ನಿರ್ಗಮಿಸುವ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ: ಕಾಂಗ್ರೆಸ್ ವಾಗ್ದಾಳಿ

Date:

Advertisements

ನಿರ್ಗಮಿಸುವ ಪ್ರಧಾನಿ ನರೇಂದ್ರ ಮೋದಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ. ಮೋದಿಯ ಗ್ಯಾರಂಟಿ ಹಳ್ಳ ಹಿಡಿದಿದೆ. ಇದಲ್ಲದೆ 400 ಸಂಖ್ಯೆ ನಿಶ್ಚಿತ ಸಮಾಧಿ ಸ್ಥಿತಿಗೆ ಕೊಂಡೊಯ್ಯಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ನಿರ್ಗಮಿಸುವ ಪ್ರಧಾನಿ ಒಬ್ಬ ಮಹಾನ್‌ ಸುಳ್ಳುಗಾರ ಎಂದು ಇಡೀ ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ಆದರೂ ಮೋದಿ ಅವರು ಹಿಂದೂ ಮುಸ್ಲಿಂ ರಾಜಕೀಯದ ಸುಳ್ಳುಗಳನ್ನು ದಿನನಿತ್ಯ ಪಠಿಸುತ್ತಿರುವುದು ತಮ್ಮ ಕರುಣಾಜನಕ ಮಾನದಂಡವನ್ನೇ ಅನುಸರಿಸುತ್ತಿರುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. 2024ರ ಏಪ್ರಿಲ್ 19ರಂದು ದಾಖಲಾದ ಈ ವಿಷಯ ನಮ್ಮ ಮನಸ್ಸಿನಿಂದ ಅಳಿಸಿ ಹೋಗುವುದಿಲ್ಲ ಎಂದು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

ನಿರ್ಗಮಿಸುವ ಪ್ರಧಾನಿಯವರು ನಿರ್ಲಜ್ಜವಾಗಿ ಬಳಸಿದ ಕೋಮುವಾದಿ ಭಾಷೆ, ಸಂಕೇತಗಳು ಹಾಗೂ ಪ್ರಸ್ತಾಪಗಳು ಅವರು ತಮ್ಮ ಮನಸ್ಸಿನಿಂದ ಅಳಿಸಬಹುದು. ಆದರೆ ನಮ್ಮ ಮನಸ್ಸಿನಿಂದ ಅಳಿದು ಹೋಗುವುದಿಲ್ಲ. ನಾವು ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಕ್ರಮ ಕೈಗೊಳ್ಳಬೇಕಾಗಿದೆ. ನೋವಿನ ಸಂಗತಿಯಂದರೆ ಕ್ರಮ ಜರುಗಿಸಲಾಗಿಲ್ಲ ಎಂದು ಜೈರಾಮ್‌ ರಮೇಶ್ ಬೇಸರ ವ್ಯಕ್ತಪಡಿಸಿದರು.

ಪ್ರಚಾರದ ಉದ್ದಕ್ಕೂ ನಿರ್ಗಮಿತ ಪ್ರಧಾನಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ರಾಜಕೀಯ ಗೊತ್ತಿರಲಿಲ್ಲ. ಮೋದಿಯವರ ಪಕ್ಷದ ಪ್ರಣಾಳಿಕೆ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ಕೆಲವು ತಿಂಗಳುಗಳಿಂದ ಮೋದಿಯವರ ಗ್ಯಾರಂಟಿಗೆ ಸಾರ್ವಜನಿಕವಾಗಿ ಭರ್ಜರಿ ಪ್ರಚಾರ ಕೊಡಲಾಯಿತಾದರೂ ಅದು ಹಳ್ಳ ಹಿಡಿಯಿತು.400 ಸಂಖ್ಯೆ ಕೂಡ ಸಮಾಧಿ ಸ್ಥಿತಿ ತಲುಪಿದೆ. ಆದ ಕಾರಣ ಹತಾಶ ಸ್ಥಿತಿಗೆ ತಲುಪಿರುವ ಮೋದಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಕಾರ್ಯಸೂಚಿ ಬಗ್ಗೆ ಭಾರತದ ಜನರಿಗೆ ಅಪಪ್ರಚಾರ ಮೂಡಿಸುತ್ತಿದ್ದಾರೆ. ಮೋದಿಯ ನಿರ್ಗಮನದ ವಿಷಯ ಅವರಿಗೆ ನೆನಪಿನ ಶಕ್ತಿಯನ್ನು ಇನ್ನಷ್ಟು ಕಳೆದುಕೊಳ್ಳುವಂತೆ ಮಾಡಿದೆ ಎಂದು ಜೈರಾಮ್‌ ರಮೇಶ್ ಪ್ರಧಾನಿ ವಿರುದ್ಧ ಟೀಕಾಪ್ರಹಾರ ಮಾಡಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X