ಚಿತ್ರದುರ್ಗ | ಅಜ್ಞಾನಕ್ಕೆ ಅಂತ್ಯವಿದೆ, ಜ್ಞಾನವೆಂಬುದು ಅಮರ: ಬಸವ ಹರಳಯ್ಯ ಶ್ರೀ

Date:

Advertisements

ಅಜ್ಞಾನಕ್ಕೆ ಅಂತ್ಯವಿದೆ, ಆದರೆ ಜ್ಞಾನಕ್ಕೆ ಎಂದಿಗೂ ಸಾವು ಎಂಬುದೇ ಇರುವುದಿಲ್ಲ, ಅದು ಅಂತ್ಯವಿಲ್ಲದ್ದು. ಜ್ಞಾನವೆಂಬುದು ಅಮರ. ಅಜ್ಞಾನವು ಅಂತ್ಯವನ್ನು ಕಾಣುತ್ತದೆ. ಆದರೆ ಯಾವುದೇ ಅಂತ್ಯ, ಅಂತರ ಜ್ಞಾನಕ್ಕಿರುವುದಿಲ್ಲ. ಶರಣರು ಜ್ಞಾನದ ಬೆಳಕಿನಲ್ಲಿ ಸಾಗಿದ್ದರಿಂದ ಅವರು ಅಜರಾಮರವಾಗಿ ಉಳಿದಿದ್ದಾರೆ ಎಂದು ಬಸವ ಹರಳಯ್ಯ ಶ್ರೀ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಮಹಾ ಶಿವಶರಣ ಹರಳಯ್ಯಗುರು ಶ್ರೀಪೀಠದಲ್ಲಿ  ಆಯೋಜಿಸಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

“ಜ್ಞಾನದ ಬೆಳಕು ಶರಣರನ್ನು ಸದಾ ಸನ್ಮಾರ್ಗದಲ್ಲಿ ಮುನ್ನಡೆಸಿತು. ಜ್ಞಾನದ ಸನ್ಮಾರ್ಗವೇ ಸದ್ಗತಿಯನ್ನು ತೋರಿಸಿತು. ಜ್ಞಾನದ ಹಾದಿಯಲ್ಲಿ ನಡೆದವರಿಗೆ ಸೋಲೆಂಬುದೇ ಇಲ್ಲ. ಅಜ್ಞಾನದ ಹಾದಿಯಲ್ಲಿ ನಡೆದವರಿಗೆ ಸದಾ ಸೋಲು ಬೆನ್ನೆತ್ತಿರುತ್ತದೆ. ಭಕ್ತಿ, ಜ್ಞಾನ, ವೈರಾಗ್ಯ ಇವುಗಳನ್ನು ಪಡೆಯಲು ಗುರು ಬೇಕು. ಗುರುವಿನಿಂದ ಮಾತ್ರ ಇವುಗಳು ಸಿದ್ದಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.‌

Advertisements

ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಲೆಗೆ ಹೋಗುವಾಗ ಪುಡಾರಿಗಳ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಪದ ಕಲಾವಿದರು, ಸಂಗೀತ ವಿದ್ವಾಂಸರು ಆಗಿರುವ ಗೊಂದಾಳಪ್ಪನವರು ಮಾತನಾಡಿ, “ಗುರುವಿಲ್ಲದ ವಿದ್ಯೆ ಅಜ್ಞಾನದ ಮುದ್ದೆಯಂತೆ, ಗುರುವಿಲ್ಲದೆ ಯಾವ ವಿದ್ಯೆಯೂ ವಿಧ್ಯಾರ್ಥಿಗೆ ಸಿದ್ದಿಸದು. ಗುರುವಿನ ಮಹಿಮೆ ಬಲ್ಲವರೇ ಬಲ್ಲರು. ಗುರು ಒಂದು ದೊಡ್ಡ ಶಕ್ತಿ. ಸೋಲು ಗೆಲುವಿನ ಮೆಟ್ಟಿಲಾಗಬೇಕು, ಸೋತು ಗೆಲ್ಲಬೇಕು, ಗೆದ್ದು ಸೋಲಬಾರದೆಂದು” ಎಂದು ತಿಳಿಸಿದರು.

ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಹರಳಯ್ಯ, ಮುಕ್ತಾಂಬ, ಶಿಕ್ಷಕಿಯರಾದ ರಕ್ಷಿತಾ, ಛಾಯಾ, ಪವಿತ್ರ ಸೇರಿದಂತೆ ಇಡೀ ಶಿಕ್ಷಕ ವೃಂದ, ವಿಧ್ಯಾರ್ಥಿಗಳು ಇದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X