ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಕಾಮುಕರನ್ನು ಸಾರ್ವಜನಿಕರ ಮಧ್ಯದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ‘ಕಾರ್ಮಿಕರ ಸೇವಕರು ಸಂಘಟನೆ’ ಕಾರ್ಯಕರ್ತರು ಶಹಾಪುರ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ದೇವಂತಗಿ ಗ್ರಾಮದ 11 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿ ಬಾವಿಯಲ್ಲಿ ಎಸೆದಿದ್ದಾರೆ. ಇಂತಹ ಅಮಾನವೀಯ ಘಟನೆ ಇಡೀ ಪ್ರಜಾಪ್ರಭುತ್ವದ ಕಗ್ಗೊಲೆ ಎಂದರೂ ತಪ್ಪಿಲ್ಲ. ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಮೊನ್ನೆ ಅಷ್ಟೇ ಆಳಂದದಲ್ಲಿ ನಂತರ ಕಲಬುರಗಿಯಲ್ಲಿ ಈಗ ಮತ್ತೆ ಅದೇ ದೇವಂತಗಿಯಲ್ಲಿ ಹೀಗೆ ಅನೇಕ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆಯೇ ಹೊರೆತು, ದುಷ್ಕರ್ಮಿಗಳಿಗೆ ಯಾವುದೇ ಕಠಿಣ ಕ್ರಮ, ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಮುಂದಾಗುತ್ತಿಲ್ಲ” ಎಂದು ಆರೋಪಿಸಿದರು.
“ಅತ್ಯಾಚಾರವೆಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಸಾರ್ಜನಿಕರ ಮಧ್ಯದಲ್ಲಿಯೇ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಹೀಗಾದಲ್ಲಿ ಮಾತ್ರ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಬಹುದೇನೋ ಎನಿಸುತ್ತಿದೆ” ಎಂದು ಮಾಳಪ್ಪ ಎಸ್. ಪೂಜಾರಿ ವಿಭೂತಿಹಳ್ಳಿ ಕಾರ್ಮಿಕರ ಸೇವಕರು ಯಾದಗಿರಿ ಇವರ ವತಿಯಿಂದ ತಹಸೀಲ್ದಾರರು ಶಹಾಪೂರ ರವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳು ಏನು ಮಾಡುತ್ತಿವೆ?: ಪ್ರಗತಿಪರ ಸಂಘಟನೆಗಳು
ಈ ಸಂದರ್ಭದಲ್ಲಿ ಕಾರ್ಮಿಕರ ಸೇವಕ ಯಾದಗಿರಿ ಮಾಳಪ್ಪ ಎಸ್ ಪೂಜಾರಿ ವಿಭೂತಿಹಳ್ಳಿ, ಅಂಗಕವಿಕಲ ರಾಜ್ಯಾಧ್ಯಕ್ಷರಾದ ಸುಭಾಷ ಹೋತಪೇಠ, ಬೀರಲಿಂಗ ರಾಜಾಪುರ, ಆಂಜನೇಯ ವಿಭೂತಿಹಳ್ಳಿ, ಹೈಯಾಳಪ್ಪ ವಿಭೂತಿಹಳ್ಳಿ, ಸಂಗಣ್ಣಗೌಡ, ಅಂಬ್ರೇಶ ದಿಗ್ಗಿ, ಶಶಿಕುಮಾರ ಪರಸಾಪುರ, ವಿಶ್ವರಾದ್ಯ, ದೇವರೆಡ್ಡಿ ಸಿಂಗನಹಳ್ಳಿ ಹಾಜರಿದ್ದರು.