ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಕೆಂಭಾವಿಯಲ್ಲಿ ಗ್ರಾಮದ ಜನರು ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಅಚರಿಸಿದ್ದಾರೆ.
ಈ ವೇಳೆ ಮುಖಂಡ ಬಸನಗೌಡ ಹೊಸಮನಿ ಮಾತನಾಡಿ, “ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಅದರ ತಳಹದಿ ಮೇಲೆ 75 ವರ್ಷಗಳವರೆಗೆ ಯಾವುದೇ ರಾಷ್ಟ್ರಗಳು ಇಷ್ಟು ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಿಲ್ಲ. ಅದಕ್ಕೆ ಮೂಲಕಾರಣ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್” ಎಂದು ಹೇಳಿದರು.
ಯಾಳಗಿ ಗ್ರಾಮದಲ್ಲಿಯೂ ಅಂಬೇಡ್ಕರ್ ಜಯಂತಿ ಆಚರಿಸಲಾಗಿದ್ದು, ದಲಿತ ಯುವ ಮುಖಂಡ ರಾಜು ನಾಗರೆಡ್ಡಿ ಮಾತನಾಡಿ, “ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಅವರ ಬದುಕು, ಆದರ್ಶ, ತತ್ವಗಳು ಗಂಭೀರ ಚಿಂತನೆಗಳು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಿತ್ತೂರು ಕರ್ನಾಟಕ: ಬಿಜೆಪಿ ಅಭ್ಯರ್ಥಿಗಳಿಗೆ ಬಿಸಿ ತಟ್ಟಲಿರುವ ಬಂಡಾಯ
ಈ ಸಂಧರ್ಭದಲ್ಲಿ ಗುರುಬಸಯ್ಯ, ಶಿವಶರಣ ನಾಗರೆಡ್ಡಿ, ಮಹದೇವಪ್ಪ ಜಲಪುರ, ಶ್ರೀಶೈಲ್ ಮಹಾಮನಿ, ಅಬ್ದುಲ್ ಸಿಪಾಯಿ, ಮಲಿಕ್ ಚೌದರಿ, ಸಾಹೇಬಣ್ಣ ತಳವಾರ ಹಾಗೂ ಇತರರು ಇದ್ದರು.