ಕಲಬುರಗಿ | ವೈದಿಕಶಾಹಿ ದಬ್ಬಾಳಿಕೆ ಆತಂಕಕಾರಿ ಬೆಳವಣಿಗೆ: ಕೆ ನೀಲಾ

Date:

ಸಾಹಿತ್ಯ ಸಮ್ಮೇಳನ ಮುಖ್ಯವಾಗಿ ಸಮಸ್ತ ಕನ್ನಡಿಗರ, ದುಡಿಯುವ ವರ್ಗದ ಸಮಗ್ರ ಅಭಿವೃದ್ಧಿ ಹಾಗೂ ಅವರ ನಡುವಿನ ಸಾಂಸ್ಕೃತಿಕ ತಲ್ಲಣಗಳ ಕುರಿತಂತೆ ಚರ್ಚಿಸುವ ಸಾಹಿತ್ಯಿಕ ವೇದಿಕೆಯಾಗಿದೆ. ಅಂತಹ ಗಂಭೀರ ವಿಚಾರಗಳು ಬೆಳಕಿಗೆ ಬರುವ ಮುನ್ನವೆ, ನಾಡಿನ ಸಮಸ್ತ ನಾಗರೀಕರ ಆಹಾರ ಸಂಸ್ಕೃತಿಯ ಮೇಲೆ ವೈದಿಕಶಾಹಿ ದಬ್ಬಾಳಿಕೆಯು ಈ ಮೂಲಕ ಅನಾವರಣವಾಗಿರುವುದು ಆತಂಕಕಾರಿಯಾಗಿದೆ ಎಂದು ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯಪಟ್ಟಿದ್ದಾರೆ.

- Advertisement -

ನಗರದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿರುವ ಅವರು, ಸಾಹಿತ್ಯ ಸಮ್ಮೇಳನದ ಅತಿಥಿಗಳು, ಸಾಹಿತಿಗಳು, ಸಾಹಿತ್ಯ ಪ್ರೇಮಿಗಳಿಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಡುಗೆಯ ಮೂಲಕ ಆತಿಥ್ಯ ನೀಡಬೇಕೆಂದು ಮಂಡ್ಯ ಜಿಲ್ಲೆಯ ಜನತೆ ಬಯಸಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಆಹಾರವು ವ್ಯಕ್ತಿಯ ವೈಯಕ್ತಿಕ ಹಕ್ಕಾಗಿದೆ. ಅವರು ಇಷ್ಢ ಪಡುವ ಆಹಾರ ತಿನ್ನಲು ಅವರು ಬದ್ಧರಾಗಿದ್ದಾರೆ. ಯಾರ ಮೇಲೂ ಮತ್ತೊಬ್ಬರ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುವುದು ಅಪರಾಧವಾಗುತ್ತದೆ. ಆದರೆ, ಇಲ್ಲಿ ಭಾಗಿಯಾಗುವ ಎಲ್ಲ ನಾಗರೀಕರು, ಗಣ್ಯರು, ಸಾಹಿತಿಗಳು ನಾಡಿನ ವೈವಿದ್ಯಮಯವಾದ ಆಹಾರ ಸೇವಿಸುವವರು ಆಗಿರುತ್ತಾರೆಂಬುದನ್ನು ಮತ್ತು ಈ ತಾರತಮ್ಯವು ಈ ಎಲ್ಲರನ್ನು ಅಪಮಾನಿಸುತ್ತದೆಂಬುದನ್ನು ಇದೇ ಸಂದರ್ಭದಲ್ಲಿ ಗಮನಿಸಲೇಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.

ಸಾಹಿತ್ಯೋತ್ಸವದ ಆಹಾರ ವ್ಯವಸ್ಥೆಯು ಕನ್ನಡ, ಕರ್ನಾಟಕಮಯವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಿದೆ. ಆದರೆ, ಅದರಲ್ಲಿ ತಾರತಮ್ಯದ ನೀತಿ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಖಂಡನೀಯ ಎಂದು ಖಂಡಿಸಿದ್ದಾರೆ.

ವೈದಿಕಶಾಹಿಗಳು, ಹಿಂದುತ್ವವಾದಿ ಮತಾಂಧರು ಕರ್ನಾಟಕದ ಮತ್ತು ಕನ್ನಡ ನೆಲದ ಆಹಾರ ಸಂಸ್ಕೃತಿ ಹಾಗೂ ಪದ್ಧತಿಗೆ ವಿರುದ್ಧವಾಗಿ, ಅದರ ಮೇಲೆ ವೈದಿಕಶಾಹಿಯ, ಈರುಳ್ಳಿ ಬೇಡ, ಬೆಳ್ಳುಳ್ಳಿ ಬೇಡಾ ಹಾಗೂ ಮಾಂಸ, ಮೀನು, ಮೊಟ್ಟೆ ವರ್ಜ್ಯವೆಂದು, ಅದು ತುಚ್ಛವೆಂದು, ತನ್ನದೆ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುತ್ತಿರುವುದನ್ನು ನಾಡಿನ ಜನತೆ ತೀವ್ರವಾಗಿ ವಿರೋದಿಸುತ್ತಿದ್ದಾರೆ. ಸಿಪಿಐಎಂ ಇಂತಹ ಸರ್ವಾಧಿಕಾರಿ ನಿಲುಮೆಯನ್ನು ಬಲವಾಗಿ ಪ್ರತಿರೋಧಿಸುತ್ತದೆ ಎಂದು ಕಿರಿಕಾರಿದ್ದಾರೆ.

ಇಂತಹ ಸಂದರ್ಭದಲ್ಲಿ ಇಂತಹ ವಿಚಾರಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಸಮ್ಮೇಳನದ ಸಂಘಟಕರು ಮತ್ತು ಆಯೋಜಕರು ಗಮನಿಸಬೇಕಾಗುತ್ತದೆ. ಸಮಸ್ತ ನಾಗರೀಕರ ಆಹಾರದ ಹಕ್ಕಿಗೆ ಧಕ್ಕೆ ಬರದಂತೆ ಆಯೋಜಿಸುವ ಹೊಣೆಗಾರಿಕೆಯನ್ನು ತೋರಬೇಕಾಗುತ್ತದೆ.

ಇದನ್ನೂ ಓದಿದ್ದೀರಾ? : ಕಲಬುರಗಿ | ಕಾರು-ಲಾರಿ ಮುಖಾಮುಖಿ ಡಿಕ್ಕಿ : ದಂಪತಿ ಸಾವು

ಈ ವೈವಿದ್ಯಮಯ ಆಹಾರ ಸಂಸ್ಕೃತಿ ಕೇವಲ ಆಹಾರದ ಹಕ್ಕಿನ ಪ್ರಶ್ನೆ ಮಾತ್ರವೇ ಆಗಿಲ್ಲ. ಅದು ನಾಡಿನ ಬಹು ಸಂಖ್ಯಾತ ದುಡಿಯುವ ಜನತೆಯ ಬದುಕಿನ ಹಾಗೂ ದುಡಿಮೆಯ ಆಧಾರವೂ ಆಗಿದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಆದ್ದರಿಂದ ಅದು ಆಹಾರದ ಹಕ್ಕಿನ ಪ್ರಶ್ನೆ ಮಾತ್ರವಲ್ಲಾ. ಬದುಕುವ ಹಕ್ಕಿನ ಪ್ರಶ್ನೆಯೂ ಆಗಿದೆ. ಇದನ್ನು ಲಘುವಾಗಿ ಯಾರೂ ಪರಿಗಣಿಸುವುದು ಉಚಿತವಲ್ಲ ಎಂದು ಕೆ ನೀಲಾ ಖಂಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾಪುವಿನಲ್ಲಿ ಪ್ರಜಾಸೇವಾ ಆಂದೋಲನ: 75 ಅಹವಾಲು ಸ್ವೀಕಾರ, ಅಧಿಕಾರಿಗಳಿಂದ ಪರಿಹಾರದ ಭರವಸೆ

ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇದ್ದಲ್ಲಿಯೇ ಮಾಡಿಕೊಡುವ ಉದ್ದೇಶದಿಂದ ಸಚಿವರು, ಜನಪ್ರತಿನಿಧಿಗಳು ಹಾಗೂ...

ವಿಜಯಪುರ | ರೇಬಿಸ್ ತಡೆಗೆ ಜಾಗೃತಿ ಮುಖ್ಯ; ಬೀದಿ ನಾಯಿ ಕಡಿತದ ಬಗ್ಗೆ ಜನರಲ್ಲಿ ಅರಿವು

ರೇಬಿಸ್ ವೈರಾಣು ಹರಡುವಿಕೆ, ನಾಯಿ ಕಡಿತದಿಂದ ಉಂಟಾಗಬಹುದಾದ ಅಪಾಯ ಹಾಗೂ ಮುನ್ನೆಚ್ಚರಿಕಾ...

ಜಮಖಂಡಿ | ಸರ್ವೆ ನಂ.71/4ರಲ್ಲೇ ಸ್ಮಶಾನಕ್ಕೆ ಜಾಗ ನೀಡುವಂತೆ ದಲಿತ ಸಮುದಾಯದ ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ...

ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ

ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ...