ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬರುವ ಜಯಂತಿಗಳನ್ನು ಸರಳೀಕೃತವಾಗಿ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಏಪ್ರಿಲ್ 14ರಂದು ಇರುವ ಅಂಬೇಡ್ಕರ್ ಜಯಂತಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಏ.4ರಂದು ಮಹಾವೀರ ಜಯಂತಿ, ಏ.06ರಂದು ಅಕ್ಕಮಹಾದೇವಿ ಜಯಂತಿ, ಏ.23ರಂದು ಬಸವ ಜಯಂತಿ, ಏ.25ರಂದು ಶಂಕರಾಚಾರ್ಯ ಜಯಂತಿ, ಏ.27ರಂದು ಭಗೀರಥ ಜಯಂತಿ, ಮೇ.10ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲು ಬೀದರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಏ.14ರಂದು ಆಚರಿಸಬೇಕಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಂತಿಯನ್ನು ಕೈಬಿಡಲಾಗಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದರಿ ಆಚರಣೆಗಳಿಗೆ ಜಿಲ್ಲಾ ಮಟ್ಟಕ್ಕೆ ₹3,000 ಹಾಗೂ ತಾಲೂಕು ಮಟ್ಟಕ್ಕೆ ₹1,500ರೂ.ಗಳಂತೆ ಹಣ ಬಿಡುಗಡೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಸುದೀಪ್ ಹಾಗೂ ನನ್ನದು ರಾಜಕೀಯ ಮೀರಿದ ಸಂಬಂಧ; ನನ್ನ ಪರ ಪ್ರಚಾರ ಮಾಡುತ್ತಾರೆ : ಸಿಎಂ
“ಕಾಂಗ್ರೆಸ್ಗೆ ಅಂಬೇಡ್ಕರ್ ಅವರ ಮೇಲೆಯಾಗಲಿ, ಅವರು ಬರೆದಿರುವ ಸಂವಿಧಾನದ ಮೇಲೆಯಾಗಲಿ ಪ್ರೀತಿ ಮತ್ತು ನಂಬಿಕೆ ಇಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದ್ದರು. ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಜಯಂತಿಗಳನ್ನು ಸರಳವಾಗಿ ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಆದೇಶದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ದಿನಾಂಕವನ್ನು ಕೈಬಿಡಲಾಗಿದೆ.
ನೀವು ಒಬ್ಬ ಅಂಬೇಡ್ಕರ್ ಅವರ ಜಯಂತಿಯನ್ನು ಮರೆತಿರು ಕಾರಣಕ್ಕೆ ತಾಲೂಕು ತಾಲೂಕಿಂದ ಸ್ಟ್ರೈಕ್ ನಡೆದು ನಿಮ್ಮ ಬಿಜೆಪಿ ಸರ್ಕಾರವನ್ನು ಉಳಿಸುತ್ತೆ ನಮ್ಮ ಭೀಮ ಬಂಧುಗಳು ಬಿಜೆಪಿ ಸರ್ಕಾರ ಎಲ್ಲಾ ಹಿಂದುಳಿದ ವರ್ಗದವರ ಜನಕ್ಕೆ ದೊಡ್ಡ ದೊಡ್ಡ ಹೊಡೆತವನ್ನು ಹೊಡಿತಿದೆ ಆದರೆ ಯಾರು ಕೇಳಲ್ಲ ಅಂತ ಬಿಜೆಪಿ ಸರ್ಕಾರ ಮೇಲೆ ಹೋಗಿದೆ ಅಂಬೇಡ್ಕರ್ ವಿಚಾರದಲ್ಲಿ ಯಾವ ದಲಿತನು ಇಂದು ಸರಿಯಲ್ಲ ಇದು ಬಿಜೆಪಿ ಸರ್ಕಾರ ನೆನಪಿರಲಿ