ಜಯರಾಮ ರಾಯಪುರ ಅವರ ರಚನೆಯ, ಸಮಾಜಮುಖಿ ರಂಗ ಬಳಗ ಅಭಿನಯಿಸಿರುವ ‘ಚಾವುಂಡರಾಯ’ ನಾಟಕ ಪ್ರದರ್ಶನವು ಕೆಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳಿನಲ್ಲಿ ನಡೆದಿದೆ.
ಲೋಕಾಯನ ಕಲ್ಚರಲ್ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನ ನಡೆಸಿದೆ.
ರಂಗಾಯಣದ ಹಿರಿಯ ಕಲಾವಿದ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ನಾಟಕವನ್ನು ನಿರ್ದೇಶಿಸಿದ್ದಾರೆ. ತಲಕಾಡು ಗಂಗರಸನ ದಂಡನಾಯಕ ಚಾಮುಂಡರಾಯನ ಶೌರ್ಯ, ರಾಜನಿಷ್ಠೆ ಹಾಗೂ ಅವನ ಧಾರ್ಮಿಕ ಬದುಕನ್ನು ನಾಟಕವು ಅನಾವರಣಗೊಳಿಸಿದೆ,
ಚಾವುಂಡರಾಯ ಒಬ್ಬ ಸೇನಾ ದಂಡನಾಯಕನಾಗಿ ವೈರಿಗಳ ನಿಗ್ರಹ ಹಾಗೂ ಸಾಮ್ರಾಜ್ಯದ ರಕ್ಷಣೆಗೆ ಅನಿವಾರ್ಯವಾಗಿ ಹಿಂಸೆ ಮಾಡುತ್ತಾನೆ. ಹಿಂಸೆಯಿಂದ ಮನನೊಂದು ಅಹಿಂಸೆಯತ್ತ ಪಯಣಿಸುವ ಹಾಗೂ ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿಸಲು ಪ್ರೇರಣೆ ಹಾಗೂ ಸಾಧನೆಯ ಎಲ್ಲ ವಿವರಗಳು ನಾಟಕದಲ್ಲಿ ಪ್ರತಿಬಿಂಬಿತವಾಗಿದೆ.
ಅನುಭವಿ ಯುವ ಕಲಾವಿದರ ಅಭಿನಯ, ಉತ್ತಮ ಸಂಗೀತ, ವಸ್ತ್ರಾಲಂಕಾರ, ಬೆಳಕು ಹಾಗೂ ರಂಗ ಸಜ್ಜಿಕೆಯ ಶ್ರೀಮಂತಿಕೆ ನಾಟಕವನ್ನು ಬಹಳ ಆಕರ್ಷಣೀಯವಾಗಿಸಿವೆ.
ಚಾವುಂಡರಾಯನಾಗಿ ಪವನ್, ಜನ್ನ ಕವಿಯಾಗಿ ಪ್ರವೀಣ್, ಮಾರಸಿಂಹನಾಗಿ ಆನಂದ್ ಸೇರಿದಂತೆ ಎಲ್ಲ ಕಲಾವಿದರು ನಟಿಸಿದರು.
ವರದಿ: ಮಹಮ್ಮದ್ ಅಜರುದ್ದೀನ್, ಸಿಟಿಜನ್ ಜರ್ನಲಿಸ್ಟ್, ಅಕ್ಕಿ ಹೆಬ್ಬಾಳು