ಜಗತ್ತಿನಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಗೌರವ, ಸ್ವಾಭಿಮಾನ, ಸ್ವಾತಂತ್ರ್ಯ ಹಾಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ವೈಯಕ್ತಿಕ ಹಕ್ಕಿನ ಪ್ರತಿಪಾದನೆಯ ಜತೆಜತೆಯಲ್ಲಿ ಇತರರ ಹಕ್ಕನ್ನು ಗೌರವಿಸುವುದೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಸಂಜಯ್ ಪಿ ಗುದಗುಡಿ ಹೇಳಿದರು.
ಧಾರವಾಡ ನಗರದ ಅಂಜುಮನ್ ಕಾಲೇಜು ಪದವಿ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನಚಾರಣೆ ಅಂಗವಾಗಿ ಹಮ್ಮಿಕೂಂಡ್ಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಯಾವುದೇ ವರ್ಗ, ಲಿಂಗ, ಮತ, ಧರ್ಮ, ಶ್ರೀಮಂತ, ಬಡವ ಎನ್ನುವ ಭೇದಭಾವ ಇಲ್ಲದೇ ಭೂಮಿಯ ಮೇಲಿನ ಎಲ್ಲ ಮಾನವರು ಸಮಾನರು ಮತ್ತು ಎಲ್ಲರಿಗೂ ಮೂಲಭೂತ ಹಕ್ಕುಗಳಿವೆ ಎಂಬುದನ್ನು ಸಾರಿ ಹೇಳುವುದೇ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಪ್ರಮುಖ ಉದ್ದೇಶ” ಎಂದರು.
“ಅಂಜುಮನೆ ಇಸ್ಲಾಂ ಸಂಥೆಯ ಅಧ್ಯಕ್ಷ ಇಕ್ಬಾಲ್ ಕೆ ಜಮಾದಾರ ಮಾತನಾಡಿ, “ಮಾನವ ಹಕ್ಕುಗಳ ದಿನದಂದು ಪ್ರತಿಯೊಬ್ಬ ವ್ಯಕ್ತಿಗೂ ಮಾನವ ಹಕ್ಕುಗಳ ಮೂಲಭೂತ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸೋಣ ಮತ್ತು ಎಲ್ಲರಿಗೂ ನ್ಯಾಯ, ಸಮಾನತೆ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ಅನುಸರಿಸಲು ಅವಕಾಶವನ್ನು ಕಲ್ಪಿಸುವ ಪಣ ತೊಡೋಣ” ಎಂದರು.
ಡಾ ಎನ್ ಎಂ ಮಕಾನದಾರ ಮಾತನಾಡಿ, “ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಮತ್ತು ಜನರಲ್ಲಿ ಮಾನವ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 10ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮರೆಯದ ಕೆಂಪು ನಕ್ಷತ್ರ ಕೃತಿ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೊ. ನಾಗರಾಜ್ ಕನಕಣಿ ನೋಡಲ್ ಅಧಿಕಾರಿ ಡಾ.ಎನ್.ವಿ. ಗುದಗನವರ್ ಪತ್ರಿಕೋದ್ಯಮದ ಮುಖ್ಯಸ್ಥ ಎಸ್ ಎಸ್ ಅದೋನಿ, ಡಾ.ಎನ್.ಬಿ ನಾಲತವಾಡ, ಡಾ.ಎಫ್.ಎಚ್.ನದಾಫ, ಡಾ ಎಸ್ ಕೆ ಜಾಧವ್ ಇತರ ವಿಭಾಗದ ಸಿಬ್ಬಂದಿ ವರ್ಗ ಇದ್ದರು.