ಔರಾಂಗಾಬಾದ್, ಉಸ್ಮಾನಾಬಾದ್ ಹೆಸರುಗಳನ್ನು ಛತ್ರಪತಿ ಸಾಂಬಾಜಿ ನಗರ್ ಹಾಗೂ ಧರಶಿವ್ ಎಂದು ಬದಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ‘ಹೆಸರಲ್ಲೇನಿದೆ’ ಎಂದು ವಜಾಗೊಳಿಸಿತು.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರೀಫ್ ಡಾಕ್ಟರ್ ಅವರಿದ್ದ ಪೀಠವು, ಅರ್ಜಿಗಳು ಸರಿಯಾದ ಅರ್ಹತೆಯನ್ನು ಹೊಂದಿಲ್ಲ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಹೆಸರು ಬದಲಾವಣೆಯ ಅಧಿಸೂಚನೆಯು ಯಾವುದೇ ಮಧ್ಯಸ್ಥಿಕೆಯನ್ನು ಸಮರ್ಥಿಸುವುದಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿತು.
“ರಾಜ್ಯ ಸರ್ಕಾರ ಹೊರಡಿಸಿರುವ ಔರಂಗಬಾದ್ ಹಾಗೂ ಉಸ್ಮಾನಾಬಾದ್ ಹೆಸರು ಬದಲಾವಣೆಯ ಅಧಿಸೂಚನೆಯು ಯಾವುದೇ ಅಕ್ರಮ ಅಥವಾ ಕಾನೂನು ದುರ್ಬಲತೆಯನ್ನು ಹೊಂದಿಲ್ಲ ಎಂದು ಹೇಳಲು ನಾವು ಹಿಂಜರಿಯುವುದಿಲ್ಲ” ಎಂದು ಪೀಠವು ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ಈ ಸಂದರ್ಭದಲ್ಲಿ ವಿಲಿಯಂ ಶೇಕ್ಸ್ಪಿಯರ್ನ ರೋಮಿಯೋ ಮತ್ತು ಜೂಲಿಯಟ್ ನಾಟಕದ “ ಹೆಸರಲ್ಲೇನಿದೆ? ಗುಲಾಬಿಯನ್ನು ಯಾವುದೇ ಹೆಸರಿನಿಂದ ಕರೆದರೂ ಅದರ ಸುವಾಸನೆ ಸಹಿಯಾಗಿರುತ್ತದೆ” ಎಂಬ ಸಾರಾಂಶವನ್ನು ಪೀಠ ಉಲ್ಲೇಖಿಸಿತು.
ಮಹಾರಾಷ್ಟ್ರ ಕಂದಾಯ ಸಂಹಿತೆಯು ರಾಜ್ಯ ಸರ್ಕಾರವು ಯಾವುದೇ ಭೂಪ್ರದೇಶವನ್ನು ರದ್ದುಗೊಳಿಸಲು ಹಾಗೂ ಭೂಪ್ರದೇಶದ ಹೆಸರು ಹಾಗೂ ಹೊಸ ಹೆಸರನ್ನು ಬದಲಿಸಲು ಅನುಮತಿಸುತ್ತದೆ ಎಂದು ಪೀಠವು ತನ್ನ ತೀರ್ಪಿನಲ್ಲಿ ತಿಳಿಸಿತು.
2022 ರಲ್ಲಿ ಮಹಾರಾಷ್ಟ್ರ ಸಂಪುಟವು ಔರಾಂಗಾಬಾದ್, ಉಸ್ಮಾನಾಬಾದ್ ಹೆಸರುಗಳನ್ನು ಛತ್ರಪತಿ ಸಾಂಬಾಜಿ ನಗರ್ ಹಾಗೂ ಧರಶಿವ್ ಎಂದು ಬದಲಿಸಿ ಅನುಮೋದನೆ ನೀಡಿತ್ತು. ಹಳೆಯ ಹೆಸರುಗಳನ್ನು ಬದಲಾಯಿಸಿರುವುದನ್ನು ಪ್ರಶ್ನಿಸಿ ಎರಡೂ ಜಿಲ್ಲೆಯ ನಾಗರಿಕರು ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.