420 ಕೆಲಸ ಮಾಡುತ್ತಿರುವವರು ಮುಂದಿನ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷ ಹೀಗೆ ಮಾತನಾಡುವುದು ಅವರ ದುರಹಂಕಾರದ ಪ್ರತಿಬಿಂಬವಾಗಿರುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರು 400ಕ್ಕೂ ಹೆಚ್ಚು ಸ್ಥಾನ ಗೆದ್ದು, ಎನ್ಡಿಎ ಮತ್ತೆ ಅಧಿಕಾರಿಕ್ಕೆ ಬರುತ್ತದೆ ಎನ್ನುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷವು 400 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶ ತೀರಾ ಕಡಿಮೆ. ಯಾರು ಗೆಲ್ಲಬೇಕು ಎಂಬುದನ್ನು ಮತದಾರರು ನಿರ್ಧಾರಿಸುತ್ತಾರೆ. ಬಿಜೆಪಿಯ ಹೇಳಿಕೆಗೆ ತಲೆಬುಡವಿಲ್ಲ” ಎಂದು ಹೇಳಿದ್ದಾರೆ.
“ಚುನಾವಣೆಯಲ್ಲಿ ಮತದಾರರು ಮತ ನೀಡಿದರೆ, ಮಾತ್ರ ಸೀಟು ಗೆಲ್ಲಲು ಸಾಧ್ಯ. ಹೀಗಿರುವಾಗಿ, ಯಾವುದೇ ಪಕ್ಷ ಚುನಾವಣೆಗೂ ಮೊದಲೇ ಇಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಂಡರೆ, ಅದನ್ನು ದುರಹಂಕಾರ ಎನ್ನುತ್ತಾರೆ” ಎಂದಿದ್ದಾರೆ.