ಧಾರವಾಡ | ಮಾ.28ರಂದು ಹುಬ್ಬಳ್ಳಿಯಲ್ಲಿ ಹಲಗಿ ಹಬ್ಬ ಆಚರಣೆ

Date:

Advertisements

ಹೋಳಿ ಹುಣ್ಣಿಮೆಯ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಪ್ರತಿವರ್ಷದಂತೆ ಹಲಗಿ ಹಬ್ಬ ಆಚರಣೆಯ ಪೂರ್ವಭಾವಿಯಾಗಿ ಹುಬ್ಬಳ್ಳಿ ಮೂರುಸಾವಿರಮಠದಲ್ಲಿ ಬುಧವಾರ (ಮಾ.27) ಬೆಳಿಗ್ಗೆ ಡಾ.ಗುಈರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಪತ್ರಿಕಾಗೋಷ್ಠಿನಡೆಸಿದರು.

ಹಲಗಿ ಹಬ್ಬ ಅರ್ಥಾತ್ ಜಗ್ಗಲಗಿ ಹಬ್ಬವನ್ನು ಗುರುವಾರ ಮದ್ಯಾಹ್ನ 3 ಗಂಟೆಯಿಂದ ಮೂರುಸಾವಿರ ಮಠದಿಂದ ಪ್ರಾರಂಭವಾಗಿ ದಾಜಿಬಾನಪೇಟ್, ಕೊಪ್ಪಿಕರ್ ರಸ್ತೆ ಮಾರ್ಗವಾಗಿ ಚಲಿಸಿ ಹುಬ್ಬಳ್ಳಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ನೆರವೇರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಜಿ ಮಾತನಾಡಿ, ಹೋಳಿ ಹಬ್ಬ ಪೌರಾಣಿಕ ಇತಿಹಾಸವನ್ನು ನೆನಪಿಸುವ ವಿಶೇಷ ಹಬ್ಬವಾಗಿದೆ. ಹೋಳಿ ನಮ್ಮ ಭಾರತ ದೇಶದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಹೋಳಿ ಹಬ್ಬವು ದೇಶದ ಭಾವೈಕ್ಯತೆಗೆ ಪೂರಕವಾಗಿದೆ. ಮತ್ತು ಹಲಗಿ ಹಬ್ಬದಲ್ಲಿ ಎಲ್ಲ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಈ ಜಗ್ಗಲಗಿ ಹಬ್ಬದ ಆಚರಣೆ ನಡೆದಿದೆ. ಈಗಾಗಿ ಈ ಸಲವೂ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾದ್ಯಮದ ಮೂಲಕ ವಿನಂತಿಸಿದರು.

Advertisements

ಮಹೇಶ್ ತೆಂಗಿನಕಾಯಿ ಮಾತನಾಡಿ, ನಶಿಸಿ ಹೋಗುತ್ತಿರುವ ಹಿಂದೂ ಸಂಸ್ಕೃತಿ ಹಬ್ಬವನ್ನು ಮುಂದಿನ‌ ಪೀಳಿಗೆಗೂ ಉಳಿಸುವ ಕೆಲಸವಾಗಬೇಕು. ಸಾಂಪ್ರಾದಯಿಕ ಮೆರಗನ್ನು ತಂದುಕೊಡುವ ಕೆಲಸ ಮತ್ತು ಜಗ್ಗಲಗಿ ಹಬ್ಬವನ್ನು ಇಡೀ ರಾಜ್ಯಕ್ಕೆ ಪ್ರಸ್ತುತಪಡಿಸುವ ಕಾರ್ಯವಾಗಬೇಕಿದೆ. ಮೂರುಸಾವಿರಮಠ ಸ್ವಾಮಿಜಿ ನೇತೃತ್ವದಲ್ಲಿ ಈ ಹಲಗಿ ಹಬ್ಬ ನೆರವೇರುತ್ತದೆ. ಈ ಆಚರಣೆಯ ಮೂಲಕ ಎಲ್ಲ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗುತ್ತಿದೆ. ಮೈಸೂರಿನಲ್ಲಿ ನಾಡಹಬ್ಬ ದಸರಾ ಮಾಡುವಂತೆ ಜಗ್ಗಲಗಿ ಹಬ್ಬವನ್ನೂ ಅನ್ಯ ರಾಜ್ಯದಲ್ಲೂ ಆಚರಿಸುವ ರೂಢಿಗೆ ತರಬೇಕು ಎಂದರು.

ವಿವಿಧ ಜಿಲ್ಲೆಗಳಿಂದ ಸುಮಾರು 47 ಕ್ಕೂ ಹೆಚ್ಚು ಜಗ್ಗಲಗೆ ತಂಡಗಳು ಬರಲಿದ್ದಾವೆ. ಮತ್ತು ಜಗ್ಗಲಗಿ ಮೆರವಣಿಯಲ್ಲಿ ನೀರು, ಮಜ್ಜಿಗೆ ವ್ಯವಸ್ಥೆ ಇರುತ್ತದೆ. ಪುರುಷರಿಗಷ್ಟೇ ಅಲ್ಲದೆ ಈ ಜಗ್ಗಲಗೆ ಹಬ್ಬದಲ್ಲಿ ಐದು ಮಹಿಳಾ ತಂಡಗಳು ಭಾಗವಹಿಸುತ್ತವೆ. ಒಟ್ಟಾರೆಯಾಗಿ ಹಿಂದೂ ಪರಂಪರೆಯನ್ನು ಉಳಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X