‘ಘೀಬ್ಲಿ ಟ್ರೆಂಡ್‌’ ಬಳಸುವ ಮುನ್ನ ಎಚ್ಚರ; ಪೊಲೀಸರು ಕೊಟ್ಟ ಸಂದೇಶವಿದು – ಓದಿ…

Date:

Advertisements

ಕಳೆದ ಒಂದು ವಾರದಲ್ಲಿ ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿಕೊಂಡಿವೆ. ನೆಟ್ಟಿಗರು ತಮ್ಮ ಚಿತ್ರಗಳನ್ನು ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರವಾಗಿ ಮಾರ್ಪಡಿಸಿಕೊಂಡು, ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ‘ಘೀಬ್ಲಿ ಟ್ರೆಂಡ್‌’ನ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗುತ್ತಿವೆ. ಉಳಿದವರನ್ನು ಬಳಸುವಂತೆ ಪ್ರೇರೇಪಿಸುತ್ತಿವೆ.

ಆರಂಭದಲ್ಲಿ ಐಟಿ ತಂತ್ರಜ್ಞಾನದಲ್ಲಿ ಗಮನ ಸೆಳೆದಿದ್ದ ‘ಚಾಟ್‌ಜಿಪಿಟಿ‘ಯಲ್ಲಿ ಹೊಸದಾಗಿ ‘ಘೀಬ್ಲಿ ಟ್ರೆಂಡ್‌’ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಳಸಿ ತಮ್ಮ ಚಿತ್ರಗಳನ್ನು ಆ್ಯನಿಮೇಟೆಡ್‌ ಚಿತ್ರಗಳಾಗಿ ಕೆಲವೇ ಸೆಕೆಂಡುಗಳಲ್ಲಿ ಮಾರ್ಪಡಿಸಬಹುದಾಗಿದೆ. ಈ ‘ಘೀಬ್ಲಿ ಟ್ರೆಂಡ್‌’ನ ಅಬ್ಬರ-ಹಾವಳಿಯ ನಡುವೆ ಗೋವಾ ಪೊಲೀಸರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ‘ಘೀಬ್ಲಿ ಟ್ರೆಂಡ್‌’ ಬಳಸುವ ಬಗ್ಗೆ ಎಚ್ಚರಿಕೆ ಇರಲಿ ಎಂದು ಮನವಿ ಮಾಡಿದ್ದಾರೆ.

ಗೋವಾ ಪೊಲೀಸರ ಎಚ್ಚರಿಕೆ ಸಂದೇಶ ಹೀಗಿದೆ: “ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ‘ಘೀಬ್ಲಿ ಟ್ರೆಂಡ್‌’ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸುವ ಮುನ್ನ ಎಚ್ಚರಿಕೆ ಇರಲಿ. ಇದು ಮನರಂಜನೆಯ ಭಾಗವಾಗಿರಬಹುದು. ಆದರೆ, ನಿಮ್ಮ ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್‌ಗಳಲ್ಲಿ ಅಪ್‌ಲೋಡ್‌ ಮಾಡಿದಾಗ ನಿಮ್ಮ ಫೋಟೊಗಳು ಸೈಬರ್‌ ವಂಚಕರ ದುರುಪಯೋಗಕ್ಕೆ ಒಳಗಾಗಬಹುದು” ಎಂದಿದ್ದಾರೆ.

Advertisements

“ನಿಮ್ಮ ಫೋಟೊಗಳು ವಂಚಕರ ಕೈಸೇರಿದ್ದು, ದುರುಪಯೋಗ ಅಥವಾ ವಂಚನೆಯಾಗುತ್ತಿದ್ದಲ್ಲಿ, ತಕ್ಷಣವೇ 1930ಗೆ ಕರೆ ಮಾಡಿ ಮಾಹಿತಿ ನೀಡಿ” ಎಂದು ಗೋವಾ ಪೊಲೀಸರು ಮನವಿ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X