ಗಣಪತಿ ಕತೆ ಅವೈಜ್ಞಾನಿಕ, ಅಸಹ್ಯಕರ: ಬನ್ನಂಜೆಯವರ ಹಳೆಯ ವಿಡಿಯೊ ವೈರಲ್

Date:

Advertisements

“ಗಣಪತಿಯ ಕತೆ ಅವೈಜ್ಞಾನಿಕ ಮತ್ತು ಅಸಹ್ಯಕರ” ಎಂದು ಹಿರಿಯ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರು ಹೇಳಿರುವ ವಿಡಿಯೊ ಕ್ಲಿಪ್ ಈಗ ವೈರಲ್ ಆಗುತ್ತಿದೆ.

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, “ಗಣಪತಿ ನಮ್ಮ ಸಂಸ್ಕೃತಿಯಲ್ಲ” ಎಂದು ಲಿಂಗಾಯತ ಧರ್ಮಾನುಯಾಯಿಗಳಿಗೆ ತಿಳಿಸಿದ ಬಳಿಕ ಹಿಂದುತ್ವವಾದಿ ವಿಚಾರಗಳ ಪ್ರತಿಪಾದಕರು ಸ್ವಾಮೀಜಿಯವರ ಮೇಲೆ ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಬನ್ನಂಜೆ ಮತ್ತು ಅದಮಾರು ಪೀಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರ ವಿಡಿಯೊ ತುಣುಕುಗಳು ವೈರಲ್ ಆಗುತ್ತಿವೆ.

“ಲಿಂಗಾಯತ ಸ್ವಾಮೀಜಿಯವರನ್ನು ಪ್ರಶ್ನಿಸುವ ಹಿಂದುತ್ವವಾದಿಗಳು, ಬನ್ನಂಜೆ ಮತ್ತು ಮಾಧ್ವ ಮಠದ ಸ್ವಾಮೀಜಿಯ ವಿಡಿಯೊ ಕುರಿತು ಏನಂತಾರೆ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

Advertisements

ಬನ್ನಂಜೆಯವರು ಮಾತನಾಡುತ್ತಾ, “ಗಣಪತಿಯ ಕಥೆಗಳನ್ನು ಕೇಳಿರಬಹುದು. ಪಾರ್ವತಿ ಸ್ನಾನಕ್ಕೆ ಹೋಗುವಾಗ, ತಾನು ಸ್ನಾನ ಮುಗಿಸಿ ಬರುವವರೆಗೂ ಯಾರೂ ಬರಬಾರದೆಂದು ಯೋಚಿಸಿ ಅವಳ ಮೈಯ ಮಣ್ಣಿನಿಂದ ಬೊಂಬೆ ಮಾಡಿ ಅದಕ್ಕೆ ಜೀವ ತುಂಬಿದಳು. ಅವನನ್ನು ಹೊರಗೆ ಕೂರಿಸಿದಳು. ಬಾತ್ ರೂಮ್‌ಗೆ ಹೋಗಿ ಬರುವವರೆಗೂ ಯಾರನ್ನೂ ಒಳಗೆ ಬರಲು ಬಿಡಬೇಡ ಎಂದು ಹೇಳಿದ್ದಳು. ದೇವಲೋಕದ ಬಾತ್‌ ರೂಮ್‌ಗೆ ಬೋಲ್ಟ್ ಇಲ್ಲ ಅಂತಾಯ್ತು. ಸ್ನಾನ ಮಾಡ್ತಾ ಇದ್ದಾರೆಂದು ತಿಳಿಯದೆ ಸೀದಾ ಒಳಗೆ ಹೋಗಿಬಿಡಬಹುದು. ಇದು ತೀರಾ ಅವೈಜ್ಞಾನಿಕ ಮತ್ತು ಅಸಹ್ಯಕರವಾದ ಕತೆ” ಎಂದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಮಾಧ್ವ ಮಠದ ಸ್ವಾಮೀಜಿ ವಿಶ್ವಪ್ರಿಯ ತೀರ್ಥರು ಮಾತನಾಡುತ್ತಾ, “ಗಣಪತಿಗೆ ಪ್ರಿಯವಾಗಲಿ ಎಂದು ನಮ್ಮಲ್ಲಿ ಗಣ ಹೋಮ ಮಾಡುತ್ತಾರೆ. ಗಣಪತಿ ಅಂತ ಒಬ್ಬ ರಾಕ್ಷಸ ಇದ್ದಾನೆ. ಗಣ ಹೋಮದಿಂದ ಆತನಿಗೆಯೇ ಪ್ರೀತಿಯಾಯ್ತು. ಗಣಪತಿಗೆ ತಲುಪಲಿಲ್ಲ ಎಂದು ಶಾಸ್ತ್ರಕಾರರು ಹೇಳುತ್ತಾರೆ. ಆದರೆ ಆ ವಿಚಾರವನ್ನು ಹೇಳಿದರೂ ನಮ್ಮ ಜನಕ್ಕೆ ತಲುಪಲ್ಲ” ಎಂದಿದ್ದಾರೆ.

ಮುಂದುವರಿದು, “ಗಣಪತಿ ಹೆಸರಿನ ರಾಕ್ಷಸ ಇದ್ದಾನೆಂದು ಶಾಸ್ತ್ರಕಾರರು ಹೇಳುತ್ತಾರೆ. ಏನೋ ಪರಿಹಾರ ಆಗಬೇಕು ಅಂತ ಗಣಪತಿ ಹೋಮ ಮಾಡಿಸುತ್ತಾರೆ. ಸಮಸ್ಯೆ ಪರಿಹಾರವಾಗಲಿಲ್ಲ. ಸಮಸ್ಯೆ ಉಲ್ಭಣವಾಯಿತು. ಗಣಪತಿಗೆ (ರಾಕ್ಷಸನಿಗೆ) ಕೊಟ್ಟಿದ್ದರಿಂದ ಆತ ಇನ್ನೂ ಬಲಿಷ್ಠನಾದ. ಮತ್ತಷ್ಟು ಉಪದ್ರ ಮಾಡಲು ಶುರು ಮಾಡಿದ” ಎಂದಿರುವುದನ್ನು ಇಲ್ಲಿ ಕಾಣಬಹುದು.

ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂದಿರುವ ಸಾಣೇಹಳ್ಳಿ ಸ್ವಾಮೀಜಿಯವರಿಗೆ “ದೇವರ ತಂಟೆ” ಬೇಡ ಎಂದಿರುವ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟ ಅವರು ತಮ್ಮ ಜಾತಿಯ ವಿದ್ವಾಂಸರ ವಿರುದ್ಧ ಮಾತನಾಡುತ್ತಾರಾ ಎಂದು ಪ್ರಶ್ನಿಸಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?

ಚುನಾವಣಾ ಆಯೋಗದ ಕೆಲಸ ಚುನಾವಣೆ ನಡೆಸುವುದು. ಆ ಕರ್ತವ್ಯವನ್ನೇ ಸರಿದೂಗಿಸಲಾಗದ ಆಯೋಗವು...

ವಿಶ್ಲೇಷಣೆ | ಸಹಕಾರ ಕ್ಷೇತ್ರವನ್ನು ಕಬ್ಜಾ ಮಾಡಲು ಹೊರಟಿದ್ದಾರೆಯೇ ಅಮಿತ್ ಶಾ?

ರಾಜ್ಯ ಸರ್ಕಾರಗಳು ತಮ್ಮ ಒಪ್ಪಿಗೆಯನ್ನು ನೀಡದಿದ್ದರೆ ಎನ್‌ಡಿಡಿಬಿಯಿಂದ ಬರಬೇಕಾದ ಅನುದಾನವನ್ನು ತಡೆಯುವ...

ಹಿಂದುಗಳ ಅಮರನಾಥ ಯಾತ್ರೆಗೆ ಮುಸ್ಲಿಮರ ಸಾಥ್; ಇದಲ್ಲವೇ ಬದುಕುವ ಮಾರ್ಗ!

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆ ನಿನ್ನೆ...

ಹೃದಯಾಘಾತ: ಆತಂಕವನ್ನು ‘ಹಾರ್ಟ್‌’ಗೆ ಹಚ್ಚಿಕೊಳ್ಳದಿರಿ, ಭಯ ಬೇಡ ಎಚ್ಚರಿಕೆ ಇರಲಿ

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ, ವ್ಯಾಯಾಮ ಮಾಡಿ. ಇವೆಲ್ಲವುದಕ್ಕೂ ಮೊದಲು 'ವಾಟ್ಸಾಪ್ ಯೂನಿವರ್ಸಿಟಿ'ಯ...

Download Eedina App Android / iOS

X