ಅತ್ತೆ-ಮಾವ ‘ಬೈಕ್‌ ಇಎಂಐ’ ಕಟ್ಟಿಲ್ಲವೆಂದು ಅಳಿಯ ಆತ್ಮಹತ್ಯೆ

Date:

Advertisements

ಸಾಲದ ಮೇಲೆ ಖರೀದಿಸಲಾಗಿದ್ದ ಬೈಕ್‌ಗೆ ‘ಇಎಂಐ’ ಕಂತು ಕಟ್ಟಿಲ್ಲವೆಂದು ಫೈನಾನ್ಸ್‌ ಕಂಪನಿಯ ಸಿಬ್ಬಂದಿ ಬೈಕ್‌ಅನ್ನು ತೆಗೆದುಕೊಂಡು ಹೋಗಿದ್ದಾರೆ. ಬೈಕ್‌ನ ಇಎಂಐ ಕಂತನ್ನು ತಮ್ಮ ಅತ್ತೆ-ಮಾವ ಕಟ್ಟಿಲ್ಲವೆಂದು ಕೋಪಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮೃತನನ್ನು ಬಿಹಾರದ ಬನ್ಮಂಖಿ ಪ್ರದೇಶದ ಪಾಸ್ವಾನ್ ಟೋಲಾದ ನಿವಾಸಿ ದೀಪಕ್ ಕುಮಾರ್ ಪಾಸ್ವಾನ್ ಎಂದು ಹೆಸರಿಸಲಾಗಿದೆ. ಈತ ಕಳೆದ ವರ್ಷ ವಿವಾಹವಾಗಿದ್ದ. ವಿವಾಹ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬೈಕ್‌ ನೀಡುವಂತೆ ವಧುವಿನ ಕುಟುಂಬದ ಎದರು ಬೇಡಿಕೆ ಇಟ್ಟಿದ್ದ. ಪೂರ್ಣ ಹಣ ಪಾವತಿಸಿ ಬೈಕ್‌ ಖರೀದಿಸಲಾಗದ ದೀಪಕ್ ಅವರ ಮಾವ (ಪತ್ನಿಯ ತಂದೆ) ರಾಜ್‌ಕುಮಾರ್ ಪಾಸ್ವಾನ್‌ ಇಎಂಐ ಮೇಲೆ ಬೈಕ್‌ ಕೊಡಿಸಿದ್ದರು. ಪ್ರತಿ ತಿಂಗಳು ರಾಜ್‌ಕುಮಾರ್ ಅವರೇ ಇಎಂಐ ಪಾವತಿಸುತ್ತಿದ್ದರು ಎಂದು ವರದಿಯಾಗಿದೆ.

ಆದರೆ, ಮೂರು ತಿಂಗಳಿಂದ ಯಾವುದೇ ಹಣ ದೊರೆಯದ ಕಾರಣ ರಾಜ್‌ಕುಮಾರ್ ಅವರಿಗೆ ಇಎಂಐ ಕಟ್ಟಲು ಸಾಧ್ಯವಾಗಿರಲಿಲ್ಲ. ಇಎಂಐ ಕಟ್ಟುವಂತೆ ದೀಪಕ್‌ ಪದೇ-ಪದೇ ರಾಜ್‌ಕುಮಾರ್ ಅವರನ್ನು ಪೀಡಿಸುತ್ತಿದ್ದರು. ಆದರೆ, ಹಣವನ್ನು ಹೊಂದಿಸಲಾಗದ ರಾಜ್‌ಕುಮಾರ್ ಅವರು ಇಎಂಐ ಪಾವತಿಸಿರಲಿಲ್ಲ ಎಂದು ತಿಳಿದುಬಂದಿದೆ.

Advertisements

ಪರಿಣಾಮ, ಫೈನಾನ್ಸ್‌ ಕಂಪನಿಯ ಸಿಬ್ಬಂದಿ ದೀಪಕ್‌ ಬಳಿಯಿದ್ದ ಬೈಕನ್ನು ತೆಗೆದುಕೊಂಡು ಹೋಗಿದ್ದಾರೆ. ಆ ನಂತರೂ, ಇಎಂಐ ಕಟ್ಟಿ, ಬೈಕ್ ಬಿಡಿಸಿಕೊಡುವಂತೆ ತನ್ನ ಪತ್ನಿಯ ಪೋಷಕರಿಗೆ ದೀಪಕ್‌ ಒತ್ತಡ ಹಾಕಿದ್ದಾನೆ. ಆದಾಗ್ಯೂ, ಹಣ ಪಾವತಿಸುವಲ್ಲಿ ರಾಜ್‌ಕುಮಾರ್ ಕುಟುಂಬ ಅಸಹಾಯಕವಾಗಿದೆ ಎಂದು ಹೇಳಲಾಗಿದೆ.

ಇದರಿಂದ ಕೋಪಗೊಂಡ ದೀಪಕ್ ತನ್ನ ಕೋಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾರೆ. ಬಹಳ ಹೊತ್ತಾದರೂ ಬಾಗಿಲು ತೆರೆಯದ್ದನ್ನು ಗಮನಿಸಿದ ಕುಟುಂಬಸ್ಥರು, ಬಾಗಿಲು ತೆರೆಯುವಂತೆ ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗಾಬರಿಗೊಂಡ ಕುಟುಂಬಸ್ಥರು ನೆರೆಹೊರೆಯವರನ್ನು ಕರೆದು, ಬಾಗಿಲು ಮುರಿದಿದ್ದಾರೆ. ಆ ವೇಳೆಗೆ, ದೀಪಕ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಗಮನಿಸಿ: ವರದಕ್ಷಿಣ ಕಾನೂನುಬಾಹಿರ ಕೃತ್ಯ. ವರದಕ್ಷಿಣ ಪಡೆಯುವುದು ಮಾತ್ರವಲ್ಲ, ವರದಕ್ಷಿಣೆ ಕೊಡುವುದು ಕೂಡ ಅಪರಾಧ. ವರದಕ್ಷಿಣೆ ಕಿರುಕುಳದಿಂದ ಹಲವಾರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿ ವರದಕ್ಷಿಣೆಯ ವಿರುದ್ಧ ಕಾನೂನುಗಳಿವೆ. ವರದಕ್ಷಿಣ ಕೇಳುವುದು, ಪೀಡಿಸುವುದು, ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ವರದಕ್ಷಿಣೆಯ ವಿರುದ್ಧ ನಿರಂತರ ಹೋರಾಟಗಳೂ ನಡೆಯುತ್ತಿವೆ. ವರದಕ್ಷಿಣೆಯನ್ನು ಸಮಾಜದಿಂದ ತೊಡೆದು ಹಾಕಬೇಕಿದೆ. ಅದಕ್ಕಾಗಿ ಎಲ್ಲರೂ ಸನ್ನದ್ಧರಾಗಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X