ಚಿಕ್ಕಮಗಳೂರು | ಕೊಪ್ಪ-ಶೃಂಗೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಸರಾಯಿ ದರ್ಬಾರ್

Date:

ಪ್ರಕೃತಿಯ ಮಡಿಲಲ್ಲಿರುವ ಸೌಂದರ್ಯದ ತಾಣವಾಗಿರುವ ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಹಲವು ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ತಾಲೂಕಿನಲ್ಲಿ ಆದಿವಾಸಿ, ಬುಡಕಟ್ಟು, ದಲಿತ ಸಮುದಾಯದ ಯವಕರು ಅಕ್ರಮ ಮದ್ಯದ ಹಾವಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೊಪ್ಪ ತಾಲೂಕಿನ ಕಲ್ಲುಗುಡ್ಡೆ, ಮೇಗೂರು, ಹೆಗ್ಗರಕೂಡಿಗೆ, ಕಚ್ಚಿಗೆ, ಗಡಿಕಲ್, ಹಾಗಲಗಂಡಿ ಹೆತ್ತನಹಟ್ಟಿ, ಉತ್ತಮೇಶ್ವರ ಹಾಗೂ ಶೃಂಗೇರಿ ತಾಲೂಕಿನ ಕುಂಚೇಬೈಲು ಸೇರಿದಂತೆ ಎಲ್ಲೆಡೆ ಮದ್ಯವನ್ನು ದಿನಸಿ ಅಂಗಡಿ ಸೇರಿದಂತೆ ಮನೆ ಮನೆಯಲ್ಲಿಯೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾರಾಯಿ ವಿರೋಧಿಸಿ ಮನವಿ

ನೂರಾರು ವರ್ಷಗಳಿಂದ ಇಲ್ಲಿ ಮೂಲ ನಿವಾಸಿಗಳು ವಾಸಿಸುತ್ತ ಬಂದಿದ್ದಾರೆ. ದಲಿತ ಸಮುದಾಯದವರೇ ಹೆಚ್ಚಿನವರಿರುವ ಈ ಊರಿನಲ್ಲಿ ಬಹುತೇಕರು ಕೊಟ್ಟೆ (ಕುಡಿಯುವ ಎಣ್ಣೆ)ಯನ್ನು ಸೇವಿಸಿ ಸಾಯುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಥಳೀಯ ನಿವಾಸಿ ಸುಮಿತ್ರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೇಗುರೂ ಭಾಗದ ಕುಂಚೇ ಬೈಲು ಸುತ್ತಮುತ್ತಲಿರುವ ಗ್ರಾಮಗಳಲ್ಲಿ 40ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೊದಲೆಲ್ಲ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದರು. ಕೆಲವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಂತಹವರು ಖಾಯಿಲೆಯಿಂದ ಬಳಲುತ್ತಿರಲಿಲ್ಲ, ಚೇತರಿಸಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಅಧಿಕ ಮಂದಿ ಹೆಚ್ಚಿನ ಕುಡಿತದ ಚಟದಿಂದ ಸಾಯುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಕಿತ್ತಳೆಗೋಳಿಯಲ್ಲಿ ಆದಿವಾಸಿ ಗಿರಿಜನ ಬಂಗಾಳಿ ಪುಟ್ಟೆಗೌಡರ ಕುಟುಂಬದಲ್ಲಿ ಮೂರು ಮಂದಿ ಮದ್ಯಪಾನ ಸೇವಿಸಿ ಮೊದಲೇ ಮರಣ ಹೊಂದಿದ್ದಾರೆ. ನಂತರ ಪುಟ್ಟೆಗೌಡರು(50) ಅವರೂ ಕುಡಿತಕ್ಕೆ ಬಲಿಯಾದರು. ಸ್ಥಳೀಯರು ಕರ್ನಾಟಕ ಜನಶಕ್ತಿಗೆ ಮಾಹಿತಿ ತಿಳಿಸಿದ ಬಳಿಕ ಸಂಘಟನಾಕಾರರು ಸ್ಥಳಕ್ಕೇ ಧಾವಿಸಿ ಮೃತದೇಹ ಇಟ್ಟು ಸಾರಾಯಿ ವಿರೋಧಿಸಿ ಮಹಿಳೆಯರೊಂದಿಗೆ ಹೋರಾಟ ಮಾಡಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಆರೇಳು ತಿಂಗಳುಗಳ ಹಿಂದೆ ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ವ್ಯಕ್ತಿಗಳಿಗೆ ಕ್ರಮ ಕೈಗೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿದ್ದರು.

ಸ್ಥಳೀಯ ನಿವಾಸಿಗಳು ಈ ದಿನ. ಕಾಮ್‌ನೊಂದಿಗೆ ಮಾತನಾಡಿ, “ಒಂದೇ ಕುಟುಂಬದಲ್ಲಿ ಇಷ್ಟು ಜನ ಸಾಯುತ್ತಾರೆಂದರೆ ಸಮಸ್ಯೆ ಗಂಭೀರವಾಗಿದೆ. ಮಲೆನಾಡಿನಲ್ಲಿ ಶ್ರೀಮಂತರು ಶ್ರೀಮಂತರಾಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ನಾವು ಕೂಲಿಯನ್ನೇ ಆವಲಂಬಿಸಿ ಬದುಕು ಕಟ್ಟಿಕೊಳ್ಳುತ್ತಾ ಜೀವನ ಸಾಗಿಸುತ್ತಿರುವ ಆದಿವಾಸಿ ಬುಡಕಟ್ಟು ದಲಿತ ಸಮುದಾಯಕ್ಕೆ ಸೇರಿದವರು. ನಮ್ಮಲ್ಲಿ ಕೆಲವರಿಗೆ ಮನೆ ಇಲ್ಲದೆ ಸೂರು ಕಟ್ಟಿಕೊಂಡು ಬದುಕುತ್ತಿದ್ದೇವೆ. ದುಡಿದ ಹಣವನ್ನೆಲ್ಲಾ ಸಾರಾಯಿ ಕುಡಿಯಲು ಖರ್ಚು ಮಾಡಿ ಕುಡಿದ ಮತ್ತಿನಲ್ಲಿ ಮನೆಯ ಮಹಿಳೆಯರಿಗೆ ಶೋಷಣೆ, ದೌರ್ಜನ್ಯ ಮಾಡುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ತಿಂಗಳಿಗೆ ಒಬ್ಬರಾದರೂ ಕುಡಿತದಿಂದ ಬಲಿಯಾಗುತ್ತಿದ್ದಾರೆ” ಎಂದು ಅವಲತ್ತುಕೊಂಡರು.

ಗುಡಿಸಲು

ಸ್ಥಳೀಯ ನಿವಾಸಿ ರಾಧಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸರ್ಕಾರದಿಂದ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ಇಲ್ಲಿನ ಮಧ್ಯವರ್ತಿಗಳು ಪ್ರಯತ್ನಪಡುವ ಸಮಯದಲ್ಲಿ ಸುತ್ತಮುತ್ತಲಿನ ಸ್ಥಳೀಯ ಮಹಿಳೆಯರೆಲ್ಲ ಒಗ್ಗೂಡಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಅಂದಿನಿಂದ ತಕ್ಕ ಮಟ್ಟಿಗೆ ಕೆಲವು ದಿನ ಮಾತ್ರ ನಿಯಂತ್ರಣದಲ್ಲಿತ್ತು. ನಂತರ ಯತಾಸ್ಥಿತಿಯಾಗಿ ದಿನಸಿ ಅಂಗಡಿ ಸೇರಿದಂತೆ ಮನೆ ಮನೆಯಲ್ಲಿ ಕೊಟ್ಟೆಯನ್ನು ಮಾರುತ್ತಿರುವುದರಿಂದ ವಿಪರೀತ ಸಮಸ್ಯೆ ಎದುರಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಕೊತಬಾಳ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

“ಇಂತಹ ಪರಿಸ್ಥಿತಿಯಲ್ಲಿ ಮದ್ಯದಂಗಡಿ ತೆರೆಯಲು ಸರ್ಕಾರ ಅನುಮತಿ ನೀಡಿದರೆ ಓದುವ ಮಕ್ಕಳಿಗೆ, ಕೂಲಿ ಕೆಲಸ ಮುಗಿಸಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡುವ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ. ಇನ್ನೂ ವಿಪರೀತ ಕುಡಿತಕ್ಕೆ ಒಳಗಾಗಿ ಜೀವನ ಹಾಗೂ ಜೀವ ಕಳೆದುಕೊಳ್ಳುತ್ತಾರೆಂಬ ಆತಂಕ ಎದುರಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹಿಳಾ ಸಾರಾಯಿ ವಿರೋಧಿ ಹೋರಾಟ ಸಮಿತಿ ರಚನೆ ಮಾಡಿಕೊಂಡು ಎಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸದ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ

ಚಾಮರಾಜನಗರ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ...

ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ

ಹಾಸನ ಸೇರಿದಂತೆ ರಾಜ್ಯದಾದ್ಯಂತ ಓಡಾಡುತ್ತಿರುವ ಸಾವಿರಾರು ಅಶ್ಲೀಲ ವಿಡಿಯೋಗಳುಳ್ಳ ಪೆನ್ ಡ್ರೈವ್,...

ಚಾಮರಾಜನಗರ | ಮತಗಟ್ಟೆ ಧ್ವಂಸ ಮಾಡಿದ ಇಂಡಿಗನತ್ತ ಗ್ರಾಮದಲ್ಲಿ ಏ.29ರಂದು ಮರು ಮತದಾನ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ...

ಬೆಂಗಳೂರು | ಅಬ್ಬರದ ಜನಜಾಗೃತಿ ನಡುವೆಯೂ ಕರ್ತವ್ಯ ಮರೆತ ನಗರದ ಮಂದಿ: ಅದೇ ಹಳೆ ಕಥೆ

ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ....