ಮತಯಂತ್ರ ತೆರೆಯಲು ಒಟಿಪಿ ಅಗತ್ಯವಿಲ್ಲ: ಮುಂಬೈ ಚುನಾವಣಾಧಿಕಾರಿ

Date:

ವಿದ್ಯುನ್ಮಾನ ಮತಯಂತ್ರ ತೆರೆಯಲು ಮುಂಬೈನ ಶಿವಸೇನಾ ಸಂಸದರೊಬ್ಬರ ಸಂಬಂಧಿಕರೊಬ್ಬರು ಮೊಬೈಲ್‌ ಮೂಲಕ ಒಟಿಪಿ ಬಳಸಿದ್ದಾರೆ ಎಂಬ ಆರೋಪವನ್ನು ಚುನಾವಣಾ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮುಂಬೈ ವಾಯುವ್ಯ ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ವಂದನಾ ಸೂರ್ಯವಂಶಿ, ಇವಿಎಂ ಸ್ವತಂತ್ರ ವ್ಯವಸ್ಥೆಯ ಯಂತ್ರವಾಗಿದ್ದು ಮತಯಂತ್ರ ತೆರೆಯಲು ಒಟಿಪಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದು ಲೋಕಸಭೆ ಚುನಾವಣೆಯಲ್ಲಿ 48 ಮತಗಳ ಅಂತರದಲ್ಲಿ ಜಯಗಳಿಸಿದ ಶಿಂಧೆ ಬಣದ ಶಿವಸೇನಾ ಅಭ್ಯರ್ಥಿಯಾದ ರವೀಂದ್ರ ವೈಕರ್‌ ಅವರ ಸಂಬಂಧಿಕರು ಜೂನ್‌ 4 ರಂದು ಮತ ಎಣಿಕೆ ಸಂದರ್ಭದಲ್ಲಿ ಪೋನ್‌ ಮೂಲಕ ಒಟಿಪಿ ಬಳಸಿ ಮತ ಯಂತ್ರವನ್ನು ತೆರೆದಿದ್ದರು ಎಂದು ಪ್ರಕಟಿಸಲಾಗಿತ್ತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಇವಿಎಂ ಪ್ರೋಗ್ರಾಂ ವ್ಯವಸ್ಥೆ ಹೊಂದಿರದ ಹಾಗೂ ಯಾವುದೇ ವೈರ್‌ಲೆಸ್‌ ಕಮ್ಯೂನಿಕೇಷನ್‌ ಸಾಮರ್ಥ್ಯ ಬೆಂಬಲಿಸಲದ ಕಾರಣ ಮೊಬೈಲ್‌ ಮೂಲಕ ಒಟಿಪಿ ಅಗತ್ಯವಿಲ್ಲ. ಅಲ್ಲದೆ ಇವಿಎಂಗೆ ಯಾವುದೇ ಯಾವುದೇ ಹೊರಗಿನ ಸಂಪರ್ಕ ಕಲ್ಪಿಸುವುದಕ್ಕೆ ಸಾದ್ಯವಿಲ್ಲ. ಈ ಸುದ್ದಿ ಮಾಧ್ಯಮವೊಂದರ ಮೂಲಕ ಹರಡಲಾಗಿದ್ದು,ಕೆಲ ನಾಯಕರು ಸುಳ್ಳು ಸುದ್ದಿಯನ್ನು ಹರಡಿದ್ದಾರೆ” ಎಂದು ಸೂರ್ಯವಂಶಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಸುಳ್ಳು ಸುದ್ದಿ ಹರಡಿದ ಮಾಧ್ಯಮದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಇದೇ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ತಿಳಿಸಿದರು.

“ಆಧುನಿಕ ತಂತ್ರ ವ್ಯವಸ್ಥೆ ಹಾಗೂ ಸುರಕ್ಷಿತ ಕ್ರಮಗಳನ್ನು ಅಳವಡಿಸಿರುವುದರಿಂದ ಮತಯಂತ್ರವನ್ನು ತಿರುಚುವುದಕ್ಕೆ ಸಾಧ್ಯವಿಲ್ಲ. ಸುರಕ್ಷಿತ ಕ್ರಮಗಳನ್ನು ಒಳಗೊಂಡ ಪ್ರತಿಯೊಂದನ್ನು ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್‌ಗಳ ಉಪಸ್ಥಿತಿಯಲ್ಲಿ ಅಳವಡಿಸಲಾಗಿರುತ್ತದೆ” ಎಂದು ಸೂರ್ಯವಂಶಿ ತಿಳಿಸಿದ್ದಾರೆ.

ಸಂಸದ ರವೀಂದ್ರ ವೈಕರ್‌ ಅವರ ಸಂಬಂಧಿ ಮಂಗೇಶ್ ಪಂಡ್ಲಿಕರ್‌ ಜೂನ್‌ 4 ರಂದು ಮತಯಂತ್ರ ತೆರೆಯಲು ಒಟಿಪಿ ಬಳಸಿದ್ದರು ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು.

ಮೊಬೈಲ್‌ ಫೋನಿನಲ್ಲಿರುವ ಕರೆ ವಿವರಗಳನ್ನು ಪತ್ತೆ ಹಚ್ಚಲು ಹಾಗೂ ಬೇರೆ ಉದ್ದೇಶಕ್ಕೆ ಬಳಸಲಾಗಿದೆಯೆ ಎಂಬುದನ್ನು ಪರೀಕ್ಷಿಸಲು ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗೇಶ್ ಪಂಡ್ಲಿಕರ್‌ ವಿರುದ್ಧ ಮತಗಟ್ಟೆ ಅಧಿಕಾರಿ ದಿನೇಶ್ ಗೌರವ್‌ ಕೂಡ ದೂರು ನೀಡಿದ್ದಾರೆ. ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಮಂಗೇಶ್ ಪಂಡ್ಲಿಕರ್‌ ಫೋನ್‌ ಬಳಸಿರುವುದನ್ನು ಗಮನಿಸಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಕಾಡೆ ಮಲಗುತ್ತಾ ಅಂಬಾನಿಯ ಜಿಯೋ?

5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್...

ಬಿಷ್ಣೋಯ್ ಎನ್‌ಕೌಂಟರ್‌ಗೆ 1,11,11,111 ರೂ. ಬಹುಮಾನ: ಕರ್ಣಿ ಸೇನೆ

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ರುವಾರಿ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್‌...

ಜಾರ್ಖಂಡ್ ಚುನಾವಣೆ | ಬಿಜೆಪಿಗೆ ಸೀಟು ಹಂಚಿಕೆ ಬಿಕ್ಕಟ್ಟು; ಮತ್ತೆ ಗೆಲ್ಲುವುದೇ ‘ಇಂಡಿಯಾ’?

ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದೆ....