2018ರ ಕರ್ನಾಟಕ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್ ಈ ಬಾರಿ ನಾಲ್ಕು ಕ್ಷೇತ್ರಗಳಿಗೆ ಕುಸಿದಿದೆ. ಎಚ್.ಪಿ.ಸ್ವರೂಪ್ (ಹಾಸನ), ಎಚ್.ಡಿ.ರೇವಣ್ಣ (ಹೊಳೆನರಸೀಪುರ), ಎ ಮಂಜು (ಅರಕಲಗೂಡು) ಮತ್ತು ಸಿ.ಎನ್ ಬಾಲಕೃಷ್ಣ (ಶ್ರವಣಬೆಳಗೊಳ) ಗೆಲುವಿನೊಂದಿದೆ ಜೆಡಿಎಸ್ ಜಯಭೇರಿ ಭಾರಿಸಿದೆ.
ಬೇಲೂರು (ಎಚ್.ಕೆ.ಸುರೇಶ್) ಮತ್ತು ಸಕಲೇಶಪುರ (ಸಿಮೆಂಟ್ ಮಂಜು) ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಅರಸೀಕೆರೆಯಲ್ಲಿ ಕಾಂಗ್ರೆಸ್ನ ಕೆ.ಎಂ ಶಿವಲಿಂಗೇಗೌಡ ಮುನ್ನಡೆ ಸಾಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಬಿಜೆಪಿಗೆ ಶಾಕ್; ಇದ್ದ ಒಂದು ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿ
ಹಾಸನದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ ಬಳಿಕ ಜೆಡಿಎಸ್ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದಾರೆ.