ಚಿಕ್ಕಮಗಳೂರು | ರೈತ, ದಲಿತ, ಆದಿವಾಸಿಗಳ ಬೃಹತ್‌ ಸಮಾವೇಶ

Date:

  • ʼಜನರ ಏಳಿಗೆಗೆ ದುಡಿಯುವವರಿಗೆ ಮತ ನೀಡಬೇಕುʼ
  • ʼಮತ ಮಾರಿಕೊಳ್ಳುವವರನ್ನು ಬಹಿಷ್ಕಾರ ಮಾಡಬೇಕುʼ

ಬಡಜನರು ಸೂರಿಗಾಗಿ ಮತ್ತು ಭೂಮಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜಕಾರಣಿಗಳು ಹಣ ಮತ್ತು ತೋಳ್ಬಲದಿಂದ ಇವತ್ತು ಅಧಿಕಾರಕ್ಕೆ ಬರುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮುಖಾಮುಖಿಯಾಗಿ ಚರ್ಚೆಸುವ ಉದ್ದೇಶದಿಂದ ‘ಮಲೆನಾಡಿಗರ ಬೃಹತ್ ಆಗ್ರಹ ಸಮಾವೇಶ’ ಆಯೋಜಿಸಿದ್ದೆವು. ಆದರೆ, ಅವರು ಬಂದಿಲ್ಲ. ಜನರಿಗೆ ಮುಖ ತೋರಿಸಲು ಅವರಿಗೆ ಯೋಗ್ಯತೆಯಿಲ್ಲ ಎಂದು ಸಮಾವೇಶದ ಉಸ್ತುವಾರಿ ಗೌಸ್‌ ಮೊಹಿದ್ದೀನ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ರೈತ, ದಲಿತ, ಆದಿವಾಸಿ ಸಂಘಟನೆಗಳ ಮುಖಂಡರು ‘ಮಲೆನಾಡಿಗರ ಬೃಹತ್ ಆಗ್ರಹ ಸಮಾವೇಶ’ ಆಯೋಜಿಸಿದ್ದರು. ಸಮಾವೇಶದಲ್ಲಿ ಗೌಸ್‌ ಮೊಹಿದ್ದೀನ್ ಮಾತನಾಡಿದರು. “ಪ್ರಸ್ತುತದಲ್ಲಿ ಪ್ರಭುತ್ವವು ಮೂಲಭೂತವಾದಿಯಾಗಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಎಷ್ಟು ಜನಕ್ಕೆ ಭೂಮಿ ಕೊಟ್ಟಿದ್ದೀರಿ, ಎಷ್ಟು ಜನಕ್ಕೆ ಮನೆ, ನಿವೇಶನ ಕೊಟ್ಟಿದ್ದೀರಿ ಎಂದು ನಾವೆಲ್ಲರೂ ಎಲ್ಲ ಪಕ್ಷದವರಿಗೆ ಪ್ರಶ್ನೆ ಮಾಡಬೇಕು. ಅದನ್ನು ಪ್ರಮಾಣಿಕವಾಗಿ ಯಾರು ಜಾರಿ ಮಾಡುತ್ತಾರೆಂದು ಅನಿಸುತ್ತದೋ ಅವರಿಗೆ ಮಾತ್ರ ನಾವು ಮತ ನೀಡಬೇಕು. ಜನರ ಏಳಿಗೆಗಾಗಿ ಯಾರು ದುಡಿಯುತ್ತಾರೋ ಅವರಿಗೆ ಮತ ನೀಡಬೇಕು” ಎಂದು ಎಚ್ಚರಿಕೆ ನೀಡಿದರು.

“ಬದುಕು, ನೆಮ್ಮದಿಯ ನಾಳೆಗಾಗಿ ಹಕ್ಕುಪತ್ರ ಇಲ್ಲದೆ ಮಲೆನಾಡಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಭೂಮಿ ಇಲ್ಲದೆ ಜೀವನ ನಡೆಸಲು ಕಷ್ಟಕರವಾಗಿದೆ” ಎಂದು ವೆಂಕಟೇಶ್‌ ಹಾಗಲಗಂಚಿ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆಮ್‌ ಆದ್ಮಿ ಪಕ್ಷದ ಸುಂದರೇಶ್‌ ಗೌಡ್ರು ಮಾತನಾಡಿ, “ಭಾರತದಲ್ಲಿ ಹುಟ್ಟಿದ ಪ್ರತಿ ಮಗುವಿಗೂ ದೆಹಲಿಯಲ್ಲಿ ಸಿಗುವಂತಹ ಉಚಿತ ಆರೋಗ್ಯ, ಶಿಕ್ಷಣ, ಬದುಕಿಗೆ ಆಶ್ರಯ ಸಿಗಬೇಕು. ನಮ್ಮ ಪಕ್ಷ ಇದಕ್ಕೆ ಶೇ.100ರಷ್ಟು ಭರವಸೆ ಕೊಡುತ್ತದೆ” ಎಂದು ಹೇಳಿದರು.

“ಭ್ರಷ್ಟಾಚಾರಕ್ಕೆ ತೊಡಗಿರುವ ಪಕ್ಷಗಳನ್ನು ಮುಟ್ಟುಗೋಲು ಹಾಕುತ್ತೇವೆ. ಮತದಾನದ ಹಕ್ಕನ್ನು ಸಂವಿಧಾನ ನೀಡಿದೆ. ಸಂವಿಧಾನದ ಉಳಿಯಬೇಕೆಂದರೆ, ಮತದಾನ ಬಹಿಷ್ಕಾರ ಮಾಡಬಾರದು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು” ಎಂದು ಹೇಳಿದರು.

“ಅರಣ್ಯ ಹಕ್ಕು ಕಾಯಿದೆಯಲ್ಲಿ ಭೂಮಿ, ವಿದ್ಯುತ್‌, ನೀರು, ಕೃಷಿ ಅಳವಡಿಸಿದ್ದರೆ ಅದನ್ನು ಸ್ಥಳದಿಂದ ರವಾನಿಸುವಂತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕುದುರೆಮುಖ ರಾಷ್ಟ್ರೀಯ ಯೋಜನೆ ಹೊರತು ಪಡಿಸಿ ಸ್ವತಂತ್ರ್ಯ ಪೂರ್ವ ಜನಸಂಖ್ಯೆ 35 ಕೋಟಿ ದಾಟಿದೆ. ಜನರಿಗೆ ಆಹಾರ ಕೊರತೆ ಹೆಚ್ಚಾಗಿದೆ. ಹಾಗಾಗಿ ಭೂಮಿ ಮಂಜೂರು ಮಾಡಬೇಕು. ಜನರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಕೃಷಿ, ತೋಟಗಾರಿಕೆ ಬೆಳೆಗೆ ಜಾಗ ಕೊಟ್ಟಿರುವಂತಹ ಹಲವು ಉದಾಹರಣೆಗಳಿವೆ” ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಪ್ರಾಣಿ-ಪಕ್ಷಿಗಳಿಂದ ಬೆಳೆ ರಕ್ಷಿಸಲು ಮೈಕ್‌ ಮೊರೆಹೋದ ರೈತರು

ಜನರಿಗೆ ಅನ್ನ ಕೊಡಕೆ ಆಗುತ್ತ, ರೈತನ ಮನೆ ಹಾಳು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಸರ್ಕಾರ ಆಗಿರಬಹುದು. ನಾವು ಕೆಲಸ ನಡೆಸುತ್ತಾ ಇರುವಾಗ ಅರ್ಧ ಕೆಲಸ ಮುಗಿಸಿದ ನಂತರ ಅರಣ್ಯ ಇಲಾಖೆಯವರು ತಡೆಯಿಡುತ್ತಾರೆ. ಮುಂದಿನ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...