ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಮಧ್ಯರಾತ್ರಿ ಧ್ವಜಾರೋಹಣ

Date:

Advertisements

ನಮ್ಮ ಹಿರಿಯರ ತ್ಯಾಗ ಬಲಿದಾನದ ಮುಂಖಾತರ ನಮಗೆ ಸ್ವತಂತ್ರ ದೊರೆತು 77 ವರ್ಷ ಕಳೆದು 78 ರ ಆಚರಣೆ ಅಂಗವಾಗಿ ‘ನಮ್ಮ ಸಮರ್ಪಣಾ ನಡೆ ಭಾರತದ ಕಡೆ’ ಎಂಬ ಘೋಷಣೆಯೊಂದಿಗೆ ನಾವೊಂದು ಸದೃಢ, ಸಮೃದ್ದ ಭಾರತ ಕಟ್ಟಲು ಶ್ರೀರಂಗಪಟ್ಟಣದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಯುವಜನ ಕೇಂದ್ರದೆಡೆಗೆ ಮೆರವಣಿಗೆ ಮಾಡಲಾಯಿತು.

ವಂದೇ ಮಾತರಂ, ಭಾರತ್ ಮಾತಾಕೀ ಜೈ, ಗಾಂಧಿಜೀಕಿ ಜೈ, ಅಂಬೇಡ್ಕರಜೀ ಕಿ ಜೈ, ಸುಭಾಸ್ ಚಂದ್ರ ಬೋಸ್ ಕಿ ಜೈ ಹೀಗೆ ಸ್ವಾತಂತ್ರ ಹೋರಾಟ ಮಹಾ ನಾಯಕರನ್ನ ನೆನೆಯುತ್ತಾ ಜೈ ಘೋಷ ಹಾಕಿ ಗಾಂಧಿ, ಅಂಬೇಡ್ಕರ್ ಭಾವಚಿತ್ರವಿಡಿದು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಹೆಜ್ಜೆ ಹಾಕಿದರು.

ಬ್ರಿಟೀಷರ ಎದುರು ಸ್ವತಂತ್ರ ಸಮರ ಸಾರಿ, ಭಾರತದಿಂದಲೇ ಹೊರ ಹಾಕಬೇಕೆಂದು ಯುದ್ಧದಲ್ಲೇ ಸಾವನ್ನಪ್ಪಿದ ಟಿಪ್ಪು ಸ್ವತಂತ್ರ ಹೋರಾಟಗಾರ. ಇಂತಹ ಭೂಮಿಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ ಸಂತಸದ ಕ್ಷಣ ಎಂದು ಮೆರವಣಿಗೆಗೆ ಚಾಲನೆ ನೀಡಿದ ವಕೀಲ ಸಿ ಎಸ್ ವೆಂಕಟೇಶ್ ಹೇಳಿದರು.

Advertisements
WhatsApp Image 2024 08 15 at 6.25.14 AM

ನಂತರ ಯುವಜನ ಕೇಂದ್ರದಲ್ಲಿ ಮಧ್ಯರಾತ್ರಿ 12ಕ್ಕೆ ಡಾಕ್ಟರ್ ಕೆ ವೈ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಗೀತೆ ಹಾಡಿದರು. ಡಾಕ್ಟರ್ ಬಿ ಸುಜಯ್ ಕುಮಾರ್, ಪ್ರೊಫೆಸರ್ ಇಲ್ಯಾಸ್ ಅಹಮದ್ ಖಾನ್ ಮಾತನಾಡಿದರು.

ಕಾರ್ಯಕ್ರಮಕ್ಕೆ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಸ್ವಾಗತ ಕೋರಿದರು. ಕೆ ಶೆಟ್ಟಹಳ್ಳಿ ಅಪ್ಪಾಜಿ ವಂದನಾರ್ಪಣೆ ಸಲ್ಲಿಸಿದರು. ರಂಗನಾಯಕಿ ಸಮಾಜದ ಸರಸ್ವತಿ, ವೆಂಕಟಮ್ಮ, ಸುಜಾತ, ಮುಸ್ಲಿಂ ಸೌಹಾರ್ದ ವೇದಿಕೆಯು ಅಧ್ಯಕ್ಷ ಅಫ್ಸರ್ ಖಾನ್, ಗಂಜಾಂ ಅಯೂಬ್, ಸಾಹಿತಿ ಶಿವಕುಮಾರ್, ಚಿಕ್ಕ ತಮ್ಮೇಗೌಡ, ರಂಗನಾಥ್, ಸೋಮು ಮತ್ತಿತರರು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X