ಒಂದು ಜೀವವಾಗಿ ಟಾಟಾ ಗೌರವಾರ್ಹರು – ಆದರೆ…!

Date:

Advertisements

ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ವ್ಯಕ್ತಿಯೊಬ್ಬ ತನ್ನ Social capital ಪ್ರಭಾವದಿಂದ ಬೃಹತ್ ಬಂಡವಾಳಶಾಹಿಯಾಗಿ ಬೆಳೆಯುವುದು ನಿಜಕ್ಕೂ ದೊಡ್ಡ ಸಾಧನೆ ಅಲ್ಲವೇ ಅಲ್ಲ. ಮೇಲ್ಜಾತಿಯಾದ ಕಾರಣಕ್ಕೆ ಹಾಗೂ ಸರ್ಕಾರದ ಸಖ್ಯವಿದ್ದ ಕಾರಣಕ್ಕೆ ದೇಶದ ಸಂಪನ್ಮೂಲಗಳ ಬಳಕೆಯಲ್ಲಿ bargain ಮಾಡಿಕೊಂಡು ಕೋಟಿ ಕೋಟಿ ಸಂಪಾದಿಸಿ, ಅದರಿಂದ ಒಂದಷ್ಟು ಜನಕ್ಕೆ ಉದ್ಯೋಗ ಹಾಗೂ ದೇಶದ ಉತ್ಪಾದನಾ ರಂಗಕ್ಕೆ ವೇಗ ಕೊಡುವುದೂ ಸಹ ದೊಡ್ಡಸ್ಥಿಕೆ ಏನಲ್ಲ. ಅದರಲ್ಲೂ ಕೃಷಿಕರೇ ಹೆಚ್ಚಿದ್ದ 60-90ರ ದಶಕದಲ್ಲಿ ದೇಶದ ಬೆನ್ನೆಲುಬಾಗಿದ್ದವರು ರೈತರೇ. ಈಗಲೂ ಸಹ ಭಾರತದ ಜಿಡಿಪಿಯಲ್ಲಿ ರೈತರು, ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ MSMEಗಳ ಪಾಲೇ ಹೆಚ್ಚು. ಈ ಕೋಟ್ಯಾಧಿಪತಿ ಕಾರ್ಪೊರೇಟಿಗರು ಸೃಷ್ಟಿಸಿರುವ ಉದ್ಯೋಗ ತೀರ ಕಡಿಮೆ. ಆದರೆ, ಗಳಿಸಿರುವ ಲಾಭ ಬೆಟ್ಟದಷ್ಟು. ಭಾರತದ ಒಂದೆರಡು ವರ್ಷದ ಬಜೆಟ್ಟಿಗೆ ಸಮನಾಗುವಷ್ಟು.

ಇಂತಹ ಬಂಡವಾಳಶಾಹಿಗಳು ಯಾವುದೇ ಕಾಲವಿರಲಿ, ಮತ್ತಷ್ಟು ಬಲಿತು ಬೆಳೆಯುತ್ತಾರೆಯೇ ಹೊರತು ಇಳಿಯುವುದಿಲ್ಲ. ಕಳೆದ ದಶಕದಲ್ಲಿ ಅಂಬಾನಿ-ಅದಾನಿಗಳು ಟಾಟಾ-ಬಿರ್ಲಾರನ್ನು replace ಮಾಡಿದರೇ ಹೊರತು ದೇಶದ ಬಡತನ, ಜಾತೀಯತೆ, ಪುರುಷಾಧಿಪತ್ಯ ಕಡಿಮೆ ಮಾಡುವಲ್ಲಿ ಇವರ ಪಾಲೇನೂ ಇಲ್ಲ. ಬದಲಾಗಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇವರ ಕಾಣಿಕೆ ಸಾಕಷ್ಟಿದೆ.

ಈ ವರದಿ ಓದಿದ್ದೀರಾ?: ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?

Advertisements

ಈ ಅತಿ ಶ್ರೀಮಂತರು ತಾವು ಅಕ್ರಮವಾಗಿ ಗಳಿಸಿದ (ಅವರು ಗಳಿಸಿರುವ ಎಲ್ಲವೂ ಅಕ್ರಮವೇ) ಪ್ರತಿ ನೂರು ರೂಪಾಯಿಯಲ್ಲಿ ಒಂದು ಪೈಸೆಯನ್ನು ತಮ್ಮದೇ ಹೆಸರಿನ ಚಾರಿಟಿಯಿಂದ ಸಮಾಜದ ಪ್ರಗತಿಗೆ ದೇಣಿಗೆಯಾಗಿ ನೀಡುತ್ತಾ ಉಳಿದಂತೆ ಮಿಗುತಾಯವಾದ 99.99 ರೂಪಾಯಿ ಬೆವರಿಲ್ಲದ ಲಾಭವನ್ನು ಜೇಬಿಗೆ ಹಾಕಿಕೊಂಡಿರುವುದನ್ನು ಮರೆಮಾಚಿಸುತ್ತಾರೆ. ಸಾಮಾನ್ಯ ಜನರ ಬಾಯಲ್ಲಿ ದೇವರಾಗಿ ಬಿಡುತ್ತಾರೆ. ಆದರೆ, ಪ್ರಜ್ಞಾವಂತರು ಈ ಖೆಡ್ಡಾಕೆ ಬೀಳಬಾರದು. ಏಕೆಂದರೆ, ಇಂದಿಗೂ direct tax ಕಡಿಮೆ‌ ಕಟ್ಟುವುದು ಉದ್ಯಮಿಗಳೇ. indirect tax ಹೆಚ್ಚು ಕಟ್ಟುವುದು ಬಡವರೇ.

ಒಂದು ಜೀವವಾಗಿ ಟಾಟಾ ಗೌರವಾರ್ಹರು. ಆದರೆ, ಉದ್ಯಮಿಯಾಗಿ ದುಡಿವ ಜನರ ಬೆವರಿನ ಪಾಲನ್ನು ಕಿತ್ತುಕೊಂಡು ತಮ್ಮ ಜೇಬಿಗೆ ಹಾಕಿಕೊಂಡು ಐಷಾರಾಮಿ ಜೀವನ ಸಾಗಿಸಿದ, ಶ್ರಮಿಕರನ್ನು ಶೋಷಿಸಿದ, ದೇಶದ ಬಡತನವನ್ನು ಹೆಚ್ಚಿಸಿದ ಬಂಡವಾಳಶಾಹಿ ಎಂಬುದನ್ನು ನಾವು ಮರೆಯಬಾರದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್ ಮೌರ್ಯ
ವಿಕಾಸ್ ಮೌರ್ಯ
ವಿಜ್ಞಾನ ಶಿಕ್ಷಕ, ಬರಹಗಾರ, ಹೋರಾಟಗಾರ. ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು. ಲೇಖನಗಳ ಸಂಗ್ರಹ 'ಚಮ್ಮಟಿಕೆ', 'ನೀಲವ್ವ' ಎಂಬ ಕಥಾಸಂಕಲನ ಪ್ರಕಟ. ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X