ಉತ್ತರಾಖಂಡದ ನಾನಕ್ ಮಠ ಗುರುದ್ವಾರ ಕರ ಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುರುವಾರ ಬೆಳಗ್ಗೆ ಉಧಮ್ ಸಿಂಗ್ ನಗರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೆಳಿಗ್ಗೆ 6:30 ರ ಸುಮಾರಿಗೆ ಡೇರಾದೊಳಗೆ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಸಿಂಗ್ ಅವರನ್ನು ಖತಿಮಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಉಧಮ್ ಸಿಂಗ್ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಂಜುನಾಥ್ ಟಿಸಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
#WATCH | Uttarakhand Director General of Police Abhinav Kumar says, “We received information around 7 am today that between 6:15-6:30 am, two masked assailants entered Nanakmatta Gurdwara and shot Kar Seva Pramukh Baba Tarsem Singh. He was rushed to the hospital in Khatima. But I… pic.twitter.com/OxWBAZrX78
— ANI UP/Uttarakhand (@ANINewsUP) March 28, 2024
ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಪಿ ಅಂಶುಮಾನ್, “ಬೆಳಿಗ್ಗೆ 6:30 ರ ಸುಮಾರಿಗೆ ಡೇರಾದ ನಾನಕ್ ಮಠ ಕರ ಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹಂತಕರನ್ನು ಪತ್ತೆಹಚ್ಚಲು ನಾವು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಜೊತೆಗೆ ಹಲವಾರು ಪೊಲೀಸ್ ತಂಡಗಳನ್ನು ನಿಯೋಜಿಸಿದ್ದೇವೆ. ಹತ್ಯೆಯ ತನಿಖೆಗಾಗಿ ನಾವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುತ್ತೇವೆ” ಎಂದು ತಿಳಿಸಿದರು.
ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಮಾತನಾಡಿ, ” ಇದು ತುಂಬಾ ಗಂಭೀರವಾದ ವಿಷಯ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಎಸ್ಎಸ್ಪಿ ಈಗಾಗಲೇ ಅಲ್ಲಿದ್ದಾರೆ, ಡಿಐಜಿ ಕೂಡಾ ಅಲ್ಲಿಗೆ ತಲುಪುತ್ತಿದ್ದಾರೆ. ಅವರು ಅಪರಾಧದ ಸ್ಥಳವನ್ನು ಪರಿಶೀಲಿಸುತ್ತಾರೆ” ಎಂದು ಹೇಳಿದರು.
ನಾನಕ್ ಮಠ ಸಾಹಿಬ್ ಎಂದೂ ಕರೆಯಲ್ಪಡುವ ನಾನಕ್ ಮಠ ಗುರುದ್ವಾರವು ಸಿಖ್ ತೀರ್ಥಯಾತ್ರಾ ಸ್ಥಳವಾಗಿದೆ.