ಕಲಬುರಗಿ | ವೈದಿಕಶಾಹಿ ದಬ್ಬಾಳಿಕೆ ಆತಂಕಕಾರಿ ಬೆಳವಣಿಗೆ: ಕೆ ನೀಲಾ

Date:

Advertisements

ಸಾಹಿತ್ಯ ಸಮ್ಮೇಳನ ಮುಖ್ಯವಾಗಿ ಸಮಸ್ತ ಕನ್ನಡಿಗರ, ದುಡಿಯುವ ವರ್ಗದ ಸಮಗ್ರ ಅಭಿವೃದ್ಧಿ ಹಾಗೂ ಅವರ ನಡುವಿನ ಸಾಂಸ್ಕೃತಿಕ ತಲ್ಲಣಗಳ ಕುರಿತಂತೆ ಚರ್ಚಿಸುವ ಸಾಹಿತ್ಯಿಕ ವೇದಿಕೆಯಾಗಿದೆ. ಅಂತಹ ಗಂಭೀರ ವಿಚಾರಗಳು ಬೆಳಕಿಗೆ ಬರುವ ಮುನ್ನವೆ, ನಾಡಿನ ಸಮಸ್ತ ನಾಗರೀಕರ ಆಹಾರ ಸಂಸ್ಕೃತಿಯ ಮೇಲೆ ವೈದಿಕಶಾಹಿ ದಬ್ಬಾಳಿಕೆಯು ಈ ಮೂಲಕ ಅನಾವರಣವಾಗಿರುವುದು ಆತಂಕಕಾರಿಯಾಗಿದೆ ಎಂದು ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿರುವ ಅವರು, ಸಾಹಿತ್ಯ ಸಮ್ಮೇಳನದ ಅತಿಥಿಗಳು, ಸಾಹಿತಿಗಳು, ಸಾಹಿತ್ಯ ಪ್ರೇಮಿಗಳಿಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಡುಗೆಯ ಮೂಲಕ ಆತಿಥ್ಯ ನೀಡಬೇಕೆಂದು ಮಂಡ್ಯ ಜಿಲ್ಲೆಯ ಜನತೆ ಬಯಸಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಆಹಾರವು ವ್ಯಕ್ತಿಯ ವೈಯಕ್ತಿಕ ಹಕ್ಕಾಗಿದೆ. ಅವರು ಇಷ್ಢ ಪಡುವ ಆಹಾರ ತಿನ್ನಲು ಅವರು ಬದ್ಧರಾಗಿದ್ದಾರೆ. ಯಾರ ಮೇಲೂ ಮತ್ತೊಬ್ಬರ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುವುದು ಅಪರಾಧವಾಗುತ್ತದೆ. ಆದರೆ, ಇಲ್ಲಿ ಭಾಗಿಯಾಗುವ ಎಲ್ಲ ನಾಗರೀಕರು, ಗಣ್ಯರು, ಸಾಹಿತಿಗಳು ನಾಡಿನ ವೈವಿದ್ಯಮಯವಾದ ಆಹಾರ ಸೇವಿಸುವವರು ಆಗಿರುತ್ತಾರೆಂಬುದನ್ನು ಮತ್ತು ಈ ತಾರತಮ್ಯವು ಈ ಎಲ್ಲರನ್ನು ಅಪಮಾನಿಸುತ್ತದೆಂಬುದನ್ನು ಇದೇ ಸಂದರ್ಭದಲ್ಲಿ ಗಮನಿಸಲೇಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.

Advertisements

ಸಾಹಿತ್ಯೋತ್ಸವದ ಆಹಾರ ವ್ಯವಸ್ಥೆಯು ಕನ್ನಡ, ಕರ್ನಾಟಕಮಯವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಿದೆ. ಆದರೆ, ಅದರಲ್ಲಿ ತಾರತಮ್ಯದ ನೀತಿ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಖಂಡನೀಯ ಎಂದು ಖಂಡಿಸಿದ್ದಾರೆ.

ವೈದಿಕಶಾಹಿಗಳು, ಹಿಂದುತ್ವವಾದಿ ಮತಾಂಧರು ಕರ್ನಾಟಕದ ಮತ್ತು ಕನ್ನಡ ನೆಲದ ಆಹಾರ ಸಂಸ್ಕೃತಿ ಹಾಗೂ ಪದ್ಧತಿಗೆ ವಿರುದ್ಧವಾಗಿ, ಅದರ ಮೇಲೆ ವೈದಿಕಶಾಹಿಯ, ಈರುಳ್ಳಿ ಬೇಡ, ಬೆಳ್ಳುಳ್ಳಿ ಬೇಡಾ ಹಾಗೂ ಮಾಂಸ, ಮೀನು, ಮೊಟ್ಟೆ ವರ್ಜ್ಯವೆಂದು, ಅದು ತುಚ್ಛವೆಂದು, ತನ್ನದೆ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುತ್ತಿರುವುದನ್ನು ನಾಡಿನ ಜನತೆ ತೀವ್ರವಾಗಿ ವಿರೋದಿಸುತ್ತಿದ್ದಾರೆ. ಸಿಪಿಐಎಂ ಇಂತಹ ಸರ್ವಾಧಿಕಾರಿ ನಿಲುಮೆಯನ್ನು ಬಲವಾಗಿ ಪ್ರತಿರೋಧಿಸುತ್ತದೆ ಎಂದು ಕಿರಿಕಾರಿದ್ದಾರೆ.

ಇಂತಹ ಸಂದರ್ಭದಲ್ಲಿ ಇಂತಹ ವಿಚಾರಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಸಮ್ಮೇಳನದ ಸಂಘಟಕರು ಮತ್ತು ಆಯೋಜಕರು ಗಮನಿಸಬೇಕಾಗುತ್ತದೆ. ಸಮಸ್ತ ನಾಗರೀಕರ ಆಹಾರದ ಹಕ್ಕಿಗೆ ಧಕ್ಕೆ ಬರದಂತೆ ಆಯೋಜಿಸುವ ಹೊಣೆಗಾರಿಕೆಯನ್ನು ತೋರಬೇಕಾಗುತ್ತದೆ.

ಇದನ್ನೂ ಓದಿದ್ದೀರಾ? : ಕಲಬುರಗಿ | ಕಾರು-ಲಾರಿ ಮುಖಾಮುಖಿ ಡಿಕ್ಕಿ : ದಂಪತಿ ಸಾವು

ಈ ವೈವಿದ್ಯಮಯ ಆಹಾರ ಸಂಸ್ಕೃತಿ ಕೇವಲ ಆಹಾರದ ಹಕ್ಕಿನ ಪ್ರಶ್ನೆ ಮಾತ್ರವೇ ಆಗಿಲ್ಲ. ಅದು ನಾಡಿನ ಬಹು ಸಂಖ್ಯಾತ ದುಡಿಯುವ ಜನತೆಯ ಬದುಕಿನ ಹಾಗೂ ದುಡಿಮೆಯ ಆಧಾರವೂ ಆಗಿದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಆದ್ದರಿಂದ ಅದು ಆಹಾರದ ಹಕ್ಕಿನ ಪ್ರಶ್ನೆ ಮಾತ್ರವಲ್ಲಾ. ಬದುಕುವ ಹಕ್ಕಿನ ಪ್ರಶ್ನೆಯೂ ಆಗಿದೆ. ಇದನ್ನು ಲಘುವಾಗಿ ಯಾರೂ ಪರಿಗಣಿಸುವುದು ಉಚಿತವಲ್ಲ ಎಂದು ಕೆ ನೀಲಾ ಖಂಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X