ವಿಜಯಪುರ | ಲೋಕಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್‌ ಶಕ್ತಿ ಸೋಲಿಸಲು ತಯಾರಿ ಅಗತ್ಯ: ಶ್ರೀನಾಥ್ ಪೂಜಾರಿ

Date:

Advertisements

ಚುನಾವಣಾ ಸಂದರ್ಭ ಎದುರಿಸಿದ್ದೇವೆ. ಅದರ ಅನುಭವವೂ ಇದೆ. ಫ್ಯಾಸಿಸ್ಟ್ ಶಕ್ತಿ ಕುಂದಿಲ್ಲ ಮತ್ತು ಸೋತಿಲ್ಲ. ಅದರ ಶಕ್ತಿ ಹಿಮ್ಮೆಟ್ಟಿಸಲು ಸಾಕಷ್ಟು ತಯಾರಿ ಅಗತ್ಯವಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಹೇಳಿದ್ದಾರೆ.

ವಿಜಯಪುರ ನಡೆದ ‘ಎದ್ದೇಳು ಕರ್ನಾಟಕ’ ಆಂದೋಲನದ ಸಭೆಯಲ್ಲಿ ಅವರು ಮಾತನಾಡಿದರು. “ಲೋಕಸಭಾ ಚುನಾವಣೆಯಲ್ಲಿ ಫಾಸಿಸ್ಟ್‌, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಆಂದೋಲನ ಆರಂಭವಾಗಲಿದೆ: ಎಂದು ಹೇಳಿದರು.

ಎದ್ದೇಳು ಕರ್ನಾಟಕದ ಮುಖಂಡೆ ಗೌರಿ ಮಾತನಾಡಿ, “ನಮ್ಮ ಮುಂದೆ ದೊಡ್ಡ ಸವಾಲಿದೆ. ಎದುರಾಳಿಗಳು ಹಣ ಅಧಿಕಾರ ಇರುವುದರಿಂದ ಬೇಗ ಜನರ ಬೆಂಬಲ ಪಡೆಯುತ್ತಾರೆ. ಇತಿಹಾಸ ನೋಡಿದಾಗ ‘ಸತ್ಯ ಇವತ್ತಲ್ಲ ನಾಳೆ ಗೆದ್ದೇ ಗೆಲ್ಲುತ್ತದೆ’ ಎಂಬುದು ಅರಿವಿಗೆ ಬರುತ್ತದೆ” ಎಂದರು.

Advertisements

“ಬದಲಾವಣೆ ಜಗದ ನಿಯಮ ಅಂತ ಸುಮ್ನೆ ಕುಂತರೆ ಆಗುವುದಿಲ್ಲ. ಸೌಹಾರ್ದಯುತ ಪರಂಪರೆ ಉಳಿಸಲು ಪ್ರಯತ್ನ ಮಾಡಲೇಬೇಕು. ಜನಪರ ಒಕ್ಕೂರಿಲಿನಿಂದ ಎದ್ದೇಳು ಕರ್ನಾಟಕ ಹುಟ್ಟಿತು. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು.

“ಬೆಲೆ ಏರಿಕೆ, ನಿರುದ್ಯೋಗ, ಕೊರೊನಾ ನಂತರದ ಪರಿಸ್ಥಿತಿ, ಹೊಟ್ಟೆಪಾಡಿನ ವಿಷಯಗಳು ರಾಜಕೀಯದಲ್ಲಿ ಚರ್ಚೆಯಾಗಬೇಕು. ಇಂತಹ ವಿಚಾರಗಳನ್ನು ಸಮಾಜದಲ್ಲಿ ಚರ್ಚೆ ತರಬೇಕು” ಎಂದರು.

ಸಭೆಯಲ್ಲಿ ಅಬ್ದುಲ್ ಅಹಮದ್ ಖದೀರ್, ದಸ್ತಗಿರಿ ಹುಲಿಕಟ್ಟಿ, ಅಕ್ರಮ ಮಸಾಳಕರ, ಡಾ. ಭುವನೇಶ್ವರಿ, ಬಾಳು ಜೇವರು, ಮೀನಾಕ್ಷಿ ಸಿಂಗೆ, ಶಾಂತಾ ದಗಿನಾಳ, ಹಿಂದೂ ಹೊಸಮನಿ, ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

Download Eedina App Android / iOS

X