- ‘ದೇಶದ ಪ್ರಧಾನಿ, ಮಣಿಪುರ ಸಿಎಂ ತಳೆದಿರುವ ನಿಲುವು ನಾಚಿಗೇಡು’
- ರಾಜ್ಯ ಬಿಜೆಪಿ ಸ್ಥಿತಿ ನಾವಿಕನಿಲ್ಲದ ಹಡಗಿನಂತಾಗಿದೆ: ಐವನ್ ಡಿ ಸೋಜ
ಮಣಿಪುರದ ಘಟನೆಯ ಬಗ್ಗೆ ದೇಶದ ಪ್ರಧಾನಿ ಮತ್ತು ಅಲ್ಲಿನ ಮುಖ್ಯಮಂತ್ರಿ ತಳೆದಿರುವ ನಿಲುವು ನಾಚಿಗೇಡು. ಅಲ್ಲಿ ಹಿಂಸೆ ದೌರ್ಜನ್ಯ ಹತ್ತಿಕ್ಕುವ ಬದಲು ಪ್ರಧಾನ ಮಂತ್ರಿ ಗುಜರಾತ್, ಛತ್ತೀಸ್ ಗಡದ ಉದಾಹರಣೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಮತ್ತು ಎಐಸಿಸಿ ಮುಖಂಡ ಐವನ್ ಡಿ ಸೋಜ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಿಂಸೆ ಸೇರಿದಂತೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಯನ್ನು ನಿಯಂತ್ರಿಸಬೇಕು. ಅಲ್ಲಿನ ಆದಿವಾಸಿ ಬುಡಕಟ್ಟು ಸೇರಿದಂತೆ ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
‘ಚುನಾವಣಾ ಪ್ರಚಾರ’ಕ್ಕೆತೆರಳುವ ನಮ್ಮದೇಶದ ಪ್ರಧಾನಿ ಮಣಿಪುರದ ಸಮಸ್ಯೆ ಬಗೆಹರಿಸಲು ಎಷ್ಟು ಸಮಯ ನೀಡುತ್ತಿದ್ದಾರೆ? ಅಲ್ಲಿ ಮಾನ ವೀಯತೆಯ ಕುರುಹು ಇಲ್ಲದಂತೆ ಹಿಂಸಾಚಾರ ನಡೆಯುತ್ತಿದೆ. ದೇಶದ ಬಿಜೆಪಿಯ ಮಹಿಳಾ ಸಂಸದರು, ಸಚಿವರು ಮಹಿಳಾ ದೌರ್ಜನ್ಯದ ಬಗ್ಗೆ ಮೌನವಹಿಸಿರುವುದು ನಾಚಿಗೇಡು” ಎಂದು ಹರಿಹಾಯ್ದರು.
ನಾವಿಕನಿಲ್ಲದ ಹಡಗು ಬಿಜೆಪಿ
“ರಾಜ್ಯದಲ್ಲಿ ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಕರ್ನಾಟಕ ಹೊರತಾಗಿ ವಿಪಕ್ಷಗಳು ನಾಯಕನಿಲ್ಲದೆ ಬಜೆಟ್ ಅಧಿವೇಶನ ನಡೆದ ಉದಾಹರಣೆಗಳಿಲ್ಲ” ಎಂದರು.
“ಗಮನ ಸೆಳೆಯಬೇಕಾದ ಸದನದಲ್ಲಿ ಸಭಾಪತಿ ಅವಕಾಶ ನೀಡಿದ ನಂತರ ಮುಖಂಡರ ಜೊತೆ ಮಾತುಕತೆ ನಡೆದ ಬಳಿಕವೂ ಜನತೆ ತಲೆ ತಗ್ಗಿಸುವ ರೀತಿಯಲ್ಲಿ ಶಾಸಕರು ಕಾಗದವನ್ನು ಹರಿದು ಸಭಾಧ್ಯಕ್ಷ ರ ಮುಖದ ಮೇಲೆ, ಪೀಠದ ಮೇಲೆ ಎಸೆದು ಅನುಚಿತವಾಗಿ ವರ್ತಿಸಿದ್ದಾರೆ. ಅದಕ್ಕಾಗಿ ಅಮಾನತು ಗೊಂಡಿದ್ದಾರೆ. ಸ್ಪೀಕರ್ ಸರಿಯಾದ ಕ್ರಮ ಕೈ ಗೊಂಡಿದ್ದಾರೆ” ಎಂದು ಯು ಟಿ ಖಾದರ್ ನಡೆ ಸಮರ್ಥಿಸಿಕೊಂಡರು.