ಕಲಬುರಗಿ | ಕಲ್ಲಿಗೆ ಹಾಲು ಎರೆಯುವುದು ಮೌಢ್ಯದ ಪರಮಾವಧಿ: ಸಿದ್ಧಬಸವ ಕಬೀರ್‌ ಸ್ವಾಮಿ

Date:

Advertisements

ಕಲ್ಲಿಗೆ ಹಾಲು ಎರೆಯುವುದು, ಹಾವಿಗೆ ಹಾಲು ಕುಡಿಸುವುದು, ಮೌಢ್ಯದ ಪರಮಾವಧಿ, ಬಸವಣ್ಣನವರು ಹೇಳಿದಂತೆ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವನ್ನ ಕಳಸವಯ್ಯ’ ಎನ್ನುವಂತೆ ವೈಜ್ಞಾನಿಕ ಚಿಂತನೆಗಳು ಮೈಗೂಡಿಸಿಕೊಂಡರೆ ಬದುಕು ಬದುಕು ಸಾರ್ಥಕವಾಗುತ್ತದೆ ಎಂದು ಚಿಗರಳ್ಳಿ ಮಠದ ಸಿದ್ದಬಸವ ಕಬೀರ್ ಸ್ವಾಮೀಜಿ ಹೇಳಿದರು.

ಜೇವರ್ಗಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಬಂಧತ್ವ ವೇದಿಕೆ ಹಾಗೂ ದಲಿತ ಸೇನೆ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, “ಬಸವಾದಿ ಶರಣರ ವಚನಗಳನ್ನು ಪಠಿಸಿದರೆ ಸಾಲದು ಅವರ ಸತ್ಯ ನಿಷ್ಢೆ ಹಾಗೂ ಕಾಯಕ ನಿಜ ಜೀವನದಲ್ಲಿ ಅನುಷ್ಠಾನಗೊಳಿಸಿದರೆ ನಾಔು ಇನ್ನೊಬ್ಬರಿಗೆ ಆದರ್ಶವಾಗಬಹುದು” ಎಂದರು.

ಚಿಂತಕ, ಪತ್ರಕರ್ತ ಡಾ.ಶಿವರಂಜನ್ ಸತ್ಯಂಪೇಟೆ ಅವರು ಮಾತನಾಡಿ, “ಬಸವ ಪಂಚಮಿಯನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ, ನಿಮ್ಮ ಬೆಂಬಲಕ್ಕೆ ನಾವು ಸದಾ ಇರುತ್ತೇವೆ, ಜೇವರ್ಗಿ ತಾಲೂಕಿನ ಮನೆ-ಮನೆಗೂ ಬಸವಣ್ಣನವರ ವಿಚಾರಗಳು ಮುಟ್ಟಿಸೋಣ” ಎಂದು ನುಡಿದರು.

Advertisements

ಕಾಲೇಜು ಪ್ರಾಂಶುಪಾಲ ಪ್ರೊ ಕರೀಘೂಳೇಶ್ವರ ಮಾತನಾಡಿ, ” ಬುದ್ಧ ಬಸವ ಅಂಬೇಡ್ಕರ್‌ ಅವರ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಂಡರೆ ಸಮಾಜ ಬದಲಾಗಲು ಸಾಧ್ಯ, ಇಂಥ ಸಂಘಟನೆಗಳಿಂದ ಮಾತ್ರ ವೈಚಾರಿಕ ಚಿಂತನೆ ಪಸರಿಸಲು ಸಾಧ್ಯ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ ? ಕಲಬುರಗಿ | ಬಿಜೆಪಿ ನಾಯಕ, ರೌಡಿ ಶೀಟರ್‌ ಮಣಿಕಂಠ ರಾಠೋಡ್ ಪೊಲೀಸ್‌ ವಶಕ್ಕೆ

ಕಾರ್ಯಕ್ರಮದಲ್ಲಿ ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾನವ ಬಂಧುತ್ವ ವೇದಿಕೆ ಜೇವರ್ಗಿ ತಾಲೂಕ ಸಂಚಾಲಕ ಶಿವಕುಮಾರ ಗೋಲಾ, ದಲಿತ ಸೇನೆ ಜೇವರ್ಗಿ ತಾಲ್ಲೂಕ ಅಧ್ಯಕ್ಷ ಶಿವಶರಣ ಮಂದೇವಾಲ, ಉಪಾಧ್ಯಕ್ಷ ಜಗದೀಶ್ ನಡಗಟ್ಟಿ, ಯುವ ಘಟಕದ ಅಧ್ಯಕ್ಷ ಖಮರ್ ಪೀರಾಸಾಬ ಸೇರಿದಂತೆ ಪ್ರಮುಖರಾದ ಪ್ರಕಾಶ್ ಕಾಂಬಳೆ, ಭಾಗೇಶ್ ಸೊನ್ನ, ರಮೇಶ್ ಬಿರಾಳ, ಅಂಬರೀಷ್ ಬಿರಾಳ,ಭಾಗಣ್ಣ ಗೋಲಾ,ಯಮನಪ್ಪ ಗೋಲಾ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X