ಮೈಸೂರು | ಆನೆ ಲದ್ದಿ ತುಳಿದು ಮೌಢ್ಯ ಮೆರೆದ ಮೈಸೂರಿಗರು

Date:

Advertisements

ನಮ್ಮ ಜನಾ ಚಂದ್ರನ ಮೇಲೆ ಕಾಲಿಟ್ಟರೂ, ಲದ್ದಿಯ ಮೇಲೆ ಕಾಲಿಟ್ಟರೆ ಒಳ್ಳೆಯದಾಗುತ್ತದೆ ಅನ್ನೋ ಬುದ್ದಿಯನ್ನ ಇನ್ನೂ ಬಿಟ್ಟಿಲ್ಲ. ಯಾಕೆ ಅಂತೀರಾ, ಅಕ್ಟೋಬರ್‌ 24ರ ಬೆಳಗ್ಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಆನೆಯ ಲದ್ದಿಯನ್ನ ಅಲ್ಲಿನ ಜನ ಕಾಲಿಂದ ತುಳಿಯುತ್ತಿದ್ದರು. ಅಲ್ಲದೇ. ಚಿಕ್ಕ ಚಿಕ್ಕ ಮಕ್ಕಳಿಗೂ ಪೋಷಕರು ಬಲವಂತದಿಂದ ಲದ್ದಿ ತುಳಿಸುತ್ತಿದ್ದರು.

ಕಾರಣವಿಷ್ಟೇ, ಆನೆಯ ಲದ್ದಿಯನ್ನ ಕಾಲಿನಿಂದ ತುಳಿದರೆ ಒಳ್ಳೆಯದಾಗುತ್ತದೆ ಎಂಬುದು ಅವರಲ್ಲಿರುವ ಮೌಢ್ಯದ ನಂಬಿಕೆ. ಇಂತಹ ಮೌಡ್ಯವನ್ನು ಮೈಸೂರು ಜನ ಆಚರಿಸುತ್ತಿರುವುದು ಶೋಚನೀಯ.

ಇಂತಹ ಮೌಢ್ಯಕ್ಕೆ ಬಲಿಯಾಗುವ ಜನರು ಲದ್ದಿ ತುಳಿಯಲೇಬೇಕು ಎಂದು ಕೊಂಡರೆ ಕಥೆ ಏನು? ಮೈಸೂರಿನವರಿಗೆ ದಸರಾ ಉತ್ಸವದ ಸಮಯದಲ್ಲಿ ಆನೆಗಳು ರಸ್ತೆಯ ಮೇಲೆ ಸಿಗುವ ಸಾಧ್ಯತೆ ಇದೆ. ಆದರೆ, ನಾಡಿನ ಬೇರೆ ಭಾಗಗಳಲ್ಲಿ ವಾಸವಾಗಿರೋ ಜನಗಳು ಆನೆಯನ್ನ ಅರಸಿಕೊಂಡು ಕಾಡು ಮೇಡು ಹೋಗಬೇಕಷ್ಟೇ.

Advertisements

ಇದೆಲ್ಲದರ ನಡುವೆ ಗಮನಿಸಬೇಕಾದ್ದು, ಒಳ್ಳೆಯಾದಾಗುವುದು ಎಂದರೇನು? ಜನರ ಪ್ರಕಾರ ಶ್ರೀಮಂತಿಕೆಯೇ? ಹಾಗಿದ್ದರೆ, ದಿನನಿತ್ಯ ಆನೆಯೊಂದಿಗೆ ಜೀವಿಸುವ ಆನೆ ಮಾವುತರು ಮತ್ತು ಅವರ ಕುಟುಂಬದವರ ಪರಿಸ್ಥಿತಿಯನ್ನು ಒಮ್ಮೆ ನೋಡಬಹುದು. ಮಾವುತರೂ ದಿನ ಬೆಳಗ್ಗೆ ಎದ್ದು ಆನೆ ಲದ್ದಿ ತುಳಿದಿದ್ದರೆ, ಅವರೂ ಶ್ರೀಮಂತರಾಗಿಬಿಡುತ್ತಿದ್ದರು ಅಲ್ಲವೇ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X