಿ ಇದನ್ನು ಹಾಕಲು ಪ್ರಚೋದಿಸಿದವರು ಯಾರು ಎಂಬ ಕುರಿತು ಪೊಲೀಸ್ ತನಿಖೆ ಆರಂಭವಾಗಿದೆ. ಒಂದು ವೇಳೆ ಯಾರೇ ಹಾಕಿದ್ದರೂ, ಶಾಂತಿ ಕಾಪಾಡಲು ಕಳೆದ ಕೆಲವು ವರ್ಷಗಳಿಂದ ಇಡೀ ಸಮುದಾಯವನ್ನು ಪ್ರಭಾವಿಸುತ್ತಿದ್ದ ಮುಸ್ಲಿಂ ಮುಖಂಡರು ಈ ಕಟೌಟನ್ನು ಏಕೆ ಗಮನಿಸಲಿಲ್ಲ ಎಂಬ ಹಲವು ಪ್ರಶ್ನೆಗಳು ಎದ್ದಿವೆ. ಈ ಮಧ್ಯೆ ಮೊದಲ ಕಲ್ಲು ಎಲ್ಲಿಂದ ಬಂದಿತು ಎಂಬುದಕ್ಕೆ ಈಗ ಸದ್ಯ ರೋಹನ್‌ ಕಡೆಗೆ ಬೆರಳು ಮಾಡಿ ತೋರಿಸಿದೆ. ಉಳಿದ ಪ್ರಶ್ನೆಗಳಿಗೂ ಉತ್ತರ ಆದಷ್ಟು ಬೇಗ ಸಿಗಬೇಕಷ್ಟೇ.

ಕಲ್ಲು ತೂರಿದ ಬಳಿಕ ಭಾನುವಾರ ಸಂಜೆ 5.45ರ ವೇಳೆಯಲ್ಲಿ ಬಜರಂಗದಳದ ಒಂದು ಗುಂಪು ಮರದ ದೊಣ್ಣೆಗಳನ್ನು ಹಿಡಿದು ಓಡಾಡುತ್ತಾ ಗಲಭೆಗೆ ಪ್ರಚೋದಿಸುತ್ತಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಪ್ರಚೋದನೆಯ ಕೃತ್ಯವನ್ನು ತಡೆಯಲು ಪೊಲೀಸ್ ಅಧಿಕಾರಿಗಳು ನಡೆಸಿರುವ ಪ್ರಯತ್ನವನ್ನೂ ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್‌ ಆಗಿದೆ.

ಇದನ್ನೂ ಓದಿರಿ: ಶಿವಮೊಗ್ಗ ಗಲಾಟೆ | ಜನಸಾಮಾನ್ಯರು ಏನಂತಾರೆ? ಇಲ್ಲಿದೆ ʼಈ ದಿನ.ಕಾಮ್‌ʼನ ಪ್ರತ್ಯಕ್ಷ ವರದಿ

ರೋಹನ್ ಜೊತೆಗೆ ಇತರರೂ ಮರದ ತಡಿಕೆಯೊಂದನ್ನು ಮುರಿದು, ಕೋಲುಗಳನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಅದರಲ್ಲಿ ಸಿ.ಆರ್. ಎಂಬ ಅಕ್ಷರಗಳನ್ನು ಬರೆದಿರುವ ಟೀ ಶರ್ಟ್ ಧರಿಸಿರುವಾತನೇ ರೋಹನ್ ಅಲಿಯಾಸ್ ರೋಯಾ. ಈತ ಬಜರಂಗದಳದಲ್ಲಿ ಸಕ್ರಿಯನಾಗಿದ್ದಾನೆ ಎಂದು ಬಲ್ಲಮೂಲಗಳು ‘ಈ ದಿನ.ಕಾಂ’ ಗೆ ತಿಳಿಸಿವೆ.

ರಾಗಿಗುಡ್ಡದಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆಯು ದೊಡ್ಡ ಪ್ರಮಾಣದಲ್ಲಿ ಶುರುವಾಗಿತ್ತು. ರೋಹನ್ ಮತ್ತು ಆತನ ಗುಂಪು ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಮೂಲಕ ಕೋಮು ವೈಮನಸ್ಯಕ್ಕೆ ಕಾರಣವಾಗಿದೆ
“ನಗರದಲ್ಲಿ ಹಿಂದೂ ಗಣಪತಿ ಆಚರಣೆಯ ವೇಳೆ ವಿವಾದಾತ್ಮಕ ಮಹಾದ್ವಾರಗಳನ್ನು ನಗರಸಭೆ ತೆಗೆಸಬೇಕು. ಪೊಲೀಸರು ಈ ಕುರಿತು ಹೆಚ್ಚಿನ ಕ್ರಮ ಜರುಗಿಸಲು ಅಸಾಧ್ಯವಾಗಿದೆ” ಎಂದೂ ಕೆಲವು ಪೊಲೀಸರು ’ಈ ದಿನ’ದೊಂದಿಗೆ ಅಸಹಾಯಕತೆ ತೋಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೈರಲ್‌ ಆಯ್ತು ಬೊಮ್ಮಾಯಿ ಮತ್ತೊಂದು ವಿಡಿಯೋ

ಒಂದು ಬ್ರೆಕಿಂಗ್‌ ವಿಡಿಯೋ ಮಾಡಿ, ಮೋದಿಜಿ ಪ್ರಣಾಳಿಕೆ ಬಗ್ಗೆ ಹೇಳಿದ್ವಿ. ಈಗ...

ವಕ್ಫ್‌ ಒತ್ತುವರಿ ತೆರವು ಭರವಸೆ ನೀಡಿದ್ದೇ ಮೋದಿ

ಈಗಾಗಲೇ ವಕ್ಫ್ ಬಗ್ಗೆ ಎಲ್ಲಾ ರೀತಿಯ ಆಂಗಲ್ ನಲ್ಲೂ ಸಹ ಒಂದಿಷ್ಟು...

ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ...

ಸಾಹಿತ್ಯ ಸಮ್ಮೇಳನ | ಗೋಷ್ಠಿಗಳಲ್ಲೂ ಮಹಿಳಾ ಪ್ರಾತಿನಿಧ್ಯವಿರಲಿ; ರಾಜಕಾರಣಿಗಳು ಕೇಳುಗರಾಗಲಿ

ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ...

Download Eedina App Android / iOS

X