ಸಾಂಬಾರ ಪದಾರ್ಥಗಳ ಮೇಲೆ ಮಾನಹಾನಿ ವಿಡಿಯೋ ತೆರವಿಗೆ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

Date:

Advertisements
  • ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ನರುಲಾ ಪೀಠ ವಿಚಾರಣೆ
  • ಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ, ಸಗಣಿ ಹೊಂದಿವೆ ಎಂದು ವಿಡಿಯೋ

ಭಾರತೀಯ ಸಾಂಬಾರ್‌ ಪದಾರ್ಥಗಳು ಹಸುವಿನ ಮೂತ್ರ ಹಾಗೂ ಸಗಣಿಯನ್ನು ಒಳಗೊಂಡಿವೆ ಎಂದು ಆರೋಪಿಸಿದ ಮಾನಹಾನಿಕರ ವಿಡಿಯೋಗಳನ್ನು ಯೂಟ್ಯೂಬ್‌ನಿಂದ ತೆರವು ಅಥವಾ ನಿರ್ಬಂಧಿಸುವಂತೆ ದೆಹಲಿ ಹೈಕೋರ್ಟ್‌ ಗೂಗಲ್‌ ಸಂಸ್ಥೆಗೆ ಶುಕ್ರವಾರ (ಮೇ 5) ನಿರ್ದೇಶನ ನೀಡಿದೆ.

ಸಾಂಬಾರ್‌ ಪದಾರ್ಥಗಳು ಮೂತ್ರ ಹಾಗೂ ಸಗಣಿ ಹೊಂದಿವೆ ಎಂದು ‘ಕ್ಯಾಚ್‌’ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳನ್ನು ಗುರಿಯಾಗಿಸಿ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

ಈ ವಿಡಿಯೋಗಳು ಮಾನಹಾನಿಕರ ಸ್ವರೂಪದ್ದಾಗಿವೆ ಎಂದು ಆರೋಪಿಸಲಾಗಿದೆ.

Advertisements

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

‘ಕ್ಯಾಚ್’ ಬ್ರಾಂಡ್ ಹೆಸರಿನಡಿಯಲ್ಲಿ ಉತ್ಪನ್ನಗಳನ್ನು ಹೊಂದಿರುವ ಸಂಘಟಿತ ಧರಂಪಾಲ್ ಸತ್ಯಪಾಲ್ ಸನ್ಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ಮಾನಹಾನಿ ಮೂಲಕ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಎರಡು ಯೂಟ್ಯೂಬ್ ವಾಹಿನಿಗಳನ್ನು ನಿರ್ಬಂಧಿಸಿ ಪೀಠ ಆದೇಶಿಸಿದೆ.

“ಪ್ರತಿವಾದಿಗಳು ಅಂತಹ ವಿಡಿಯೋಗಳನ್ನು ರಚಿಸುವುದು ಮತ್ತು ಅಪ್‌ಲೋಡ್ ಮಾಡುವುದು ‘ಕ್ಯಾಚ್‌’ ಕಂಪನಿ ಗುರುತು ಹೊಂದಿರುವ ಫಿರ್ಯಾದಿಯ ಸರಕುಗಳನ್ನು ಮಾನಹಾನಿ ಮತ್ತು ಅವಹೇಳನ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಯೂಟ್ಯೂಬ್‌ಗೆ ಸುಲಭ ಮತ್ತು ಅನಿಯಂತ್ರಿತ ಪ್ರವೇಶದ ಹಿನ್ನೆಲೆ ಮಾನಹಾನಿಕರ ವಿಡಿಯೋಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಅಥವಾ ಹಂಚಿಕೊಳ್ಳುವ ಸಂಭವನೀಯತೆ ಹೆಚ್ಚಿದೆ” ಎಂದು ಪೀಠ ಉಲ್ಲೇಖಿಸಿದೆ.

ಪ್ರಕರಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪಿಗಳಿಬ್ಬರು ವಿಚಾರಣೆಗೆ ಹಾಜರಾಗದ ಕಾರಣ ತಾತ್ಕಾಲಿಕ ಆದೇಶ ನೀಡಲಾಗಿದ್ದು ಆರೋಪಿಗಳ ಔಪಚಾರಿಕ ವಿಚಾರಣೆ ಬಾಕಿ ಇದೆ ಎಂದು ಪೀಠ ಹೇಳಿದೆ.

ದೆಹಲಿ ಹೈಕೋರ್ಟ್‌ ಹಿಂದಿನ ನಿರ್ದೇಶನಗಳನ್ನು ಅನುಸರಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಮೂರು ವಿಡಿಯೋಗಳು ಇನ್ನು ಮುಂದೆ ವೀಕ್ಷಣೆಗೆ ಲಭ್ಯವಿಲ್ಲ ಎಂದು ಗೂಗಲ್‌ನ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಎರಡು ಪ್ರತಿವಾದಿ ವಾಹಿನಿಗಳಾದ ಟಿವೈಆರ್ ಮತ್ತು ವ್ಯೂಸ್ ಎನ್‌ನ್ಯೂಸ್, ಭಾರತೀಯ ಸಾಂಬಾರ್‌ ಪದಾರ್ಥಗಳ ವಿರುದ್ಧ ಅವಹೇಳನಕಾರಿ ಮತ್ತು ಸುಳ್ಳು ಟೀಕೆಗಳನ್ನು ಹೊಂದಿರುವ ವಿಡಿಯೋಗಳನ್ನು ದುರುದ್ದೇಶಪೂರಿತವಾಗಿ ಅಪ್‌ಲೋಡ್ ಮಾಡಿವೆ.

ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಪರಿಸ್ಥಿತಿ ನಿಯಂತ್ರಣ; ರೈಲುಗಳ ಸಂಚಾರ ಸ್ಥಗಿತ

ವಿಶೇಷವಾಗಿ ‘ಕ್ಯಾಚ್’ ಬ್ರ್ಯಾಂಡ್‌ನ ಅಡಿಯಲ್ಲಿ ಮಾರಾಟವಾಗಿದೆ ಎಂದು ಕಂಪನಿ ಆರೋಪಿಸಿತ್ತು.

ಯೂಟ್ಯೂಬ್ ವಾಹಿನಿಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಪತ್ತೆಹಚ್ಚಿದ ನಂತರ ಕಂಪನಿಯು ಮೊಕದ್ದಮೆ ಹೂಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X