ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ವತಿಯಿಂದ 2024-25ನೇ ಸಾಲಿನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಅಧ್ಯಕ್ಷರಾದ ಡಾ.ಎ.ಆರ್. ಗೋವಿಂದಸ್ವಾಮಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಪ್ರಶಸ್ತಿಗೆ ಬಂಜಾರ ಸಮುದಾಯದ ಲೇಖಕರು ಸ್ವತಃ ತಾವೇ ಬರೆದಿರುವ ಪ್ರಕಾರದಲ್ಲಿ ವರ್ಷದಲ್ಲಿ ಕನಿಷ್ಠ 03 ಶೀರ್ಷಿಕೆಗಳಾದರೂ ಪ್ರಕಟವಾಗಿದ್ದಲ್ಲಿ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಈ ಕೃತಿಗಳು 2022-23 (ಪ್ರಸಕ್ತ ಸಾಲಿಗೆ ಮಾತ್ರ ಸೀಮಿತವಾಗಿ)ರ ಹಿಂದೆ ಮುದ್ರಣಗೊಂಡ ಕೃತಿಗಳು ಹಾಗೂ 2023-24ರ ಸಾಲಿನಲ್ಲಿ ಪ್ರಕಟವಾಗಿರಬೇಕು ಎಂದು ತಿಳಿಸಿದ್ದಾರೆ.
ಬಂಜಾರ ಸಮುದಾಯದ ಸಂಸ್ಕೃತಿ, ನುಡಿ, ಸಾಹಿತ್ಯ, ಕಲೆಗಳು, ಕಲಾವಿದರು, ಸಾಂಸ್ಕೃತಿಕ ವೀರರು /ನಾಯಕರು ಹಾಗೂ ಸಾಧಕರು, ಈ ವಿಷಯಗಳಿಗೆ ಪೂರಕವಾಗಿರಬೇಕು. ಮತ್ತು ಬಂಜಾರ ಸಮುದಾಯದ ಲೇಖಕರು ಸ್ವತಃ ತಾವೇ ಬರೆದಿರುವ ಸೃಜನಶೀಲ, ಜನಪರ ಬರಹಗಳಾದ ಕಥಾ ಸಂಕಲನ, ಕಾದಂಬರಿ, ಕವನ ಸಂಕಲನ, ಜೀವನ ಚರಿತ್ರೆ ಹಾಗೂ ಪ್ರಬಂಧ ಸಂಕಲನ ಕುರಿತ ಪುಸ್ತಕಗಳನ್ನೂ ಸಹ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? 66 ಶಾಲೆಗಳಿಗೆ ಈವರೆಗೂ ಮೊಟ್ಟೆಯೇ ವಿತರಣೆಯಾಗಿಲ್ಲ!
ಆಸಕ್ತರು ತಾವು ಪ್ರಕಟಿಸಿದ ಕೃತಿಯ 03 ಪ್ರತಿಗಳೊಂದಿಗೆ ಸ್ವ ವಿವರಗಳನ್ನು ಒಳಗೊಂಡ ಅರ್ಜಿಯನ್ನು2024ರ ನವೆಂಬರ್ 30ರ ಒಳಗಾಗಿ ಕಚೇರಿ ವೇಳೆಯಲ್ಲಿ ಅಕಾಡೆಮಿಗೆ ಖುದ್ದಾಗಿ ಸಲ್ಲಿಸಲು ಇಲ್ಲವೇ ಅಂಚೆ, ಕೋರಿಯರ್ ಮೂಲಕ ಕಳುಹಿಸಿಕೊಡಲು ತಿಳಿಸಿದ್ದಾರೆ.
ಕಳುಹಿಸಬೇಕಾದ ವಿಳಾಸ, ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ, 1ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು -560002. ಹೆಚ್ಚಿನ ಮಾಹಿತಿಗಾಗಿ : 080-29917745 ದೂರವಾಣಿಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
