ಪ್ರೊ. ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು (ದಸಂಸ) 50 ವರ್ಷಗಳ ಹೋರಾಟದ ಹೆಜ್ಜೆ ಗುರುತನ್ನು ಹೊಂದಿದ್ದು, ಜುಲೈ 10 ರಂದು ಬೆಂಗಳೂರಿನಲ್ಲಿ 50ನೇ ವರ್ಷದ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. “ದಸಂಸ ಆರಂಭವಾಗಿ ಐವತ್ತು ವರ್ಷಗಳ ಸಂಭ್ರಮದಲ್ಲಿದ್ದೇವೆ. ಸಮಾಜದ ದೂರದೃಷ್ಠಿ, ಒಳಿತಿಗಾಗಿ ಪ್ರೋ. ಕೃಷ್ಣಪ್ಪನವರು ಒಡನಾಡಿಗಳೊಂದಿಗೆ ಪ್ರಾರಂಭಿಸಿದ ಮೂಲ ದಸಂಸದ ಆಶಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಕೃಷ್ಣಪ್ಪನವರು ಡಾ. ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮೂಲಮಂತ್ರದೊಂದಿಗೆ ಸಾಮಾಜಿಕವಾಗಿ ಅನೇಕ ಹೋರಾಟಗಳನ್ನು ಸಂಘಟಿಸಲು ಕಾರಣರಾದರು ಅವರನ್ನು ನಾವು ಅನುಸರಿಸಬೇಕಿದೆ” ಎಂದು ಹೇಳಿದರು.
“ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು, ಸಾರ್ವಜನಿಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ದಸಂಸ ಮಹಿಳಾ ಸಂಚಾಲಾಕಿ ವಿಜಯಲಕ್ಷ್ಮಿ ಹಾಗೂ ದಾವಣಗೆರೆ ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರ ತಾಲ್ಲೂಕ್ ಸಂಚಾಲಕ ಪಿ. ಜೆ. ಮಹಾಂತೇಶ್, ಜಗಳೂರು ತಾಲ್ಲೂಕ್ ಸಂಚಾಲಕ ಕುಬೆಂದ್ರಪ್ಪ, ನ್ಯಾಮತಿ ತಾಲ್ಲೂಕ್ ಸಂಚಾಲಕ ಚಂದ್ರಪ್ಪ, ಹೊನ್ನಾಳಿ ತಾಲ್ಲೂಕ್ ಸಂಚಾಲಕ ಪರಮೇಶ್ ಮತ್ತು ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಪ್ರದೀಪ್. ಕೆ ಟಿ ಜೆ ನಗರ, ಮೆಳ್ಳೆಕಟ್ಟೆ ಪರುಶುರಾಮ್, ಕೊಡಗನೂರ್ ಲಕ್ಷ್ಮಣ,ಜಿಲ್ಲಾ ಖಜಾಂಚಿ ಮಂಜುನಾಥ್ ಆರ್ ತಾಲ್ಲೂಕು ಮಹಿಳಾ ಸಂಚಾಲಾಕಿ ಆರತಿ. ಎಸ್ ಮತ್ತು ತಾಲ್ಲೂಕ್ ಸಂಘಟನಾ ಸಂಚಾಲಕ ನಾಗರಾಜ್ ಬಿ ಚಿತ್ತಾನಹಳ್ಳಿ ಹಾಗೂ ಉಮಾ, ಭವಾನಿ ನಾಗರಾಜ್, ಹಾಗೂ ಇತರರು ಭಾಗವಹಿಸಿದ್ದರು.