ಒಂದು ತಿಂಗಳ ಅವಧಿಯೊಳಗೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ 100 ಆಶ್ರಮ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿ ತಾಲೂಕಿನ ಕುದೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಒಂದು ತಿಂಗಳೊಳಗಾಗಿ 100 ಮನೆಗಳನ್ನು ನಿರ್ಮಿಸಿ, ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಅರ್ಹರ ಪಟ್ಟಿಗಳನ್ನು ಪಿಡಿಒಗಳು ಸಿದ್ದಪಡಿಸಬೇಕು” ಎಂದು ಹೇಳಿದರು.
“ಫಾರಂ ನಂ.50, 53 ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಅವರ ಭೂಮಿಯ ಸರ್ವೇ ನಡೆಸಿ, ಹಕ್ಕುಪತ್ರ ನೀಡಬೇಕು. ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗೆ ಬರುವ ಜನರಿಗೆ ಸರಿಯಾಗಿ ಸ್ಪಂಧಿಸಬೇಕು. ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ, ಶಿರಸ್ತೆದಾರ್ ಸೋಮಶೇಖರ್, ಅಕ್ಷರ ದಾಸೋಹ ಅಧಿಕಾರಿ ಗಂಗಾಧರ್, ಸಿಡಿಪಿಒ ಸುರೇಂದ್ರ, ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ಸದಸ್ಯೆ ನಿರ್ಮಲಾ, ಜಯರಾಮು, ಕೆ.ಬಿ. ಬಾಲರಾಜು, ಸುಗ್ಗನಹಳ್ಳಿ ರಂಗಸ್ವಾಮಿ, ಜಗದೀಶ್, ಪಿಡಿಒ ವೆಂಕಟೇಶ್ ಇದ್ದರು.